ಕುಂಬಳೆ: ಇತಿಹಾಸ ಪ್ರಸಿದ್ದ ಅಂಬಿಲಡ್ಕ ಪೂಮಾಣಿ-ಕಿನ್ನಿಮಾಣಿ ದೈವಸ್ಥಾನ ಸಮೀಪದ ಬಟ್ಟೆಕಲ್ಲು ಕಲ್ಲುರ್ಟಿ-ಕಲ್ಕುಡ ದೈವಸ್ಥಾನದ ಜೀರ್ಣೋದ್ದಾರಗೊಂಡಿದ್ದು ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಇಂದಿನಿಂದ(ಜ.24) ರಿಂದ 27ರ ವರೆಗೆ ನಡೆಯಲಿದೆ.
ಇಂದು ಸಂಜೆ 5 ರಿಂದ ಸಾಮೂಹಿಕ ಪ್ರಾರ್ಥನೆ, ದಹನ ಪ್ರಾಯಶ್ಚಿತ, ಅಘೋರ ಹೋಮ, ಬಾಧಾ ಉಚ್ಚಾಟನೆ ನಡೆಯಲಿದೆ. ಜೊತೆಗೆ ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮಿಜಿಗಳ ಆಗಮನ, ಸ್ವಾಗತ ನಡೆಯಲಿದೆ. ಶ್ರೀಗಳು ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟಿಸುವರು. 5.45ಕ್ಕೆ ಭಜನೆ, 7ಕ್ಕೆ ಕುತ್ತಿಪೂಜೆ, ಬಳಿಕ ಸನ್ಮಾನ ಸಮಾರಂಭ ನಡೆಯಲಿದೆ.
ಬುಧವಾರ ಬೆಳಿಗ್ಗೆ 8 ರಿಂದ ನಾಗಬಲಿಹೋಮ, ಆಶ್ಲೇಷಬಲಿ, ಬ್ರಹ್ಮಚಾರಿ ಆರಾಧನೆ, 9ರಿಂದ ಭಜನೆ, ಮಧ್ಯಾಹ್ನ 1 ರಿಂದ ಅನ್ನದಾನ, ಸಂಜೆ 5ಕ್ಕೆ ತಂತ್ರಿವರ್ಯ ಕರ್ಕುಳಬೂಡು ಶಂಕರನಾರಾಯಣ ಕಡಮಣ್ಣಾಯರ ಆಗಮನ, ಸ್ವಾಗತ, 5.30 ರಿಂದ ಶುದ್ದಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ದುರ್ಗಾಪೂಜೆ, ಅಂಬಿಲಡ್ಕದಿಂದ ಹೊರೆಕಾಣಿಕೆ ಆಗಮನ, ಶೇಡಿಕಾವು ಪಾರ್ತಿಸುಬ್ಬ ಯಕ್ಷಗಾನ ಕಲಾಸಂಘದ ವಿದ್ಯಾರ್ಥಿಗಳು ಹಾಗೂ ಅತಿಥಿ ಕಲಾವಿದರಿಂದ ಯಕ್ಷಗಾನ ಬಯಲಾಟ, ನೃತ್ಯ ಕಾರ್ಯಕ್ರಮ, ಅನ್ನದಾನಗಳು ನಡೆಯಲಿದೆ.
ಜ.26 ರಂದು ಬೆಳಿಗ್ಗೆ ಹಣಪತಿಹೋಮ, ಕಲಶಪೂಜೆ, ಮುಹೂರ್ತ ಪ್ರತಿಷ್ಠೆ, ಕಲಶಾಭಿಷೇಕ, ತಂಬಿಲ ಸೇವೆ, 9 ರಿಂದ ಭಜನೆ, ಮಧ್ಯಾಹ್ನ 12 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಪ್ರಸಾದ ವಿತರಣೆ, ಮಧ್ಯಾಹ್ನ 2 ರಿಂದ ಕೊಂಡೆವೂರು ಶ್ರೀಗಳ ಆಗಮನ, ಬಳಿಕ ಧಾರ್ಮಿಕ ಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡುವರು. ತಂತ್ರಿವರ್ಯ ಕರ್ಕುಳಬೂಡು ಶಂಕರನಾರಾಯಣ ಕಡಮಣ್ಣಾಯರು ಉಪಸ್ಥಿತರಿರುವರು. ಡಾ.ಅಶೋಕ್ ಕಡಮಣ್ಣಾಯ, ದೇರಣ್ಣ ರೈ ಬಟ್ಟೆಕಲ್ಲು ಮೊದಲಾದ ಪ್ರಮುಖರು ಉಪಸ್ಥಿತರಿರುವರು. ರಾತ್ರಿ 7 ರಿಂದ ಸಸಿಹಿತ್ಲು ಮೇಳದವರಿಂದ ಯಕ್ಷಗಾನ ಬಯಲಾಟ ನಡೆಯಲಿದೆ. ಆ.27 ರಂದು ಸಂಜೆ 6 ರಿಂದ ಗುಳಿಗ ಕೋಲ, ಕಲ್ಲುರ್ಟಿ-ಕಲ್ಕುಡ ದೈವದ ಕೋಲ, ಪ್ರಸಾದ ವಿತರಣೆ ನಡೆಯಲಿದೆ.
ಇಂದಿನಿಂದ ಬಟ್ಟೆಕಲ್ಲು ಕಲ್ಲುರ್ಟಿ-ಕಲ್ಲಡ್ಕ ದೈವಪ್ರತಿಷ್ಠೆ
0
January 23, 2023