ಕುಂಬಳೆ: ಪುತ್ತಿಗೆ ಗ್ರಾಮ ಪಂಚಾಯಿತಿ ವತಿಯಿಂದ ಪಂಚಾಯಿತಿ ವ್ಯಾಪ್ತಿಯ ವಿವಿಧ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಮಧ್ಯಾಹ್ನದ ಊಟದ ಪರಿಕರಗಳನ್ನು ವಿತರಿಸಲಾಯಿತು. ಚಲ್ಲಂಗಾಯ ಎಂಐಎಎಲ್ ಪಿ ಶಾಲೆಯಲ್ಲಿ ಪಂಚಾಯಿತಿ ಅಧ್ಯಕ್ಷ ಡಿ.ಸುಬ್ಬಣ್ಣ ಆಳ್ವ ವಿತರಣೆ ಉದ್ಘಾಟಿಸಿದರು. ಪಂಚಾಯಿತಿ ವ್ಯಾಪ್ತಿಯ ಪ್ರಾಥಮಿಕ ಶಾಲೆಗಳಿಗೆ ಪಾತ್ರೆ, ಅಡುಗೆ ಸಾಮಗ್ರಿ ನೀಡಲಾಗಿದೆ. ಪಂಚಾಯಿತಿ ಶಿಕ್ಷಣ ಸಮಿತಿಯ ನಿರ್ಣಯದ ಮೇರೆಗೆ ಮೂರು ಲಕ್ಷ ರೂಪಾಯಿ ವೆಚ್ಚದಲ್ಲಿ ಇವುಗಳನ್ನು ವಿತರಿಸಲಾಯಿತು.
ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಚ್.ಅಬ್ದುಲ್ ಮಜೀದ್, ಪಂಚಾಯತಿ ಸದಸ್ಯೆ ವೈ. ಶಾಂತಿ, ಜಮಾ ಅತ್ ಕಾರ್ಯದರ್ಶಿ ಟಿ.ಎ.ಮುಹಮ್ಮದ್, ವ್ಯವಸ್ಥಾಪಕ ಸಿ.ಎ.ಮುಹಮ್ಮದ್, ಮಾಜಿ ಪ್ರಬಂಧಕ ಎಸ್.ಎ.ಅಬ್ದುಲ್ಲಾ, ಅಬೂಬಕರ್ ಚಲ್ಲಂಗಾಯ, ಬ್ಲಾ.ಪಂ.ಸದಸ್ಯ ಮುಹಮ್ಮದ್ ಶರೀಫ್ ಧರ್ಮತ್ತಡ್ಕ , ಉಪಾಧ್ಯಕ್ಷ ಹಮೀದ್ ಚಳ್ಳಂಗಾಯ, ಮುಖ್ಯೋಪಾಧ್ಯಾ ಸುರೇಂದ್ರನ್ ಚಿಮೇನಿ, ಶಿಕ್ಷಕರಾದ ಕೆ.ವಿ.ದಿವಾಕರನ್, ವಿ.ಪಿ.ವಿನೋದ್, ಕೆ.ವಿ.ಜಯಪ್ರಸಾದ್, ಎಂ.ಸಜಿನಿ ಹಾಗೂ ಎಂ. ಓ.ಎಂ.ಅಬ್ದುಲ್ ರಶೀದ್ ಉಪಸ್ಥಿತರಿದ್ದರು.
ಪುತ್ತಿಗೆ ಪಂಚಾಯತ್ ಶಾಲೆಗಳಿಗೆ ಊಟದ ಪಾತ್ರೆಗಳ ವಿತರಣೆ
0
January 12, 2023
Tags