ಕುಂಬಳೆ: ಪ್ರಾಚೀನ ತುಳುನಾಡಿನ ಕುಂಬಳೆ ಸೀಮೆಯ ನಾಲ್ಕು ಪ್ರದಾನ ದೇವಾಲಯಗಳಲ್ಲಿ ಒಂದಾಗಿರುವ ಕುಂಬಳೆ ಕಣಿಪುರ ಶ್ರೀಗೋಪಾಲಕೃಷ್ಣ ದೇವಾಲಯದ ವಾರ್ಷಿಕ ಜಾತ್ರೋತ್ಸವ ಸಡಗರ ಸಂಭ್ರಮದೊಂದಿಗೆ ಧ್ವಜಾರೋಹಣಗೊಂಡು ಶನಿವಾರ ಆರಂಭಗೊಂಡಿತು.
ಶನಿವಾರ ಬೆಳಿಗ್ಗೆ 8 ರಿಂದ ಕೆ.ವಿ.ರಾಜನ್ ಮಾರಾರ್ ಪಯ್ಯನ್ನೂರು ಮತ್ತು ತಂಡದವರಿಂದ ಸೋಪಾನ ಸಂಗೀತ ಅಷ್ಟಪದಿ ಪ್ರಸ್ತುತಿ ನಡೆಯಿತು. ಬಳಿಕ ಹಸಿರುವಾಣಿ ಹೊರೆಕಾಣಿಕೆಗಳು ಆಗಮಿಸಿದವು. 10 ರಿಂದ ಬ್ರಹ್ಮಶ್ರೀದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ಶ್ರೀಬಲಿ, ಧ್ವಜಾರೋಹಣ, ತುಲಾಭಾರ ಸೇವೆ, ಮಹಾಪೂಜೆ, ನಿತ್ಯಬಲಿ, ಅನ್ನಸಂತರ್ಪಣೆಗಳು ನಡೆಯಿತು. ಸಂಜೆ 5ಕ್ಕೆ ನಡೆ ತೆರೆದು 6.30ಕ್ಕೆ ದೀಪಾರಾಧನೆ, 6.30 ರಿಂದ ವಿದುಷಿಃ ಗೀತಾ ಸಾರಡ್ಕ ಅವರಿಂದ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಿತು. ರಾತ್ರಿ ಉತ್ಸವ, ಶ್ರೀಬಲ, ರಂಗಪೂಜೆ ನಡೆಯಿತು.
ಇಂದು(ಭಾನುವಾರ) ಬೆಳಿಗ್ಗೆ 6 ರಿಂದ ಉತ್ಸವ, ಶ್ರೀಬಲಿ, 10.30 ರಂದ ತುಲಾಭಾರ ಸೇವೆ, 12. ರಿಂದ ಮಹಾಪೂಜೆ, ನಿತ್ಯಬಲಿ, ಅನ್ನದಾನ, ಸಂಜೆ 4.30 ಕ್ಕೆ ನಡೆ ತೆರೆಯುವುದು, ಸಂಜೆ 6.30ಕ್ಕೆ ದೀಪಾರಾಧನೆ, 6.30 ರಿಂದ ಭಕ್ತಿಗೀತೆ, ನಳಿನ್ ನಾರಾಯಣ ಕಾವುಗೋಳಿ ತಮಡದವರಿಂದ ಭಕ್ತಿಗೀತೆಗಳ ಗಾಯನ, 7.30 ರಿಂದ ಸಣ್ಣ ದೀಪೋತ್ಸವ, ಶ್ರೀಬಲಿ ಪೂಜೆ ನಡೆಯಲಿದೆ.
ಕಣಿಪುರದ ಜಾತ್ರೋತ್ಸವ ಆರಂಭ
0
January 15, 2023
Tags