HEALTH TIPS

'ಫುಡ್‌ ಪಾಯ್ಸನ್‌' ಪ್ರಕರಣಗಳಿಗೆ ಸಂಬಂಧಿಸಿ ಸರಕಾರ ಏನು ಕ್ರಮ ಕೈಗೊಂಡಿದೆ?: ಕೇರಳ ಹೈಕೋರ್ಟ್‌ ಪ್ರಶ್ನೆ

 

             ತಿರುವನಂತಪುರಂ: ರಾಜ್ಯದಲ್ಲಿ ಸಂಭವಿಸಿರುವ ಕಲುಷಿತ ಆಹಾರ ಸೇವನೆ (food poisoning) ಪ್ರಕರಣಗಳಿಗೆ ಸಂಬಂಧಿಸಿದಂತೆ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂದು ಗುರುವಾರ ಕೇರಳ ಹೈಕೋರ್ಟ್ (Kerala HC) ಪ್ರಶ್ನಿಸಿದೆ. ಇತ್ತೀಚಗೆ ಕೇರಳದಲ್ಲಿ ಸಂಭವಿಸಿದ್ದ ಕಲುಷಿತ ಆಹಾರ ಸೇವನೆ ಘಟನೆಯ ಕುರಿತು ವಿಚಾರಣೆ ನಡೆಸುತ್ತಿರುವ ನ್ಯಾ.ಅನಿಲ್ ಕೆ. ನರೇಂದ್ರನ್, ನ್ಯಾ. ಪಿ.ಜಿ.ಅಜಿತ್ ಕುಮಾರ್ ಅವರನ್ನೊಳಗೊಂಡಿದ್ದ ದ್ವಿಸದಸ್ಯ ನ್ಯಾಯಪೀಠವು, 'ಫುಡ್‌ ಪಾಯ್ಸನ್‌' ಘಟನೆಗಳು ವರದಿಯಾಗಿದ್ದ ಹೋಟೆಲ್‌ಗಳ ಪರವಾನಗಿಗಳನ್ನು ರದ್ದುಗೊಳಿಸಲಾಗಿದೆಯೇ ಎಂದೂ ಪ್ರಶ್ನಿಸಿತು.

                   ಈ ನಡುವೆ, ರಾಜ್ಯದಲ್ಲಿ ವರದಿಯಾಗುತ್ತಿರುವ 'ಫುಡ್‌ ಪಾಯ್ಸನ್‌' ಪ್ರಕರಣಗಳ ಕುರಿತು ಎಲ್ಲ 14 ಜಿಲ್ಲೆಗಳಲ್ಲಿ ವ್ಯಾಪಕ ತಪಾಸಣೆ ನಡೆಸಿ, ಪರವಾನಗಿ ಇಲ್ಲದೆ ನಡೆಯುತ್ತಿರುವ ಹೋಟೆಲ್‌ಗಳು ಅಥವಾ ಕಲಬೆರಕೆ ಮತ್ತು ಶುಚಿಯಿಲ್ಲದ ಆಹಾರವನ್ನು ಪೂರೈಸುತ್ತಿರುವ ಹೋಟೆಲ್‌ಗಳ ಮೇಲೆ ಕಠಿಣ ಕ್ರಮ ಜರುಗಿಸುವಂತೆ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಂಗಳವಾರ ಆದೇಶಿಸಿದ್ದಾರೆ.

                  ಇದರ ಬೆನ್ನಿಗೇ ಬುಧವಾರ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿರುವ ರಾಜ್ಯ ಆರೋಗ್ಯ ಇಲಾಖೆ, ರಾಜ್ಯಾದ್ಯಂತ ಆಹಾರ ಸುರಕ್ಷತಾ ಇಲಾಖೆ 547 ಉಪಾಹಾರ ಗೃಹಗಳ ತಪಾಸಣೆ ನಡೆಸಿದ್ದು, ಈ ಪೈಕಿ ಕಾರ್ಯಾಚರಣೆ ನಡೆಸುತ್ತಿದ್ದ 48 ಉಪಾಹಾರ ಗೃಹಗಳ ಕಾರ್ಯಾಚರಣೆಯನ್ನು ಅಶುದ್ದ ಪರಿಸರದಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಅಥವಾ ಪರವಾನಗಿ ರಹಿತವಾಗಿ ನಡೆಸುತ್ತಿರುವುದರಿಂದ ಅಮಾನತುಗೊಳಿಸಲಾಗಿದೆ. ಇದರೊಂದಿಗೆ 142 ಉಪಾಹಾರ ಗೃಹಗಳಿಗೆ ನೋಟೀಸ್ ಜಾರಿಗೊಳಿಸಿದ್ದು, ತಪಾಸಣೆ ಕಾರ್ಯ ಮುಂದುವರಿಯಲಿದೆ ಎಂದು ಹೇಳಿದೆ.

                   ಕಳೆದ ವರ್ಷದ ಜುಲೈನಿಂದ ಡಿಸೆಂಬರ್‌ವರೆಗೆ ಸುಮಾರು ಅರ್ಧ ಲಕ್ಷ ತಪಾಸಣೆ ನಡೆಸಲಾಗಿದ್ದು, 9,248 ಉಪಾಹಾರ ಗೃಹಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ ಮತ್ತು 149 ಉಪಾಹಾರ ಗೃಹಗಳನ್ನು ಮುಚ್ಚಿಸಲಾಗಿದೆ. ನಿಯಮಗಳನ್ನು ಉಲ್ಲಂಘಿಸಿ ಕಾರ್ಯಾಚರಿಸುತ್ತಿದ್ದ ಹೋಟೆಲ್‌ಗಳ ಮೇಲೆ 97.60 ಲಕ್ಷದಷ್ಟು ದಂಡ ವಿಧಿಸಲಾಗಿದೆ. ಇದಲ್ಲದೆ, ಕಳೆದ ಆರು ತಿಂಗಳಲ್ಲಿ 82,406 ಉಪಾಹಾರ ಗೃಹಗಳು ನೋಂದಾಯಿಸಿಕೊಂಡಿದ್ದು, 18,037 ಉಪಾಹಾರ ಗೃಹಗಳಿಗೆ ಪರವಾನಗಿ ನೀಡಲಾಗಿದೆ ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

              ಜನವರಿ 1ರಂದು ಪಟ್ಟಣಂತಿಟ್ಟದ ಚರ್ಚ್ ಕಾರ್ಯಕ್ರಮವೊಂದರಲ್ಲಿ ಆಹಾರ ಸೇವಿಸಿದ್ದ 100ಕ್ಕೂ ಹೆಚ್ಚು ಮಂದಿ, ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಕೊಟ್ಟಾಯಂನ ಉಪಾಹಾರ ಗೃಹದಲ್ಲಿ ಆಹಾರ ಸೇವಿಸಿದ್ದ 21 ಮಂದಿ ಆಹಾರ ನಂಜಿಗೊಳಗಾಗಿ ಅಸ್ವಸ್ಥಗೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಕೊಟ್ಟಾಯಂನಲ್ಲಿ ನಡೆದ ಶುಶ್ರೂಷಕಿಯೊಬ್ಬರ ಮೃತ್ಯು ಆಹಾರ ನಂಜಿನಿಂದ ಸಂಭವಿಸಿದೆಯೆ ಎಂಬ ಕುರಿತು ವೈದ್ಯಕೀಯ ವರದಿ ಇನ್ನೂ ದೃಢಪಡಿಸಿಲ್ಲ ಎಂದೂ ಅವರು ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries