HEALTH TIPS

ಶಬರಿಮಲೆ ಯಾತ್ರಾರ್ಥಿಗಳಿಗೆ ಹೊಸ ಷರತ್ತು: ನಟರು-ರಾಜಕಾರಣಿಗಳ ಫೋಟೋ ತರದಂತೆ ಹೈಕೋರ್ಟ್ ಆದೇಶ

 

            ಕೊಚ್ಚಿ: ಶಬರಿಮಲೆಗೆ ತೆರಳುವ ಅಯ್ಯಪ್ಪ ಭಕ್ತಾದಿಗಳು ಇತ್ತೀಚೆಗೆ ಸಿನಿಮಾ ನಟರು ಹಾಗೂ ರಾಜಕಾರಣಿಗಳ ಫೋಟೋ ಹಿಡಿದುಕೊಂಡು ಹೋಗಿ ಅದನ್ನು ಪ್ರದರ್ಶಿಸಿ ತಮ್ಮ ಕೋರಿಕೆಯನ್ನು ಹೇಳಿಕೊಳ್ಳುತ್ತಿರುವ ಪ್ರಕರಣಗಳು ಬಹಳಷ್ಟು ನಡೆದಿವೆ. ಇದೀಗ ಅಂಥದ್ದಕ್ಕೆಲ್ಲ ಕಡಿವಾಣ ಹಾಕುವಂಥ ಆದೇಶ ಕೇರಳ ಹೈಕೋರ್ಟ್​ನಿಂದಲೇ ಹೊರಬಿದ್ದಿದೆ.

                ಯಾವುದೇ ಭಕ್ತಾದಿಗಳು ನಟರು ಹಾಗೂ ರಾಜಕಾರಣಿಗಳು ಸೇರಿದಂತೆ ಯಾವುದೇ ಸೆಲೆಬ್ರಿಟಿಗಳ ದೊಡ್ಡ ಫೋಟೋ ಅಥವಾ ಪೋಸ್ಟರ್​ ಹಿಡಿದು ಶಬರಿಮಲೆಯ ಸನ್ನಿಧಾನಕ್ಕೆ ಪ್ರವೇಶ ಮಾಡುವಂತಿಲ್ಲ ಎಂದು ಕೇರಳ ಹೈಕೋರ್ಟ್ ಆದೇಶ ಮಾಡಿದೆ. ಈ ಕುರಿತು ಟ್ರಾವಂಕೂರ್ ದೇವಸ್ವಂ ಬೋರ್ಡ್​ಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

              ಶಬರಿಮಲೆಯ ಸನ್ನಿಧಿಯಲ್ಲಿ ಅಯ್ಯಪ್ಪ ಸ್ವಾಮಿಯ ದರ್ಶನ ಮಾಡಲು ಭಕ್ತರಿಗೆ ಎಲ್ಲ ಹಕ್ಕುಗಳಿವೆ. ಆದರೆ ಭಕ್ತರು ಕ್ಷೇತ್ರದ ಸಂಪ್ರದಾಯ ಹಾಗೂ ಪದ್ಧತಿಯನ್ನು ಪಾಲಿಸುವುದು ಕಡ್ಡಾಯ ಎಂದು ನ್ಯಾಯಮೂರ್ತಿ ಅನಿಲ್​ ಕೆ. ನರೇಂದ್ರನ್ ಮತ್ತು ನ್ಯಾಯಮೂರ್ತಿ ಪಿ.ಜಿ. ಅಜಿತ್​ಕುಮಾರ್ ಅವರಿದ್ದ ವಿಭಾಗೀಯ ಪೀಠ ಆದೇಶಿಸಿದೆ. ಭಕ್ತರು ಸೆಲೆಬ್ರಿಟಿಗಳ ಫೋಟೋ-ಪೋಸ್ಟರ್ ಹಿಡಿದುಕೊಂಡು ಪತಿನೆಟ್ಟಂಪಾಡಿ ಅಥವಾ ಶಬರಿಮಲೆ ಸನ್ನಿಧಾನದ ಸೋಪಾನಂ ಎಂದು ದರ್ಶನ ಪಡೆಯುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries