ಉಪ್ಪಳ: ಸವಿಜೀವನಂ ನೃತ್ಯ ಕಲಾಕ್ಷೇತ್ರ ಟ್ರಸ್ಟ್ ಕೊಡಿಯಾಲಬೈಲ್ ಮಂಗಳೂರು ಇವರು ಕನ್ನಡ ಸಂಸ್ಕøತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ನೃತ್ಯ ವರ್ಷ-2023 ಅಂಗವಾಗಿ ಇತ್ತೀಚೆಗೆ ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದ ಗಾಯತ್ರಿ ಮಂಟಪದಲ್ಲಿ ಭರತನಾಟ್ಯ ಪ್ರದರ್ಶನ ಪ್ರಸ್ತುತ ಪಡಿಸಿದರು.
ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ದಿವ್ಯಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮವನ್ನು ಅನೇಕ ಕಲಾಭಿಮಾನಿಗಳು ವೀಕ್ಷಿಸಿ ಸಂತಸಪಟ್ಟರು.