ಪತ್ತನಂತಿಟ್ಟ: ಶಬರಿಮಲೆಯ ಮಾಳಿಗÀಪ್ಪುರಂ ಬಳಿ ಮದ್ದುಗುಂಡು ತುಂಬುವ ವೇಳೆ ಸ್ಫೋಟ ಸಂಭವಿಸಿದೆ. ಅಪಘಾತದಲ್ಲಿ ಮೂವರು ಗಾಯಗೊಂಡಿದ್ದಾರೆ.
ಎ.ಆರ್.ಜಯಕುಮಾರ್, ಅಮಲ್ ಮತ್ತು ರಾಜೇಶ್ ಗಾಯಗೊಂಡಿದ್ದಾರೆ. ಮೂವರನ್ನೂ ಸನ್ನಿಧಾನಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸನ್ನಿಧಿಯಲ್ಲಿ ನಿತ್ಯವೂ ಸಿಡಿಮದ್ದು ತುಂಬುವವರು ಅವರೇ ಆಗಿದ್ದಾರೆ.
ಒಬ್ಬ ವ್ಯಕ್ತಿಗೆ ಶೇ.60ರಷ್ಟು ಸುಟ್ಟಗಾಯಗಳು ಮತ್ತು ಇತರ ಇಬ್ಬರಿಗೆ ಶೇ.40ರಷ್ಟು ಸುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ. ಯಾತ್ರಿಕರ ಪ್ರದೇಶದಲ್ಲಿ ಅವಘಡ ಸಂಭವಿಸಿಲ್ಲ. ಅಪಘಾತಕ್ಕೆ ಕಾರಣವೇನು ಎಂದು ತನಿಖೆ ನಡೆಸಲಾಗುವುದು ಎಂದು ಡ್ಯೂಟಿ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ.
ಶಬರಿಮಲೆಯಲ್ಲಿ ಮದ್ದುಗುಂಡು ತುಂಬಿಸುವ ವೇಳೆ ಸ್ಪೋಟ: ಮೂವರಿಗೆ ಗಾಯ
0
January 02, 2023
Tags