HEALTH TIPS

ಸಾಲದ ಸುಳಿಯಲ್ಲಿರುವ ರಾಜ್ಯ ಸರ್ಕಾರದ ವಿರುದ್ದ ಶ್ವೇತಪತ್ರ ಹೊರಡಿಸಿದ ಪ್ರತಿಪಕ್ಷ ನಾಯಕನಿಗೆ ಮುಲಾಮು: ವಿಡಿ ಸತೀಶನ್ ಗೆ ಸರ್ಕಾರದಿಂದ ಇನ್ನೋವಾ ಕ್ರಿಸ್ಟಾ ಮಂಜೂರು


          ತಿರುವನಂತಪುರಂ: ಪ್ರತಿಪಕ್ಷ ನಾಯಕ ವಿ.ಡಿ.ಸತೀಸನ್‍ಗೆ ಹೊಸ ಇನ್ನಾವೊ ಕ್ರಿಸ್ಟಾ ಕಾರಿನಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ.
     ರಾಜ್ಯ ಸರ್ಕಾರ 22 ಲಕ್ಷ ರೂಪಾಯಿ ಮೌಲ್ಯದ ಕಾರನ್ನು ಮಂಜೂರು ಮಾಡಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ರಮೇಶ್ ಚೆನ್ನಿತ್ತಲ ಅವರು ಬಳಸುತ್ತಿದ್ದ ಕಾರನ್ನು ವಿ.ಡಿ.ಸತೀಶನ್  ಬಳಸುತ್ತಿದ್ದು, ಕಾರು 2.75 ಲಕ್ಷ ಕಿಲೋಮೀಟರ್ ಸಂಚರಿಸಿದೆ ಎಂಬುದು ಸರ್ಕಾರ ನೀಡಿರುವ ವಿವರಣೆ. ಈ ಕಾರು ಪ್ರವಾಸೋದ್ಯಮ ಇಲಾಖೆಯ ಒಡೆತನದಲ್ಲಿದೆ.
      ಮೊನ್ನೆ ಪ್ರತಿಪಕ್ಷಗಳು ತನ್ನ ಶ್ವೇತಪತ್ರದಲ್ಲಿ ಪಿಣರಾಯಿ ಸರ್ಕಾರ ಕೇರಳವನ್ನು ಸಾಲದ ಬಲೆಯಲ್ಲಿ ಸಿಲುಕಿಸಿದೆ ಎಂದು ಆರೋಪಿಸಿತ್ತು. ಮುಖ್ಯಮಂತ್ರಿಗಳ ಪರಿವಾರಕ್ಕೆ ಆಂಬ್ಯುಲೆನ್ಸ್ ಸೇರಿದಂತೆ 28 ಭದ್ರತಾ ವಾಹನಗಳನ್ನು ಸಿದ್ಧಪಡಿಸಲಾಗಿದ್ದು, ಮುಖ್ಯಮಂತ್ರಿ ಪ್ರಯಾಣಿಸಲು ಏಳು ಕಾರುಗಳನ್ನು ಖರೀದಿಸಲಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು. ‘ಸಾಲ ಬಂಧನದಲ್ಲಿ  ಕೇರಳ ಸರ್ಕಾರ’ ಎಂಬ ಶೀರ್ಷಿಕೆಯೊಂದಿಗೆ ಬಿಡುಗಡೆ ಮಾಡಿರುವ ಶ್ವೇತಪತ್ರದಲ್ಲಿ, ತೆರಿಗೆ ವಂಚಕರಿಗೆ ಸರ್ಕಾರ ಸಹಕಾರ ನೀಡುತ್ತಿದ್ದು, ರಾಜ್ಯದ ಸಾಲ 4 ಲಕ್ಷ ಕೋಟಿಯಾಗಿದೆ ಎಂದು ವಿಪಕ್ಷ ನಾಯಕ ಆರೋಪಿಸಿದ್ದರು. ಸರ್ಕಾರ ಮಾಡಿರುವ ಹಲವು ಕೆಲಸಗಳು ದುಂದುವೆಚ್ಚವಾಗಿದೆ ಎಂಬ ಟೀಕೆಯನ್ನೂ ಪ್ರತಿಪಕ್ಷಗಳು ಎತ್ತಿದ್ದವು.
              ಇದೇ ವೇಳೆ ವಿಡಿ ಸತೀಶನ್ ಅವರಿಗೆ ಹೊಸ ಕಾರನ್ನು ಖರೀದಿಸಲಾಗಿದೆ. ಪ್ರವಾಸೋದ್ಯಮ ಇಲಾಖೆಯ ನಿಯಮದಂತೆ ಮೂರು ವರ್ಷಕ್ಕಿಂತ ಹಳೆಯದಾದ ವಾಹನಗಳನ್ನು ವಿಐಪಿ ಬಳಕೆಗೆ ಅನುಮತಿಸಲಾಗುವುದಿಲ್ಲ. ಇದರ ಪ್ರಕಾರ ಸಚಿವರು ಮತ್ತು ವಿರೋಧ ಪಕ್ಷದ ನಾಯಕರ ಎಲ್ಲಾ ವಾಹನಗಳನ್ನು ಬದಲಾಯಿಸಲಾಗುತ್ತದೆ. ಆದರೆ ಅಂಬಾಸಿಡರ್ ಕಾರುಗಳು ಬಳಕೆಯಲ್ಲಿದ್ದ ಸಮಯದಲ್ಲಿ ಇದು ನಿಯಮವಾಗಿತ್ತು ಎಂಬುದು ಗಮನಿಸಬೇಕಾದ ವಿಷಯ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries