ಕಾಸರಗೋಡು: 2016ರ ಮೇ 19ರಂದು ಎಡರಂಗದ ಚುನಾವಣಾ ವಿಜಯೋತ್ಸವದ ವೇಳೆ ಮಾಜಿ ಸಚಿವ ಇ.ಚಂದ್ರಶೇಖರನ್ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಆರೋಪಿ ಸಿಪಿಎಂ ಮುಖಂಡರು ಬಿಜೆಪಿ-ಆರ್ ಎಸ್ ಎಸ್ ಗೆ ಪಕ್ಷಾಂತರಗೊಂಡಿರುವ ಹಿನ್ನೆಲೆಯಲ್ಲಿ ಎಡರಂಗದಲ್ಲಿ ಒಡಕು ಉಂಟಾಗಿದೆ.
ಪ್ರಕರಣದಲ್ಲಿ 12 ಆರೆಸ್ಸೆಸ್-ಬಿಜೆಪಿ ಕಾರ್ಯಕರ್ತರನ್ನು ನ್ಯಾಯಾಲಯ ಬಿಡುಗಡೆ ಮಾಡಿದೆ.
ಕಾಞಂಗಾಡ್ ನ ಮಾವುಂಗಲ್ ಮೂಲೆಯಲ್ಲಿ ಇ.ಚಂದ್ರಶೇಖರನ್ ವಿರುದ್ಧ ದಾಳಿ ನಡೆದಿತ್ತು. ಚಂದ್ರಶೇಖರನ್ ಅವರ ಎಡಗೈಗೆ ಗಾಯವಾಗಿ ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ನ್ಯಾಯಾಲಯದ ಕೊಠಡಿಯಲ್ಲಿ ಆರೋಪಿಗಳನ್ನು ಗುರುತಿಸಿದ್ದೇನೆ ಎಂದು ಇ.ಚಂದ್ರಶೇಖರನ್ ಹೇಳಿದಾಗ, ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಸೇರಿದಂತೆ ಸಾಕ್ಷಿಗಳು ನ್ಯಾಯಾಲಯದಲ್ಲಿ ತಮ್ಮ ಹೇಳಿಕೆಗಳನ್ನು ಬದಲಾಯಿಸಿದರು, ಅವರು ಆರೋಪಿಗಳು ಎಂದು ಖಚಿತವಿಲ್ಲ ಎಂದಿರುವರು. ಆರೋಪಿಗಳನ್ನು ಗುರುತಿಸಿದ 2 ಸಾಕ್ಷಿಗಳು ಪ್ರಕರಣದ ಆರೋಪಿಗಳ ಪರವಾಗಿ ಹೇಳಿಕೆ ಬದಲಾಯಿಸಿದ್ದಾರೆ.
''ಇದೀಗ ನ್ಯಾಯಾಲಯದ ಪಂಜರದಲ್ಲಿ ಆರೋಪಿ ಬಿಜೆಪಿ ಕಾರ್ಯಕರ್ತರೂ ಇದ್ದಾರೆ. ಆದರೆ ಹೆಸರು ಗೊತ್ತಿಲ್ಲ.' ಎಂದು ಇ.ಚಂದ್ರಶೇಖರನ್ ನ್ಯಾಯಾಲಯದಲ್ಲಿ ಹೇಳಿದ್ದಾರೆ.
'ಸಚಿವರು ಪ್ರಯಾಣಿಸುತ್ತಿದ್ದ ತೆರೆದ ಜೀಪಿನಲ್ಲೇ ನಾನು ಕೂಡ ಪ್ರಯಾಣಿಸುತ್ತಿದ್ದೆ. ಗ್ಯಾಂಗ್ನಲ್ಲಿ 100 ಕ್ಕೂ ಹೆಚ್ಚು ಜನರಿದ್ದ ಕಾರಣ ಆರೋಪಿಗಳು ತಂಡದ ಭಾಗವಾಗಿದ್ದಾರೆಯೇ ಎಂದು ನಾನು ಹೇಳಲಾರೆ. ಆರೋಪಿಗಳನ್ನು ಗುರುತಿಸಿದ್ದೇನೆ ಎಂದು ನಾನು ಪೆÇಲೀಸರಿಗೆ ಹೇಳಿಕೆ ನೀಡಿಲ್ಲ ಎಂದು ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಟಿ.ಕೆ.ರವಿ ನ್ಯಾಯಾಲಯಕ್ಕೆ ತಿಳಿಸಿದರು.
ಜನರ ಗುಂಪು ದಾಳಿ ಮಾಡಿದೆ. ನಿರ್ದಿಷ್ಟವಾಗಿ ಜನರನ್ನು ಗುರುತಿಸಲಾರೆ. ದಾಳಿಕೋರರಲ್ಲಿ ಈ ಆರೋಪಿಗಳು ಇದ್ದಾರೆಯೇ ಎಂಬುದು ತಿಳಿದಿಲ್ಲ. ಪೆÇಲೀಸರಿಗೆ ಅಂತಹ ಹೇಳಿಕೆ ನೀಡಿಲ್ಲ. ಆರೋಪಿಗಳ ಪೈಕಿ ರಾಹುಲ್, ಬಾಬು ಮತ್ತು ಅರುಣ್ ಗ್ಯಾಂಗ್ ನಲ್ಲಿದ್ದವರು ಎಂದು ನಾನು ಹೇಳಿಕೆ ನೀಡಿಲ್ಲ’ ಎಂದು ಸಿಪಿಎಂ ಮಡಿಕೈ ಸೌತ್ ಎಲ್ ಸಿ ಸದಸ್ಯ ಅನಿಲ್ ಬಂಗಳಂ ನ್ಯಾಯಾಲಯಕ್ಕೆ ತಿಳಿಸಿರುವರು.
ಇ ಚಂದ್ರಶೇಖರನ್ ಮೇಲಿನ ಹಲ್ಲೆ ಪ್ರಕರಣ: ಬಿಜೆಪಿ-ಆರ್ಎಸ್ಎಸ್ ಕಾರ್ಯಕರ್ತರಿಗಾಗಿ ಹೇಳಿಕೆ ಬದಲಿಸಿದ ಸಿಪಿಎಂ ಸಾಕ್ಷಿಗಳು: ಎಡರಂಗದಲ್ಲಿ ಬಿರುಕು
0
January 31, 2023