HEALTH TIPS

ಸಾಮಾಜಿಕ ಅಭಿವೃದ್ಧಿ ಮತ್ತು ಸಾಂಸ್ಕøತಿಕ ಹೂಡಿಕೆ: ಎಸ್.ವೈ.ಎಸ್.ಉಪ್ಪಳ ವಲಯ ಯುವ ಸಂಸತ್ ಫೆಬ್ರವರಿ 12 ರಂದು


             ಉಪ್ಪಳ: ಎಸ್‍ವೈಎಸ್ ಉಪ್ಪಳ ವಲಯದ ವತಿಯಿಂದ ಸಾಮಾಜಿಕ ಅಭಿವೃದ್ಧಿ ಸಾಂಸ್ಕೃತಿಕ ಹೂಡಿಕೆ ಎಂಬ ವಿಷಯದ ಮೇಲೆ ಯುವ ಸಂಸತ್ತು ಫೆ.12ರ ಭಾನುವಾರ ಬೆಳಗ್ಗೆ 9ರಿಂದ ಸೋಂಕಾಲ್ ನಲ್ಲಿ ನಡೆಯಲಿದೆ.
         ಬೆಳಗ್ಗೆ 9 ಕ್ಕೆ  ಅಧ್ಯಕ್ಷ ಕೆ.ಎಂ.ಮುಹಮ್ಮದ್ ಹಾಜಿ ಧ್ವಜಾರೋಹಣ ನೆರವೇರಿಸುವರು. 9:15ಕ್ಕೆ ವಲಯಾಧ್ಯಕ್ಷ ಮೂಸಾ ಸಖಾಫಿ ಪೈವಳಿಕೆ ಅಧ್ಯಕ್ಷತೆಯಲ್ಲಿ ಸಮಸ್ತ ಕೇಂದ್ರದ ಮುಶಾವರ ಸದಸ್ಯ ಮುಹಮ್ಮದಲಿ ಸಖಾಫಿ ತೃಕರಿಪುರ ಸಂಘಟಿಸಲಿದ್ದಾರೆ. ಎಸ್‍ಎಸ್‍ಎಫ್ ರಾಜ್ಯ ಹಣಕಾಸು ಕಾರ್ಯದರ್ಶಿ ಸೈಯದ್ ಮುನೀರುಲ್ ಅಹ್ದಲ್ ತಂಙಳ್ ಪ್ರಾಸ್ತಾವಿಕ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಕೆ ಅಬ್ದುಲ್ ಕಲಾಂ ಮಾವೂರು ಸಾಮಾಜಿಕ ಅಭಿವೃದ್ಧಿ ಸಾಂಸ್ಕೃತಿಕ ಹೂಡಿಕೆ ವಿಷಯದ ಕುರಿತು ಮತ್ತು ಮೂಸಾ ಸಖಾಫಿ ಕಳತ್ತೂರ್ ಅವರು ಸಾಮಾಜಿಕ ಅಭಿವೃದ್ಧಿ ಇಸ್ಲಾಮಿಕ್ ದೃಷ್ಟಿಕೋನಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.ಸ್ವಾಗತ ಕೂಟವನ್ನು ಸಿದ್ದೀಕ್ ಲತೀಫಿ ಚಿಪ್ಪಾರ್, ಮುಸ್ಲಿಂ ಜಮಾತ್ ವಲಯ ಅಧ್ಯಕ್ಷ ಎಂ.ಪಿ.ಮುಹಮ್ಮದ್, ಎಸ್.ಎಸ್.ಎಫ್. ಅಧ್ಯಕ್ಷ ಶಫೀಕ್ ಸಖಾಫಿ,ಕೆ.ಎಂ.ಅಬ್ದುಲ್ಲಾ.ಹಾಜಿ, ರಶೀದ್ ಅಮಾನಿ ಮೊದಲಾದವರು ಉಪಸ್ಥಿತರಿರುವರು. 10:45ಕ್ಕೆ ವಿಷನ್ ಕ್ವೆಸ್ಟ್ ನಲ್ಲಿ ಸಾಮಾಜಿಕ ಕ್ರಿಯಾಶೀಲತೆಯ ಮೂಲ ಚಿಂತನೆಗಳು-ಸಿ.ಕೆ.ಎಂ.ಫಾರೂಕ್ ಮಲಪ್ಪುರಂ,ಸಾಮಾಜಿಕ ಕ್ರಿಯಾಶೀಲತೆಯ ಸಾಧ್ಯತೆಗಳು ಮತ್ತು ಆಚರಣೆಗಳು-ಅಬ್ದುಲ್ ಹಕೀಂ ಸಖಾಫಿ ಆರಿಯಲ್ಲಿ ವಿಚಾರ ಮಂಡಿಸಲಿದ್ದಾರೆ. ಅಹ್ಮದ್ ಶಿರಿನ್ ಉದುಮ, ಅಬ್ದು ಸಮದ್, ಅಬ್ದು ಸಮದ್ ಮದನಿ ಮಣಿಅಂಬಾರ ಮತ್ತಿತರರು ಕೃಷಿ ಕಾರ್ಯ ಮತ್ತು ಉದ್ಯಮಶೀಲತಾ ಕಾರ್ಯಾಗಾರಕ್ಕೆ ಬೆಳಗ್ಗೆ 11:45ಕ್ಕೆ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ 2 ಕ್ಕೆ ಸ್ಥಳೀಯ ಇತಿಹಾಸ ಅಧಿವೇಶನದಲ್ಲಿ ಅಬ್ದುಲ್ ರೆಹಮಾನ್ ನಈಮಿ, ಇಬ್ರಾಹಿಂ ಖಲೀಲ್ ಸಖಾಫಿ, ಆಸಿಫ್ ಹಿಮಾಮಿ ಮೊದಲಾದವರು ಪ್ರಬಂಧ ಮಂಡನೆ ಮಾಡಲಿದ್ದಾರೆ. ಬಳಿಕ ಸುಲೈಮಾನ್ ಕರಿವೆಳ್ಳೂರು, ಅಬೂಬಕರ್ ಕಾಮಿಲ್ ಸಖಾಫಿ ಮೊದಲಾದವರೊಂದಿಗೆ ಸಂದರ್ಶನ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಫೆÇೀಕಸ್ ಪಾಯಿಂಟ್ ನಲ್ಲಿ ಶಿಕ್ಷಣ, ಆರೋಗ್ಯ, ಪರಿಸರ ಮುಂತಾದ ವಿಷಯಗಳ ಕುರಿತು ಎಸ್ ಎಸ್ ಎಫ್ ರಾಜ್ಯಾಧ್ಯಕ್ಷ ಫಿರ್ದೌಸ್ ಸಖಾಫಿ ಕಣ್ಣೂರು ಹಾಗೂ ಡಾ.ನೂರುದ್ದೀನ್ ರಾಝಿ ಅಬ್ದುಲ್ ಕರೀಂ ದರ್ಭಾರ್ ಕಟ್ಟ ಮಾತನಾಡಲಿದ್ದಾರೆ. ಮಂಜೇಶ್ವರಂ ಶಾಸಕ - ಎಕೆಎಂ ಆಶ್ ರಫ್ ಅವರು ಸಂಜೆ 4:30 ಕ್ಕೆ ಸಂವಾದದಲ್ಲಿ ಭಾಗಿಯಾಗಲಿದ್ದಾರೆ. ಅಬ್ದುಲ್ ರಹ್ಮಾನ್ ಸಖಾಫಿ ಚಿಪ್ಪಾರ್ ಮಾಡಲಿದ್ದಾರೆ. ಸಂಜೆ 5:30ಕ್ಕೆ ಎಸ್‍ಎಸ್‍ಎಫ್‍ನ ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಎನ್.ಜಾಫರ್ ಲಿಬರಲ್ ಮಾಡರ್ನಿಟಿ ಮತ್ತು ಮಹಿಳಾ ಕುಟುಂಬ ಕುರಿತು ಉಪನ್ಯಾಸ ನೀಡುವರು.
       ಸಂಜೆ 6:30ಕ್ಕೆ ದಿ ಮೆಸೇಜ್ ಸಂಗಮದಲ್ಲಿ ಕೆ.ಅಬ್ದುಲ್ ರಶೀದ್ ನಾರಿಕ್ ಅವರೊಂದಿಗೆ “ಯುವಕರು ಒಂದು ನಿಲುವುÉ” ಮತ್ತು “ಸರಿಯಾದ ಹಾದಿಯಲ್ಲಿ ಹೆಜ್ಜೆಗಳು” ವಿಷಯದ ಕುರಿತು ಅನಸ್ ಅಮಾನಿ ಪುಷ್ಪಗಿರಿ ಉಪನ್ಯಾಸ ನೀಡಲಿದ್ದಾರೆ. ಸಮಾರೋಪದಲ್ಲಿ ಅನಸ್ ಸಿದ್ದಿಕಿ ಉಪನ್ಯಾಸ ನೀಡಲಿದ್ದಾರೆ. ಹಾಫ್ಳ್ ಅನ್ವರ್ ಅಲಿ ಸಖಾಫಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಯ್ಯದ್ ಯಾಸೀನ್ ಉಬೈದುಲ್ಲಾ ತಂಗಳ್ ಬಾಯರ್ ಸಮಾರೋಪ ಪ್ರಾರ್ಥನೆಯನ್ನು ನೆರವೇರಿಸಲಿದ್ದಾರೆ.
        ಕಾರ್ಯಕ್ರಮದ ಯಶಸ್ವಿಗಾಗಿ ಸ್ವಾಗತ ತಂಡದ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಹಳೆಯ ಪರಂಪರೆಯನ್ನು ಗಮನದಲ್ಲಿಟ್ಟುಕೊಂಡು ಓಲಾ ಪಂಡಲ್ ಮತ್ತು ಅದಕ್ಕೆ ಸಂಬಂಧಿಸಿದ ಸೌಲಭ್ಯಗಳನ್ನು ಸಿದ್ಧಪಡಿಸಲಾಗಿದೆ. ಆತ್ಮಯಾನಂ, ಓಲಾ ವರವ, ತಾರೈ ಜಮಾವೋ, ಸ್ಮೃತಿ ಯಾತ್ರೆ, ಧ್ವಜರವಂ, ಮಕ್ಕಳಸಂಸತ್ತು, ಸಂದೇಶ ಪ್ರಯಾಣ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
        ಈ ಬಗ್ಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಎಸ್ ವೈ ಎಸ್ ವಲಯ ಅ|ಧ್ಯಕ್ಷ ಮೂಸಾ ಸಖಾಫಿ ಪೈವಳಿಕೆ,  ಪ್ರ.ಕಾರ್ಯದರ್ಶಿ ಉಮರುಲ್ ಫಾರೂಕ್ ಕುಬಣೂರು, ಮುಹಮ್ಮದ್, ಕೆ.ಎಂ.ಮುಹಮ್ಮದ್ ಹಾಜಿ ಸೋಂಕಾಲ್, ಸಿದ್ದೀಕ್, ಲತೀಫ್ ಚಿಪ್ಪಾರ್, ಸ್ವಾದಿಖ್ ಅವಳ ಉಪಸ್ಥಿತರಿದ್ದರು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries