ಕಾಸರಗೋಡು/ ಕೊಚ್ಚಿ: ಕಾಸರಗೋಡಿನ ಮುಸ್ಲಿಂ ವ್ಯಕ್ತಿಯೊಬ್ಬ ಕ್ರೈಸ್ತರ ಪವಿತ್ರ ಗ್ರಂಥವನ್ನು ಅವಮಾನಿಸಿ ಎಣ್ಣೆ ಸುರಿದು ಉರಿಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ಘಟನೆ ಖಂಡನೀಯ ಹಾಗೂ ಆತಂಕಕಾರಿಯಾಗಿದೆ ಎಂದು ಕೆಥೋಲಿಕ್ ಕಾಂಗ್ರೆಸ್ ಕೇಂದ್ರ ಸಮಿತಿ ಹೇಳಿದೆ.
ಜಗತ್ತಿನ ಬೆಳಕಾಗಿರುವ, ಪ್ರೀತಿಯ ಸಂದೇಶಗಳನ್ನು ಯಾವುದೇ ಬಿಕ್ಕಟ್ಟಿನಲ್ಲೂ ಎದೆಯ ಹತ್ತಿರ ಹಿಡಿದುಕೊಳ್ಳುವುದಾಗಿ ಕ್ಯಾಥೋಲಿಕ್ ಕಾಂಗ್ರೆಸ್ ಪ್ರತಿಜ್ಞೆ ಮಾಡಿತು.
ಕ್ರಿಸ್ ಮಸ್ ದಿನದಂದು ಗೋದಲಿ ಪುಡಿಗಟ್ಟಿದ ವ್ಯಕ್ತಿಯೇ ಮತ್ತೆ ಇಂತಹ ನೋವಿನ ಕೃತ್ಯಕ್ಕೆ ಮುಂದಾಗಿರುವುದು ಅನುಮಾನದಿಂದ ನೋಡುವಂತಾಗಿದೆ. ಇಂತಹ ಘಟನೆಗಳು ಕೇರಳದಲ್ಲಿ ಬೆಳೆಯುತ್ತಿರುವ ಉಗ್ರಗಾಮಿ ಮನಸ್ಥಿತಿ ಮತ್ತು ಅಸಹಿಷ್ಣುತೆಗೆ ನಿದರ್ಶನವೂ ಹೌದು. ಕೇರಳವನ್ನು ಗಲಭೆಗಳ ನಾಡನ್ನಾಗಿ ಮಾಡಲು ಯಾರೋ ಉದ್ದೇಶಪೂರ್ವಕವಾಗಿ ಸಂಚು ನಡೆಸುತ್ತಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಕ್ಯಾಥೋಲಿಕ್ ಕಾಂಗ್ರೆಸ್ ನಿರ್ಣಯಿಸಿದೆ.
ಕೇರಳದಲ್ಲಿ ಧಾರ್ಮಿಕ ಮತ್ತು ಕೋಮು ಸೌಹಾರ್ದತೆ ಗಟ್ಟಿಗೊಳಿಸಲು ಸದಾ ಮುಂಚೂಣಿಯಲ್ಲಿರುವ ಕ್ರೈಸ್ತ ಸಮುದಾಯದ ಜಾತ್ಯಾತೀತತೆಯ ಲಾಭ ಪಡೆಯಲು ಕೆಲವರು ಯತ್ನಿಸಿದಾಗ ಕಾನೂನು ರಕ್ಷಣೆ ನೀಡುವ ಹೊಣೆಗಾರಿಕೆ ಸರಕಾರಕ್ಕಿದೆ. ಜಗತ್ತಿನಾದ್ಯಂತ ಕ್ರೈಸ್ತ ಸಮುದಾಯಕ್ಕೆ ನೋವಾಗಿ, ಭಾರತದ ಜಾತ್ಯತೀತ ಪರಂಪರೆಗೆ ಕಳಂಕವಾಗಿ ಪರಿಣಮಿಸಿರುವ ಈ ಘಟನೆಯನ್ನು ಖಂಡಿಸಲು ಸಾಮಾಜಿಕ, ರಾಜಕೀಯ ಮುಖಂಡರು ಹಾಗೂ ಇತರ ಸಮುದಾಯಗಳು ಇನ್ನೂ ಮುಂದಾಗದಿರುವುದು ಅತ್ಯಂತ ಭಯಾನಕವಾಗಿದೆ. ಕೇರಳದಲ್ಲಿ ಧಾರ್ಮಿಕ ಮೂಲಭೂತವಾದ, ಕೋಮುವಾದ ಮತ್ತು ಭಯೋತ್ಪಾದಕ ಚಟುವಟಿಕೆಗಳು ಆಳವಾದ ಹಿಡಿತವನ್ನು ತೆಗೆದುಕೊಳ್ಳುತ್ತಿರುವ ಅಭಿಪ್ರಾಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಮತ್ತು ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು. ಕೇರಳವನ್ನು ಗಲಭೆಗಳ ನಾಡನ್ನಾಗಿ ಪರಿವರ್ತಿಸುವ ಮತ್ತು ಧಾರ್ಮಿಕ ಸೌಹಾರ್ದತೆಯನ್ನು ಒಡೆಯುವ ಮೂಲಕ ಅಸ್ಥಿರತೆ ಸೃಷ್ಟಿಸುವ ಕ್ರಮಗಳನ್ನು ಸಮರ್ಥವಾಗಿ ವಿರೋಧಿಸಲು ಕಾನೂನು ಪರಿಪಾಲಕರು ಮತ್ತು ಸರ್ಕಾರ ಸಿದ್ಧವಾಗಬೇಕಿದೆ ಎಂದಿದೆ.
ಇಂತಹ ಘಟನೆಗಳು ಮರುಕಳಿಸದಂತೆ ಅಪರಾಧಿಗಳನ್ನು ಬಂಧಿಸುವುದು ಮಾತ್ರವಲ್ಲ, ತಪ್ಪಿತಸ್ಥರಿಗೆ ಮಾದರಿ ಶಿಕ್ಷೆ ನೀಡಲು ಸರ್ಕಾರ ಬದ್ಧವಾಗಿರಬೇಕು ಎಂದು ಕೆಥೋಲಿಕ್ ಕಾಂಗ್ರೆಸ್ ಕೇಂದ್ರ ಸಮಿತಿ ಆಗ್ರಹಿಸಿದೆ.ಆಡಳಿತಾತ್ಮಕ ನಿಗಾ ಮತ್ತು ಕಾನೂನು ರಕ್ಷಣೆಯನ್ನು ಖಚಿತಪಡಿಸಿಕೊಳ್ಳಬೇಕು. ಸಮಾಜದಲ್ಲಿ ಶಾಂತಿಯುತ ಸಹಬಾಳ್ವೆಗಾಗಿ ಎಲ್ಲಾ ಜನರು ಕೈಜೋಡಿಸಬೇಕು. ನೋವಿನ ಘಟನೆಗಳ ನಂತರ ಸಾಂತ್ವನ ನೀಡದ, ನೋವನ್ನು ಉಂಟುಮಾಡದ ಸಂವಿಧಾನಾತ್ಮಕ ರಕ್ಷಣೆ ಮತ್ತು ಕಾನೂನು ರಕ್ಷಣೆಯನ್ನು ಜಾರಿಗೊಳಿಸಲು ಕ್ಯಾಥೋಲಿಕ್ ಕಾಂಗ್ರೆಸ್ ಸರ್ಕಾರವನ್ನು ಕೇಳಿದೆ.
ಈ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕೆಥೋಲಿಕ್ ಕಾಂಗ್ರೆಸ್ ಗೌರವಾನ್ವಿತ ಪ್ರಧಾನ ಮಂತ್ರಿಗಳು, ಕೇಂದ್ರ ಗೃಹ ಸಚಿವರು ಮತ್ತು ಗೌರವಾನ್ವಿತ ಕೇರಳ ಮುಖ್ಯಮಂತ್ರಿಗಳಿಗೆ ಪತ್ರವನ್ನು ಕಳುಹಿಸಿದೆ.
ಕ್ಯಾಥೋಲಿಕ್ ಕಾಂಗ್ರೆಸ್ ಅಧ್ಯಕ್ಷ ಅಡ್ವ. ಬಿಜು ಪರಾಯನ್ನಿಲಂ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಮಿತಿ ಸಭೆಯಲ್ಲಿ ನಿರ್ದೇಶಕ ಫಾ. ಜಿಯೋ ಕಡವಿ, ಪ್ರಧಾನ ಕಾರ್ಯದರ್ಶಿ ರಾಜೀವ್ ಜೋಸೆಫ್, ಖಜಾಂಚಿ ಡಾ. ಜೋಬಿ ಕಾಕಶ್ಶೇರಿ, ಕೇಂದ್ರ ಹಾಗೂ ಧರ್ಮಪ್ರಾಂತ್ಯದ ಅಧಿಕಾರಿಗಳು ಮತ್ತಿತರರು ಮಾತನಾಡಿದರು.
ಬೈಬಲ್ ಸುಟ್ಟ ಘಟನೆಯನ್ನು ಖಂಡಿಸಿದ ಕ್ಯಾಥೋಲಿಕ್ ಕಾಂಗ್ರೆಸ್
0
February 01, 2023