HEALTH TIPS

ರಾಜ್ಯದಲ್ಲಿ ಕೆಂಗಲ್ಲು ಕ್ವಾರಿಗಗಳ ಅನಿರ್ದಿಷ್ಟಾವಧಿ ಮುಷ್ಕರ


                ತಿರುವನಂತಪುರ: ರಾಜ್ಯದಲ್ಲಿ ಕೆಂಗಲ್ಲು ಕ್ವಾರಿಗಳು ಅನಿರ್ದಿμÁ್ಟವಧಿ ಮುಷ್ಕರ ನಡೆಸುತ್ತಿವೆ. ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕ್ವಾರಿಗಳನ್ನು ಬಂದ್ ಮಾಡಿ ಮುಷ್ಕರ ನಡೆಸಲಾಗುತ್ತಿದೆ.
                      ಸಮಸ್ಯೆ ಬಗೆಹರಿಸದೆ ಕೆಂಪು ಕ್ವಾರಿ ತೆರೆಯುವುದಿಲ್ಲ ಎಂಬ ನಿಲುವು ಮಾಲೀಕರದ್ದು.
           ಮಂಜೂರಾದ ಭೂಮಿಯಲ್ಲಿ ಕಲ್ಲುಗಣಿಗಾರಿಕೆಗೆ ಪರವಾನಗಿ ನೀಡುವುದು, ಲೈಸೆನ್ಸ್ ಗಾಗಿ ಭಾರಿ ದಂಡ ವಿಧಿಸುವುದನ್ನು ನಿಲ್ಲಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಕೆಂಗಲ್ಲು ಕ್ವಾರಿ ಮಾಲೀಕರು ಮುಂದಿಟ್ಟಿದ್ದಾರೆ. ಪೋಲೀಸರು ವಶಪಡಿಸಿರುವ ಲಾರಿಗಳನ್ನು ದಂಡ ಕಟ್ಟಿಯೂ ತಿಂಗಳುಗಟ್ಟಲೆ ತಾಲೂಕು, ಗ್ರಾಮ ಕಚೇರಿಗಳಲ್ಲಿ ಇರಿಸಿರುವುದರಿಂದ ಕಾರ್ಮಿಕರು ಹಸಿವಿನಿಂದ ನರಳುವಂತಾಗಿದೆ ಎಂದು ಹೇಳಲಾಗಿದೆ. ಈ ಕುರಿತು ಕೈಗಾರಿಕಾ ಸಚಿವರು ಹಾಗೂ ಇತರರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಮುಷ್ಕರದಿಂದ ಕೆಂಪು ಕ್ವಾರಿಗಳನ್ನು ಬಂದ್ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.
                ಬೇಡಿಕೆಗಳನ್ನು ಅಂಗೀಕರಿಸುವವರೆಗೆ ರಾಜ್ಯದಲ್ಲಿ ಕೆಂಗಲ್ಲು ಕ್ವಾರಿಗಳನ್ನು ನಡೆಸುವುದಿಲ್ಲ ಎಂದು ದೃಢ ನಿಲುವು ಮಾಲಿಕರದ್ದು. ರಾಜ್ಯದಲ್ಲಿ ಕೆಂಗಲ್ಲು ಕ್ವಾರಿಗಳನ್ನು ಮುಚ್ಚುವುದರಿಂದ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಲಿದೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries