HEALTH TIPS

ಅಶ್ಲೀಲ ಸಂದೇಶ ರವಾನೆ ಪ್ರಕರಣ: ಉಚ್ಚಾಟನೆಗೊಂಡ ಸಿಪಿಎಂ ಸ್ಥಳೀಯ ಕಾರ್ಯದರ್ಶಿ


             ಕಾಸರಗೋಡು: ವಾಟ್ಸ್ಆ್ಯಪ್ ಗ್ರೂಪ್‍ನಲ್ಲಿ ಅಶ್ಲೀಲ ಸಂದೇಶ ರವಾನಿಸಿದ ಸಿಪಿಎಂ ಸ್ಥಳೀಯ ಕಾರ್ಯದರ್ಶಿಯನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.
              ಕಾಸರಗೋಡು ಪಾಕಂ ಸ್ಥಳೀಯ ಕಾರ್ಯದರ್ಶಿ ರಾಘವನ್ ವಿರುದ್ಧ ಕ್ರಮ ಕೈಗೊಂಡು ಉಚ್ಚಾಟಿಸಲಾಯಿತು. ಜಿಲ್ಲಾ ನಾಯಕತ್ವ ಕ್ರಮ ಕೈಗೊಂಡಿದೆ. ರಾಘವನ್ ಪೆರಿಯ ಜೋಡಿ ಕೊಲೆ ಪ್ರಕರಣದ ಆರೋಪಿಯೂ ಹೌದು.
    ನಾಲ್ಕು ದಿನಗಳ ಹಿಂದೆ ನಡೆದ ಘಟನೆ ಇದಾಗಿದೆ.  ಸ್ಥಳೀಯ ಕಾರ್ಯದರ್ಶಿ ರಾಘವನ್ ಅವರು ಪಕ್ಷದ ಸ್ವಂತ ವಾಟ್ಸಾಪ್ ಗ್ರೂಪ್‍ಗೆ ಅಶ್ಲೀಲ ಸಂದೇಶ ಕಳುಹಿಸಿದ್ದರು.  ಇದು ಮಹಿಳೆಯರನ್ನು ಒಳಗೊಂಡ ಗುಂಪಾಗಿತ್ತು. ಅವಳಿ ಕೊಲೆ ಪ್ರಕರಣದ ವಿಚಾರಣೆಗಾಗಿ ಕೊಚ್ಚಿಗೆ ತೆರಳುತ್ತಿದ್ದಾಗ  ಆಕಸ್ಮಿಕವಾಗಿ ಗ್ರೂಪ್ ಗೆ ಮಹಿಳಾ ನಾಯಕಿಗೆ ಬಂದ ಸಂದೇಶ ತಲುಪಿದೆ. ಇದರೊಂದಿಗೆ ಘಟನೆ ವಿವಾದಕ್ಕೀಡಾಗಿದ್ದು ರಾಘವನ್ ವಿರುದ್ಧ ಗುಂಪಿನ ಮಹಿಳೆಯರು ಮುಗಿಬಿದ್ದರು.
             ಇದಾದ ಬಳಿಕ ರಾಘವನ್ ವಿವರಣೆ ನೀಡಲು ಮುಂದಾದರು. ನಂಬರ್ ಬದಲಾಗಿದ್ದು, ಪತ್ನಿಗೆ ಕಳಿಸಿದ ಸಂದೇಶ ರವಾನಿನೆಯಾಗಿತ್ತೆಂದು ತಿಳಿಸಿದ್ದರು. ಆದರೆ, ಶಾಖಾ ಕಾರ್ಯದರ್ಶಿ ಸೇರಿದಂತೆ ಸ್ಥಳೀಯ ಕಾರ್ಯದರ್ಶಿ ವಿರುದ್ಧ ಧ್ವನಿ ಎತ್ತಿ ಕ್ರಮ ಕೈಗೊಳ್ಳಬೇಕಾಯಿತು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries