ಕಾಸರಗೋಡು: ಜಿಲ್ಲೆಯಲ್ಲಿ ಫೆಬ್ರವರಿ ತಿಂಗಳಿಂದ ಪಡಿತರ ಅಂಗಡಿಗಳ ಮೂಲಕ ಸಾರವರ್ಧಿತ ಅಕ್ಕಿ ವಿತರಣೆ ಆರಂಭವಾಗಿದೆ. 100 ಕೆಜಿ ಸಾಮಾನ್ಯ ಅಕ್ಕಿಗೆ ಒಂದು ಕೆಜಿ ಸಾರವರ್ಧಿತ ಅಕ್ಕಿಯನ್ನು ಸೇರಿಸಿ ವಿತರಿಸಲಾಗುತ್ತದೆ. ಕಬ್ಬಿಣ, ಪೋಲಿಕ್ ಆಮ್ಲ ಮತ್ತು ವಿಟಮಿನ್ ಬಿ12 ನ್ನು ಸೇರಿಸಿ ಬಲವರ್ಧಿತ ಅಕ್ಕಿಯನ್ನು ತಯಾರಿಸಲಾಗುತ್ತದೆ. ಈ ಅಕ್ಕಿಯ ಪ್ರಯೋಜನವೆಂದರೆ ರಕ್ತಹೀನತೆ, ಕುಂಠಿತ ಬೆಳವಣಿಗೆ ಮತ್ತು ವಿಟಮಿನ್ ಬಿ ಕೊರತೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳಿಗೆ ಇದು ಅತ್ಯುತ್ತಮ ಪರಿಹಾರ ಒದಗಿಸುತ್ತದೆ.
ಸಾರವರ್ಧಿತ ಅಕ್ಕಿ ಬೇಯಿಸುವುದು ಹೇಗೆ ಎಂಬ ಜಾಗೃತಿ ಕಾರ್ಯಕ್ರಮದ ಭಾಗವಾಗಿ ಜಿಲ್ಲೆಯ ವಿವಿದೆಡೆ 12 ಕೇಂದ್ರಗಳಲ್ಲಾಗಿ ಫೆ.14ರಿಂದ 21ರ ವರೆಗೆ ಅಡುಗೆ ಪ್ರಾತ್ಯಕ್ಷಿಕೆ ನೀಡಲಾಗುವುದು. ಫೆಬ್ರವರಿ 14 ರಂದು ಮಂಜೇಶ್ವರ ಬ್ಲಾಕ್ನ ಮಂಗಲ್ಪಾಡಿ ಬೆಳಗ್ಗೆ 10 ರಿಂದ ಮಧ್ಯಾಹ್ನ 12.30 ರವರೆಗೆ, ಮಂಜೇಶ್ವರದಲ್ಲಿ ಮಧ್ಯಾಹ್ನ 2.30 ರಿಂದ ಸಂಜೆ 5 ರವರೆಗೆ, 15 ರಂದು ಕಾಸರಗೋಡು ಬ್ಲಾಕ್ ನ ಕುಂಬಳೆಯಲ್ಲಿ ಬೆಳಿಗ್ಗೆ 10 ರಿಂದ 12.30 ರವರೆಗೆ, ಚೆಂಗಳದಲ್ಲಿ ಮಧ್ಯಾಹ್ನ 2.30 ರಿಂದ ಸಂಜೆ 5 ರ ವರೆಗೆ, 16 ರಂದು ಕಾರಡ್ಕ ಬ್ಲಾಕ್ ನ ಕುತ್ತಿಕೋಲ್ ನಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 12.30, ಬೇಡಡ್ಕದಲ್ಲಿ ಮಧ್ಯಾಹ್ನ 2.30 ರಿಂದ ಸಂಜೆ 5 ರ ವರೆಗೆ, 17 ರಂದು ಪರಪ್ಪ ಬ್ಲಾಕ್ ನ ಕೋಡೋಂ ಬೆಳ್ಳೂರಿನಲ್ಲಿ ಬೆಳಗ್ಗೆ 10 ರಿಂದ 12.30 ರವರೆಗೆ, ವೆಸ್ಟ್ ಎಳೇರಿಯಲ್ಲಿ ಮಧ್ಯಾಹ್ನ 2.30 ರಿಂದ 5 ರವರೆಗೆ, 20 ರಂದು ಕಾಞಂಗಾಡ್ ಬ್ಲಾಕ್ ನ ಅಜಾನೂರ್ ನಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 12.30 ರವರೆಗೆ ಪಳ್ಳಿಕ್ಕೆರೆಯಲ್ಲಿ ಮಧ್ಯಾಹ್ನ 2.30 ರಿಂದ 5 ರ ವರೆಗೆ, 21 ರಂದು ನೀಲೇಶ್ವರ ಬ್ಲಾಕ್ ನ ಪಿಲಿಕೋಡ್ ನಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 12.30 ರವರೆಗೆ ಮತ್ತು ತ್ರಿಕರಿಪುರದಲ್ಲಿ ಮಧ್ಯಾಹ್ನ 2.30 ರಿಂದ ಸಂಜೆ 5 ರ ವರೆಗೆ ಅಕ್ಕಿ ಬೇಯಿಸುವ ಕಾರ್ಯಕ್ರಮದ ಪ್ರಾತ್ಯಕ್ಷಿಕೆ ನಡೆಯಲಿದೆ. ಪಂಚಾಯತಿ ಕೇಂದ್ರಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರೂ ಭಾಗವಹಿಸಬಹುದು ಎಂದು ಜಿಲ್ಲಾ ಪೂರೈಕೆ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಸಾರವರ್ಧಿತ ಅಕ್ಕಿ ವಿತರಣೆ ಆರಂಭ
0
February 06, 2023
Tags