HEALTH TIPS

ಪಂದಳಂ ಸಹಕಾರಿ ಬ್ಯಾಂಕ್ ನಲ್ಲಿ ಲಕ್ಷ ವಂಚನೆ; ಆಪಾದಿತ ಸಕ್ರಿಯ ಸಿಪಿಎಂ ಕಾರ್ಯಕರ್ತ; ತನಿಖೆಗೆ ಆಗ್ರಹಿಸಿ ಬಿಜೆಪಿ ನಡೆಸಿದ ಧರಣಿಯಲ್ಲಿ ಘರ್ಷಣೆ


             ಪತ್ತನಂತಿಟ್ಟ: ಪಂದಳಂ ಸರ್ವೀಸ್ ಕೋ ಆಪರೇಟಿವ್ ಬ್ಯಾಂಕ್‍ನಲ್ಲಿ ಲಕ್ಷಗಟ್ಟಲೆ ಚಿನ್ನಾಭರಣ ವಂಚನೆ ನಡೆದಿರುವುದು ಬಯಲುಗೊಂಡಿದೆ. ಸಿಪಿಎಂ ಕಾರ್ಯಕರ್ತನೊಬ್ಬ ಬ್ಯಾಂಕ್‍ನಲ್ಲಿ ಗಿರವಿ ಇಟ್ಟಿದ್ದ ಚಿನ್ನಾಭರಣವನ್ನು ಬೇರೆ ಬ್ಯಾಂಕ್‍ಗಳಲ್ಲಿ ಗಿರವಿ ಇಟ್ಟು ಲಕ್ಷಾಂತರ ರೂಪಾಯಿ ವಂಚನೆ ಎಸಗಲಾಗಿದೆ.
            ಗ್ರಾಹಕರು ಚಿನ್ನಾಭರಣ ಪಡೆಯಲು ಬ್ಯಾಂಕ್‍ಗೆ ಬಂದಾಗ ಚಿನ್ನ ನಾಪತ್ತೆಯಾಗಿತ್ತು. ನಂತರ ಬ್ಯಾಂಕ್ ಅಧಿಕಾರಿಗಳು ನಡೆಸಿದ ತನಿಖೆಯಲ್ಲಿ ಘಟನೆ ಬೆಳಕಿಗೆ ಬಂದಿದೆ. ಬ್ಯಾಂಕ್‍ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಉದ್ಯೋಗಿ ಅರ್ಜುನ್ ಪ್ರಮೋದ್ ವಂಚನೆ ಮಾಡಿರುವುದು ಪತ್ತೆಯಾಗಿದೆ. ಲಾಕರ್‍ನಿಂದ 70 ಪವನ್ ಚಿನ್ನಾಭರಣ ಕದ್ದ ಅರ್ಜುನ್ ಪ್ರಮೋದ್, ಪಂದಳಂ ಮತ್ತು ಕೈಪತ್ತೂರಿನ ಬ್ಯಾಂಕ್‍ಗಳಲ್ಲಿ ಗಿರವಿ ಇಟ್ಟು ವಂಚನೆ ಮಾಡಿದ್ದ. ಬಳಿಕ ಆತನನ್ನು ಬ್ಯಾಂಕ್‍ನಿಂದ ವಜಾ ಮಾಡಲಾಗಿದೆ. ಸಿಪಿಎಂ ಕಾರ್ಯಕರ್ತನಾಗಿರುವ ನೌಕರ ಬ್ಯಾಂಕ್‍ನಿಂದ ಚಿನ್ನ ತೆಗೆದುಕೊಂಡು ಹೋಗಿರುವುದು ಗೊತ್ತಿದ್ದರೂ ಬ್ಯಾಂಕಿನ ಆಡಳಿತ ಸಮಿತಿ ಪೋಲೀಸರಿಗೆ ದೂರು ನೀಡದೆ ಪ್ರಕರಣವನ್ನು ಇತ್ಯರ್ಥಪಡಿಸಲು ಯತ್ನಿಸುತ್ತಿದೆ.
          ಅರ್ಜುನ್ ಪ್ರಮೋದ್ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿ ವಂಚನೆಗೆ ಸಹಕರಿಸಿದವರನ್ನು ತನಿಖೆಗೊಳಪಡಿಸಬೇಕು ಎಂದು ಆಗ್ರಹಿಸಿ ವಿವಿಧ ರಾಜಕೀಯ ಪಕ್ಷಗಳು ಪ್ರತಿಭಟನೆ ನಡೆಸಿದವು. ಪಂದಳಂ ಕೋ-ಆಪರೇಟಿವ್ ಬ್ಯಾಂಕ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರನ್ನು ಡಿವೈಎಫ್‍ಐಗಳು ತಡೆದು ಥಳಿಸಿದ್ದಾರೆ. ಬ್ಯಾಂಕ್‍ನಿಂದ ಚಿನ್ನಾಭರಣ ತೆಗೆದ ನೌಕರನ ವಿರುದ್ಧ ಕ್ರಮ ಕೈಗೊಳ್ಳದೆ ಬ್ಯಾಂಕ್ ತೆರೆಯಲು ಬಿಡುವುದಿಲ್ಲ ಎಂಬ ನಿಲುವನ್ನು ಬಿಜೆಪಿ ತೆಗೆದುಕೊಂಡಾಗ, ಬ್ಯಾಂಕ್ ತೆರೆಯಲು ಯತ್ನಿಸಿದ ಡಿವೈಎಫ್‍ಐ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರೊಂದಿಗೆ ವಾಗ್ವಾದ ನಡೆಸಿದರು. ನಂತರ ಪೆÇಲೀಸರು ಬಂದು ಕಾರ್ಯಕರ್ತರನ್ನು ಬಂಧಿಸಿ ಹೊರ ಹಾಕಿದರು.
           ಚಿನ್ನ ಗೆದ್ದ ಅರ್ಜುನ್ ಪ್ರಮೋದ್ ಸಿಪಿಎಂನ ಮಾಜಿ ಪಂದಳಂ ಪ್ರದೇಶ ಸಮಿತಿ ಕಾರ್ಯದರ್ಶಿ ಹಾಗೂ ಮಾಜಿ ಬ್ಲಾಕ್ ಪಂಚಾಯತ್ ಅಧ್ಯಕ್ಷ ಪ್ರಮೋದ್ ಕುಮಾರ್ ಅವರ ಪುತ್ರ. ಆತ ಸಿಪಿಎಂ ಪಕ್ಷದ ಸಕ್ರಿಯ ಕಾರ್ಯಕರ್ತ. ಪಂದಳಂನಲ್ಲಿ ಭೂಮಾಫಿಯಾದ ಪ್ರಮುಖ ಕೊಂಡಿ ಎನ್ನಲಾದ ಅರ್ಜುನ್, ಲಪಟಾಯಿಸಿದ ಹಣದಲ್ಲಿ ಜೆಸಿಬಿ ಹಾಗೂ ಬಸ್‍ಗಳನ್ನು ಖರೀದಿಸಿದ್ದ ಎನ್ನಲಾಗಿದೆ. ಸಿಪಿಎಂ ಶಿಫಾರಸಿನ ಮೇರೆಗೆ ಸಹಕಾರಿ ಬ್ಯಾಂಕ್‍ಗೆ ಸೇರಿರುವುದೂ ಕಂಡುಬಂದಿದೆ. ಅರ್ಜುನ್‍ನ ಗಂಭೀರ ಅಪರಾಧದ ಹೊರತಾಗಿಯೂ ಕಾನೂನು ಕ್ರಮದಿಂದ ರಕ್ಷಿಸುವುದು ಪಕ್ಷದೊಂದಿಗಿನ ಈ ನಿಕಟತೆಯಾಗಿದೆ. ಇμÉ್ಟೂಂದು ದೊಡ್ಡ ವಂಚನೆ ನಡೆದಿದ್ದರೂ ಸಿಪಿಎಂ ನಿಯಂತ್ರಿತ ಆಡಳಿತ ಮಂಡಳಿ ಅಥವಾ ಬ್ಯಾಂಕ್ ಕಾರ್ಯದರ್ಶಿ ಪೆÇಲೀಸರಿಗೆ ಮಾಹಿತಿ ನೀಡದೆ ಘಟನೆಯನ್ನು ಮರೆಮಾಚಲು ಯತ್ನಿಸುತ್ತಿದ್ದಾರೆ. ಈ ನಡುವೆ ಪಂದಳಂನ ಕೆಲವು ಸಿಪಿಎಂ ಮುಖಂಡರು ಕೊಂಡೊಯ್ದ ಚಿನ್ನವನ್ನು ಹಿಂದಿರುಗಿಸುವ ಮೂಲಕ ಪ್ರಕರಣವನ್ನು ಇತ್ಯರ್ಥಪಡಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಪೆÇಲೀಸರು ಕೂಡ ಬ್ಯಾಂಕ್  ದೂರು ನೀಡದೆ ಕ್ರಮ ಕೈಗೊಳ್ಳುವಂತಿಲ್ಲ.
         ಕ್ಲರ್ಕ್ ಅಥವಾ ಅದಕ್ಕಿಂತ ಮೇಲ್ಪಟ್ಟ ಹುದ್ದೆಯನ್ನು ಹೊಂದಿರುವವರಿಗೆ ಮಾತ್ರ ಬ್ಯಾಂಕ್‍ನಲ್ಲಿ ನಗದು ಮತ್ತು ಲಾಕರ್‍ಗಳನ್ನು ನಿರ್ವಹಿಸಲು ಅವಕಾಶವಿದೆ ಎಂಬುದು ನಿಯಮ. ಆದರೆ ಪಂದಳಂ ಬ್ಯಾಂಕ್‍ನಲ್ಲಿ ಪ್ಯೂನ್ ಆಗಿರುವ ಅರ್ಜುನ್ ಪ್ರಮೋದ್ ಲಾಕರ್ ನಿರ್ವಹಣೆ ಹೇಗೆ ಮಾಡಿದ ಎಂದು ಗ್ರಾಹಕರು ಕೇಳುತ್ತಿದ್ದಾರೆ. ವಿವಿಧ ಸಹಕಾರಿ ಬ್ಯಾಂಕ್‍ಗಳಲ್ಲಿ ಠೇವಣಿ ಇಟ್ಟಿರುವ ಹಣ ವಾಪಸ್ ಬರದಿರುವ ಸುದ್ದಿಯ ಬೆನ್ನಲ್ಲೇ ಗ್ರಾಹಕರು ಬ್ಯಾಂಕ್‍ನಲ್ಲಿ ಇಟ್ಟಿರುವ ಚಿನ್ನ ಸುರಕ್ಷಿತವಾಗಿಲ್ಲ ಎಂಬ ಆತಂಕದಲ್ಲಿದ್ದಾರೆ. ಈ ನಡುವೆ ಪಂದಳಂ ಸರ್ವೀಸ್ ಕೋ-ಆಪರೇಟಿವ್ ಬ್ಯಾಂಕ್‍ನಲ್ಲಿ ವಂಚನೆ ನಡೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಎರಡು ಬಾರಿ ಬ್ಯಾಂಕ್‍ನ ಇಬ್ಬರು ನೌಕರರು ಮೃತರ ಪಿಂಚಣಿಯನ್ನು ಕಬಳಿಸಿ ವಿವಾದಕ್ಕೆ ಸಿಲುಕಿದ್ದರು. ಬಳಿಕ ರಾಜಿ ಸಂಧಾನ ನಡೆದು ಘಟನೆ ಇತ್ಯರ್ಥವಾಯಿತು.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries