ಕಾಸರಗೋಡು: ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದ ಶ್ರೀ ವಿಷ್ಣುಮಂಗಲ ದೇವಸ್ಥಾನದ ವಾರ್ಷಿಕೋತ್ಸವಕ್ಕೆ ಸೋಮವಾರ ಧ್ವಜಾರೋಹಣ ನಡೆಯಿತು. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿ ಅವರ ದಿವ್ಯ ಉಪಸ್ಥಿತಿಯಲ್ಲಿ ಬ್ರಹ್ಮಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಅವರ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಿತು.
ಈ ಸಂದರ್ಭ ಭೂತಬಲಿ, ಹಸಿರುವಾಣಿ ಮೆರವಣಿಗೆ, ಉಗ್ರಾಣ ಮುಹೂರ್ತ, ಸಂಜೆ ದೀಪೋತ್ಸವ ನಡೆಯಿತು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಭೂಮಿಕಾ ಪ್ರತಿಷ್ಠಾನ ಉಡುಪಮೂಲೆ ವತಿಯಿಂದ ನೃತ್ಯ ಸಿಂಚನ ನಡೆಯಿತು.
15ರಂದು ರಾತ್ರಿ 8ಕ್ಕೆ ನಡು ದೀಪೋತ್ಸವ, 16ರಂದು ರಾತ್ರಿ 9ಕ್ಕೆ ಬೆಡಿ ಉತ್ಸವ, ಶ್ರೀ ಮಠದ ಎದುರು ಪುಷ್ಪರಥೋತ್ಸವ ನಡೆಯುವುದು. ಈ ಸಂದರ್ಭ ಉದ್ಯಮಿ ಸತೀಶ್ರಾವ್ ದಂಪತಿ ಎಡನೀರು ಅವರ ಕೊಡುಗೆಯನ್ವಯ ನಿರ್ಮಿಸಲಾದ ಮಹಾದ್ವಾರದ ಉದ್ಘಾಟನೆ, ಉಮೇಶ್ ಕುಮಾರ್ ಎಡನೀರು ಕೊಡುಗೆಯಾಗಿ ನಿರ್ಮಿಸಲಾದ ಶ್ರೀದೇವರ ಕಟ್ಟೆಯ ಸಮರ್ಪಣೆ, ಶ್ರೀ ತಾರಾ ಸುಧೀಂದ್ರ ಮುಂಬೈ ಕೊಡುಗೆಯಾಗಿ ನೀಡಿದ ಉತ್ಸವ ಮೂರ್ತಿಯ ಸಮರ್ಪಣಾ ಕಾರ್ಯ ನಡೆಯಲಿರುವುದು. ಫೆ. 17ರಂದು ಬೆಳಗ್ಗೆ 8.30ಕ್ಕೆ ಶಯನೋದ್ಘಾಟನೆ, ರಾತ್ರಿ ಶ್ರೀ ಮಠದ ಎದುರು ನೃತ್ಯೋತ್ಸವ, ಕೆರೆಯಲ್ಲಿ ತೆಪ್ಪೋತ್ಸವ, ಅವಭೃತಸ್ನಾನ, ಧ್ವಜಾವರೋಹಣ ನಡೆಯಲಿರುವುದು. ಉತ್ಸವದ ಅಂಗವಾಗಿ ಪ್ರತಿ ದಿನ ಸಂಜೆ 6.30ರಿಂದ ವಿವಿಧ ಸಾಂಸ್ಕøತಿಕ ವಐವಿಧ್ಯ ನಡೆಯಲಿರುವುದು.
ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದ ವಾರ್ಷಿಕ ಉತ್ಸವಕ್ಕೆ ಚಾಲನೆ
0
February 14, 2023
Tags