HEALTH TIPS

ಸಂಪೂರ್ಣ ಡಿಜಿಟಲ್ ಸಾಕ್ಷರತೆ: ಕಾಸರಗೋಡಲ್ಲಿ ಆರ್.ಪಿ ಗಳಿಗೆ ತರಬೇತಿ


                   ಕಾಸರಗೋಡು: ಕಾಸರಗೋಡು ಜಿಲ್ಲಾ ಪಂಚಾಯತ್ ವತಿಯಿಂದ ಸಂಪನ್ಮೂಲ ವ್ಯಕ್ತಿಗಳಿಗಾಗಿ ಸಮಗ್ರ ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು,  ಜಿಲ್ಲಾ ಪಂಚಾಯತ್ ಅಧ್ಯಕ್ಷ ಪಿ. ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ತರಬೇತಿಯಲ್ಲಿ ಕೈಟ್ ಜಿಲ್ಲಾ ಸಂಯೋಜಕ ಕೆ.ಶಂಕರನ್ ತರಗತಿ ತೆಗೆದುಕೊಂಡರು, ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಶೆರಿನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನವಕೇರಳ ಮಿಷನ್ ಜಿಲ್ಲಾ ಸಂಯೋಜಕ ಕೆ.ಬಾಲಕೃಷ್ಣನ್ ಯೋಜನೆ ಬಗ್ಗೆ ವಿವರಿಸಿದರು. ಜಿಲ್ಲಾ ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಡಾ.ಪಿ.ಪ್ರಭಾಕರನ್, ಬಡತನ ನಿರ್ಮೂಲನಾ ವಿಭಾಗದ ಯೋಜನಾ ನಿರ್ದೇಶಕ ಕೆ.ಪ್ರದೀಪನ್ ಜಿಲ್ಲಾ ಮಾಹಿತಿ ಅಧಿಕಾರಿ ಎಂ. ಮಧುಸೂದನನ್, ಅಕ್ಷಯ ಜಿಲ್ಲಾ ಸಹಾಯಕ ಸಂಯೋಜಕ ಬಿ. ಸಂತೋμï ಕುಮಾರ್, ಕೆ.ಕೆ.ರಾಘವನ್ ಮಾತನಾಡಿದರು. ಜಿಲ್ಲಾ ಸಾಕ್ಷರತಾ ಆಯೋಗದ ಸಂಯೋಜಕ ಪಿ.ಎನ್.ಬಾಬು ಸ್ವಾಗತಿಸಿ, ಮಾಸ್ಟರ್ ಕೆ.ವಿ.ವಿಜಯನ್ ವಂದಿಸಿದರು.
            ‘ಎತ್ತರವನ್ನು ಗೆಲ್ಲುವ’ ಎಂಬ ಸಂದೇಶದೊಂದಿಗೆ ಸಂಪೂರ್ಣ ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮದಲ್ಲಿ ಪಂಚಾಯತ್‍ಗಳಲ್ಲಿ ತಲಾ ಇಬ್ಬರು ಸಂಪನ್ಮೂಲ ವ್ಯಕ್ತಿಗಳಿಗೆ ತರಬೇತಿ ನೀಡಲಾಯಿತು. ಈಗ ಪ್ರತಿ ವಾರ್ಡ್‍ನಿಂದ ಎರಡು ಡಿಜಿ ಬ್ರಿಗೇಡ್ ತಂಡಗಳನ್ನು ಆಯ್ಕೆ ಮಾಡಿ ಪಂಚಾಯತ್ ಮಟ್ಟದಲ್ಲಿ ತರಬೇತಿ ನೀಡಲಾಗುತ್ತದೆ. ಕಂಪ್ಯೂಟರ್, ಇಂಟರ್‍ನೆಟ್, ಸರ್ಕಾರಿ ಸೇವೆಗಳಿಗೆ ಮೊಬೈಲ್ ಪೋನ್ ಬಳಕೆ ಮತ್ತು ಬ್ಯಾಂಕಿಂಗ್ ವ್ಯವಹಾರಗಳ ಕುರಿತು ತರಬೇತಿ ನೀಡಲಾಗುವುದು. ಅಕ್ಷಯ ಕೇಂದ್ರಗಳ ಸಹಯೋಗದಲ್ಲಿ ಪಂಚಾಯತ್ ಗ್ರಂಥಾಲಯಗಳಲ್ಲಿ ತರಬೇತಿ ನೀಡಲು ಪಂಚಾಯತ್ ಮಟ್ಟದ ಸಂಘಟನಾ ಸಮಿತಿಗಳನ್ನು ರಚಿಸಲಾಗುವುದು.
        ಜಿಲ್ಲಾ ಪಂಚಾಯತ ಕಾಸರಗೋಡು ಜಿಲ್ಲಾ ಸಾಕ್ಷರತಾ ಮಿಷನ್ ಮೂಲಕ ಜಿಲ್ಲೆಯ ಎಲ್ಲಾ ವಾರ್ಡ್‍ಗಳಲ್ಲಿ 30 ರಿಂದ 60 ವರ್ಷ ವಯಸ್ಸಿನವರಿಗೆ ಡಿಜಿಟಲ್ ಸಾಕ್ಷರತೆಯನ್ನು ಕಲಿಸುವ ಪೂರ್ವಭಾವಿಯಾಗಿ ಪ್ರತಿ ಪಂಚಾಯತ್ ಮತ್ತು ಪುರಸಭೆಯಿಂದ ಇಬ್ಬರು ಕಂಪ್ಯೂಟರ್ ಸಾಕ್ಷರ ಆರ್‍ಪಿಗಳಿಗೆ ತರಬೇತಿ ನೀಡಲಾಯಿತು.
            ಜಿಲ್ಲೆಯಲ್ಲಿ ಐವತ್ತು ಮನೆಗಳಿಗೆ ಒಂದು ತರಗತಿಯಂತೆ 7000 ಡಿಜಿಟಲ್ ಸಾಕ್ಷರತಾ ತರಗತಿಗಳನ್ನು ಆರಂಭಿಸಲಾಗುತ್ತಿದೆ. ಐದು ದಿನ ತಲಾ ಹತ್ತು ಗಂಟೆ ತಲಾ ಎರಡು ಗಂಟೆ ಕಲಿಸಲು ನಿರ್ಧರಿಸಲಾಗಿದೆ. ಕೆಳ ಹಂತದಲ್ಲಿ ತರಗತಿ ತೆಗೆದುಕೊಳ್ಳುವವರನ್ನು ಡಿಜಿ ಬ್ರಿಗೇಡ್ ಎಂದು ಕರೆಯಲಾಗುತ್ತದೆ. ದೇಶದಲ್ಲೇ ಪ್ರಥಮ ಬಾರಿಗೆ ಜಿಲ್ಲೆಯಲ್ಲಿ ಸಂಪೂರ್ಣ ಡಿಜಿಟಲ್ ಸಾಕ್ಷರತಾ ಯೋಜನೆ ಘೋಷಣೆಯಾಗಿದೆ.ಜಿಲ್ಲೆಯ ಖ್ಯಾತ ಸಾಹಸಿ ಪಿ.ಎನ್.ಸೌಮ್ಯ ಅವರನ್ನು ಯೋಜನೆಯ ರಾಯಭಾರಿಯಾಗಿ ಘೋಷಿಸಲಾಗಿದೆ. ಈ ವರ್ಷದ ಯೋಜನೆಯಲ್ಲಿ ಎಲ್ಲಾ ಸ್ಥಳೀಯ ಸ್ವ-ಆಡಳಿತ ಸಂಸ್ಥೆಗಳ ಐದು ವಾರ್ಡ್‍ಗಳಲ್ಲಿ ಈ ಯೋಜನೆ ಜಾರಿಯಾಗಲಿದ್ದು, ಮುಂದಿನ ಆರ್ಥಿಕ ವರ್ಷದಲ್ಲಿ ಉಳಿದ ವಾರ್ಡ್‍ಗಳಲ್ಲಿ ಯೋಜನೆ ಜಾರಿಯಾಗಲಿದೆ.





Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries