HEALTH TIPS

ಉಳಿಯ ಶ್ರೀ ಧನ್ವಂತರಿ ಸನ್ನಿಧಿಯಲ್ಲಿ ಕಳಿಯಾಟ ಮಹೋತ್ಸವಕ್ಕೆ ಸಿದ್ದತೆ


                   ಮಧೂರು : ಉಳಿಯ ಶ್ರೀ ಧನ್ವಂತರಿ ಮಹಾವಿಷ್ಣು ದೇವರ ಸನ್ನಿಧಿಯಲ್ಲಿ ಕಳಿಯಾಟ ಮಹೋತ್ಸವ ಮಾರ್ಚ್ 1 ರಿಂದ 3ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಮಾರ್ಚ್ 1 ರಂದು ಬೆಳಗ್ಗೆ 7 ರಿಂದ ಧಾರ್ಮಿಕ ವಿಧಿ ವಿಧಾನಗಳು ಪ್ರಾರಂಭವಾಗಲಿದೆ. ಸಂಜೆ 6 ಕ್ಕೆ ಅವಳಿ ಕುಟ್ಟಿಚ್ಚಾತನ್ ದೈವಗಳ ಕೋಲ, ರಾತ್ರಿ 10 ರಿಂದ ಪಂಜುರ್ಲಿ ದೈವದ ಕೋಲ ನಡೆಯಲಿದೆ. ಮಾರ್ಚ್ 2 ರಂದು ಬೆಳಗ್ಗೆ 9 ರಿಂದ ಇತ್ತಿಕಟ್ಟೆ ಚಾಮುಂಡಿ ದೈವದ ಕೋಲ, ಮಧ್ಯಾಹ್ನ 12ಕ್ಕೆ ಅರೆಯಾಲ್ ಚಾಮುಂಡಿ ದೈವದ ಕೋಲ, ರಾತ್ರಿ 10 ಕ್ಕೆ ಕಾಡೆತ್ತಿ ದೈವದ ಕೋಲ ಜರಗಲಿದೆ.
          ಮಾರ್ಚ್ 3 ರಂದು ಬೆಳಗ್ಗೆ 6 ಕ್ಕೆ ರಕ್ತಶ್ವರೀ ದೈವದ ಕೋಲ, 11 ಕ್ಕೆ ಪಡ್ಡೆಯಿ ಧೂಮಾವತಿ ದೈವದ ಕೋಲ, ಮಧ್ಯಾಹ್ನ 12 ಕ್ಕೆ ವಿಷ್ಣುಮೂರ್ತಿ ದೈವದ ಕೋಲ, ಅಪರಾಹ್ನ 3ಕ್ಕೆ ಅಧಿಕಾರಿ ಚಾಮುಂಡಿ ದೈವದ ಕೊಲದೊಂದಿಗೆ ಕಳಿಯಾಟ ಸಂಪನ್ನಗೊಳ್ಳಲಿದೆ. 3 ದಿನಗಳಲ್ಲೂ ಮದ್ಯಾಹ್ನ ಮತ್ತು ರಾತ್ರಿ ಅನ್ನಪ್ರಸಾದ ವಿತರಣೆ ನಡೆಯಲಿದೆ. ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರರ ಮಾರ್ಗ ದರ್ಶನದಲ್ಲಿ ಕಳಿಯಾಟ ಮಹೋತ್ಸವ ಸಮಿತಿ ಮತ್ತು ಸೇವಾ ಸಮಿತಿಯ ಸರ್ವ ಸದಸ್ಯರು ಕಳಿಯಾಟ ಮಹೋತ್ಸವದ ಯಶಸ್ವಿಗೆ ಸಕ್ರಿಯರಾಗಿದ್ದು, ಬುಧವಾರ ಸಂಪ್ರಾರ್ಥನೆ ನಡೆಯಿತು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries