ಕಾಸರಗೋಡು: ರಾಜ್ಯ ಸರ್ಕಾರದ ಎರಡನೇ ವμರ್Áಚರಣೆಯ 100 ದಿನಗಳ ಕ್ರಿಯಾ ಯೋಜನೆಗೆ ಸಂಬಂಧಿಸಿದಂತೆ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಮೊದಲ ಹಂತದಲ್ಲಿ ಗ್ರಾಮ ಪಂಚಾಯಿತಿ ಹಾಗೂ ಕ್ಷೇತ್ರವಾರು ನಿರ್ಮಿಸಿರುವ ಒಂದು ಸಾವಿರ ಕೆರೆಗಳ ಉದ್ಘಾಟನೆ ವಿಶ್ವ ಜಲದಿನವಾದ ಇಂದು (ಮಾರ್ಚ್. 22)ನಡೆಯಲಿದೆ. ಇದರ ಅಂಗವಾಗಿ ಕಾಸರಗೋಡು ಜಿಲ್ಲೆಯಲ್ಲಿ 42 ಕೆರೆಗಳನ್ನು ಉದ್ಘಾಟಿಸಲಾಗುವುದು. ಜಿಲ್ಲೆಯ 38 ಗ್ರಾ.ಪಂ.ಗಳ ಪೈಕಿ 33 ಗ್ರಾ.ಪಂ.ಗಳಲ್ಲಿ ಉದ್ಘಾಟನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಚೆರುವತ್ತೂರು, ಪಡನ್ನ, ತೃಕರಿಪುರ, ವಲಿಯಪರಂಬ ಗ್ರಾಮ ಪಂಚಾಯಿತಿಗಳಲ್ಲಿ ಕೆರೆಗಳ ಸಾಮಥ್ರ್ಯ ಕಡಿಮೆ ಇರುವುದರಿಂದ ಈ ಗ್ರಾ.ಪಂ.ಗಳನ್ನು ಹೊರತುಪಡಿಸಿ ಜಿಲ್ಲೆಯ ಇತರೆ ಗ್ರಾಮ ಪಂಚಾಯಿತಿಗಳಲ್ಲಿ ಬಹು ಕೆರೆಗಳ ಉದ್ಘಾಟನೆ ನಡೆಯಲಿದೆ. 5 ರಿಂದ 10 ಮೀ ಆಳದ ಕೆರೆ ನಿರ್ಮಾಣದಲ್ಲಿ ಸರಾಸರಿ 200 ಮಾನವ ದಿನಗಳು ಉತ್ಪತ್ತಿಯಾಗಿವೆ. ಅಂತಹ ಕೊಳದ ಸರಾಸರಿ ವೆಚ್ಚವನ್ನು ರೂ. 1.5 ಲಕ್ಷ ಗಳಷ್ಟಾಗಿವೆ.
100 ದಿನದ ಕ್ರಿಯಾ ಯೋಜನೆ: 1000 ಕೊಳಗಳು: ಇಂದು 42 ಕೆರೆಗಳ ಉದ್ಘಾಟನೆ
0
March 22, 2023