HEALTH TIPS

ಮುಂದಿನ 25 ವರ್ಷಗಳು ನಿರ್ಣಾಯಕ; ರಬ್ಬರ್, ತೆಂಗಿನಕಾಯಿ ಇತ್ಯಾದಿಗಳನ್ನು ಮೌಲ್ಯವರ್ಧಿತ ಉತ್ಪನ್ನಗಳಾಗಿ ಪರಿವರ್ತಿಸಬೇಕು ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ತಲುಪಿಸಬೇಕು: ಸಿಎಸ್‍ಐಆರ್ ಮಹಾನಿರ್ದೇಶಕ


               ತಿರುವನಂತಪುರ: ಮುಂದಿನ 25 ವರ್ಷಗಳು ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ನಿರ್ಣಾಯಕ ಎಂದು ಸಿಎಸ್‍ಐಆರ್ ಮಹಾನಿರ್ದೇಶಕರು ಹಾಗೂ ಕೇಂದ್ರ ವಿಜ್ಞಾನ ಕಾರ್ಯದರ್ಶಿ ಡಾ. ಎನ್ ಕಲೈಸೆಲ್ವಿ ಹೇಳಿದರು.
          ತಿರುವನಂತಪುರಂನ ಸಿಎಸ್‍ಐಆರ್ ನಲ್ಲಿ ಕೇಂದ್ರ ಸರ್ಕಾರದ ಒಂದು ವಾರ ಒಂದು ಲ್ಯಾಬ್ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾ|ತನಾಡಿದರು.
          ಶ್ರೀಮತಿ ಎನ್ ಕಲೈಸೆಲ್ವಿ ಮಾತನಾಡಿ, ಇಂದಿನ ಯುವ ಪೀಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಇತಿಹಾಸ ಬರೆಯಲು ಹೊರಟಿದೆ. ವಿಜ್ಞಾನ ಕ್ಷೇತ್ರದ ಲಾಭ ದೇಶದ ಜನಸಾಮಾನ್ಯರಿಗೂ ತಲುಪಬೇಕು. ಸಿ.ಎಸ.ಐ.ಆರ್. ಭಾರತ ಜಾಗತಿಕ ಮಾದರಿಯಾಗಬೇಕು. ಬಯೋಮೆಡಿಕಲ್ ವೇಸ್ಟ್ ಮ್ಯಾನೇಜ್ ಮೆಂಟ್ ನಂತಹ ಕಾಲಕ್ಕೆ ತಕ್ಕಂತೆ ಸಿಎಸ್ ಐಆರ್ ಹೊಸ ಆಲೋಚನೆಗಳನ್ನು ರೂಪಿಸಲು ಪ್ರಯತ್ನಿಸಬೇಕು ಎಂದು ಎನ್. ಕಲೈಸೆಲ್ವಿ ಹೇಳಿದರು.
            ಕಾರ್ಯಕ್ರಮದಲ್ಲಿ ಎನ್‍ಐಎಸ್‍ಟಿ ತಿರುವನಂತಪುರಂ ಸೆಂಟರ್ ಅಭಿವೃದ್ಧಿಪಡಿಸಿದ ಮೂರು ತಂತ್ರಜ್ಞಾನ ಆಧಾರಿತ ಯೋಜನೆಗಳ ದಾಖಲೆಗಳನ್ನು ವಿವಿಧ ಸಂಸ್ಥೆಗಳು ಮತ್ತು ಸ್ಟಾರ್ಟ್‍ಅಪ್‍ಗಳಿಗೆ ಹಸ್ತಾಂತರಿಸಲಾಯಿತು. ಸಿ.ಎಸ.ಐ.ಆರ್. ಎನ್ ಐ ಟಿ ಎಸ್ ಟಿ ಸಂಶೋಧನಾ ಮಂಡಳಿಯ ಅಧ್ಯಕ್ಷ ಪ್ರೊ. ಡಾ. ಜಾವೇದ್ ಇಕ್ಬಾಲ್, ಸಿ.ಎಸ್.ಐ.ಆರ್. ತಿರುವನಂತಪುರದ ನಿರ್ದೇಶಕ. ಸಿ.ಅನಂತರಾಮಕೃಷ್ಣನ್ ಮತ್ತಿತರರು ಉಪಸ್ಥಿತರಿದ್ದರು.
           ಕೃಷಿ, ಪರಿಸರ ಮತ್ತು ರಕ್ಷಣಾ ಕ್ಷೇತ್ರಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣಗಳು ಮತ್ತು ಎನ್‍ಐಎಸ್‍ಟಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನ ಆಧಾರಿತ ಮತ್ತು ಸಾಮಾಜಿಕವಾಗಿ ಸಂಬಂಧಿತ ಉಪಕ್ರಮಗಳ ಪ್ರದರ್ಶನವು ಸಮಾವೇಶದ ಭಾಗವಾಗಿ ನಡೆಯಲಿದೆ. ದೇಶದ ಸಿಎಸ್‍ಐಆರ್‍ನ 37 ಲ್ಯಾಬ್‍ಗಳಲ್ಲಿ ಒಂದು ವಾರ ಒಂದು ಲ್ಯಾಬ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries