ಕುಂಬಳೆ: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ಕುಂಬಳೆ ಘಟಕದ 7ನೇ ವರ್ಷದ ವಾರ್ಷಿಕೋತ್ಸವ ಕುಂಬಳೆ ನಾಯ್ಕಾಪು ಬಳಿ ಮುಂಡಪ್ಪಳ ಶ್ರೀ ರಾಜರಾಜೇಶ್ವರಿ ದೇವಾಲಯದ ಪರಿಸರದಲ್ಲಿ ಕ್ಷೇತ್ರದ ಸೇವಾ ಸಮಿತಿಯ ಸಂಪೂರ್ಣ ಸಹಕಾರದೊಂದಿಗೆ ಗುರುವಾರ ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಮಡಂದೂರು ತಿಮ್ಮಪ್ಪ ರೈಯವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಕುಂಬಳೆ ಘಟಕದ ಗೌರವಾಧ್ಯಕ್ಷ ಕೊಳಾರು ಸತೀಶ್ಚಂದ್ರ ಭಂಡಾರಿ ವಹಿಸಿದ್ದರು. ಫೌಂಡೇಶನ್ ನಡೆದು ಬಂದ ಹಾದಿಯನ್ನು ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಹುಡ್ಕೊದ ಮಾಜಿ ನಿರ್ದೇಶಕ ಕೆ ರವೀಂದ್ರ ಆಳ್ವ, ಕ್ಷೇತ್ರದ ಆಡಳಿತ ಮೊಕ್ತೇಸರ ಕೆ ಕೆ ಶೆಟ್ಟಿ, ಖ್ಯಾತ ನ್ಯಾಯವಾದಿ ಸುಬ್ಬಯ ರೈ, ಉದಯ ಕುಮಾರ್ ಗಟ್ಟಿ, ವಾರ್ಡ್ ಸದಸ್ಯೆ ಪ್ರೇಮಲತಾ ಭಾಗವಹಿಸಿದ್ದರು. ಕುಂಬಳೆ ಘಟಕದ ಸಂಚಾಲಕ ಪೃಥ್ವಿರಾಜ್ ಶೆಟ್ಟಿ ಸ್ವಾಗತಿಸಿ, ಘಟಕದ ಕಾರ್ಯಾಧ್ಯಕ್ಷ ಮಂಜುನಾಥ ಆಳ್ವ ವಂದಿಸಿದರು. ಸನ್ಮಾನಿತರ ಪರಿಚಯವನ್ನು ಘಟಕದ ಕಾರ್ಯದರ್ಶಿ ಸುಕೇಶ್ ಭಂಡಾರಿ ನಡೆಸಿಕೊಟ್ಟರು. ಜೊತೆ ಕಾರ್ಯದರ್ಶಿ ಅವಿನಾಶ ಕಾರಂತ ಎಮ್ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೆÇೀಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ಶ್ರೀ ದೇವಿ ಲಲಿತೋಪಾಖ್ಯಾನ ಯಕ್ಷಗಾನ ಬಯಲಾಟ ನಡೆಯಿತು.