ಕಾಸರಗೋಡು : ಪ್ರಸಿದ್ಧ ಮಲೆಯಾಳ ಕವಿ ರಾಘವ ಬೆಳ್ಳಿಪ್ಪಾಡಿ ಅವರ 7 ನೇ ಕೃತಿ ಪ್ರಣಯಂ ಇನ್ನಲೆಯುಂ ಉಂಡಾಯಿರುನ್ನು (ಪ್ರಣಯ ನಿನ್ನೆಯೂ ಇತ್ತು) ಮಲಯಾಳ ಕವನ ಸಂಕಲನದ ಬಿಡುಗಡೆ ಸಮಾರಂಭ ನಗರದ ಪಬ್ಲಿಕ್ ಸರ್ವೆಂಟ್ಸ್ ಸಭಾಂಗಣದಲ್ಲಿ ಜರಗಿತು. ಸಾಹಿತಿ ವಿನು ಕೋಳಿಚ್ಚಾಲ್ ಕೃತಿ ಬಿಡುಗಡೆಗೊಳಿಸಿ ಉಪನ್ಯಾಸಕಿ ಡಾ ಮಂಜುಳಾ ಅವರಿಗೆ ಮೊದಲ ಪ್ರತಿ ನೀಡಿದರು.
ಕೆ ಎಂ ಬಾಲಕೃಷ್ಣನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರತೀಶ್ ಪಿಲಿಕ್ಕೋಡ್ ಕೃತಿ ಪರಿಚಯ ಮಾಡಿದರು. ಸಾಹಿಗಳಾದ ರಾಧಾಕೃಷ್ಣ ಕೆ ಉಳಿಯತ್ತಡ್ಕ, ಸುರಾಬ್ ಕೆ ವಿ, ರಮೇಶನ್, ರಹೀಂ ಚೂರಿ, ಎಂ. ಎ ಮುಮ್ತಾಜ್ ಬಿ ಕೆ ಸುಕುಮಾರನ್ ಶುಭ ಹಾರೈಸಿದರು. ರಾಘವ ಬೆಳ್ಳಿಪ್ಪಾಡಿ ತಮ್ಮ ಸಾಹಿತ್ಯ ದೃಷ್ಟಿಯ ಅನುಭವಗಳನ್ನು ಪ್ರಸ್ತುತಪಡಿಸಿದರು. ಪಿ ವಿನಯಕುಮಾರ್ ಸ್ವಾಗತಿಸಿ, ರಜಿತಾ ಕಾರಡ್ಕ ವಂದಿಸಿದರು. ಕಣ್ಣೂರಿನ ಕೈರಳಿ ಬುಕ್ಸ್ ಪ್ರಕಾಶನ ಸಂಸ್ಥೆ ಪುಸ್ತಕವನ್ನು ಪ್ರಕಟಿಸಿದೆ.
ರಾಘವ ಬೆಳ್ಳಿಪ್ಪಾಡಿ ಅವರ 7ನೇ ಕವನಸಂಕಲನ ಬಿಡುಗಡೆ
0
March 07, 2023