HEALTH TIPS

ಬ್ರಹ್ಮಪುರದಿಂದ ನೇರ ಕೈಲಾಸ: ವಿಷಕಾರಿ ಹೊಗೆ ಉಸಿರಾಡಿದವರಿಗೆ ಗಂಭೀರವಾದ ಆರೋಗ್ಯ ಸಮಸ್ಯೆ: ಬ್ರಹ್ಮಪುರ ಪೂರ್ಣ ವಿಷಪೂರಿತ: ತಜ್ಞರು


                     ಕೊಚ್ಚಿ: ಬ್ರಹ್ಮಪುರಂ ತ್ಯಾಜ್ಯ ಘಟಕದ ನಂದಿಸಲಾಗದ ವಿಷಕಾರಿ ಹೊಗೆಯು ಅನೂಹ್ಯ  ದೊಡ್ಡ ಆರೋಗ್ಯ ಸಮಸ್ಯೆಯಾಗಿದೆ ಎಂದು ಆರೋಗ್ಯ ಮತ್ತು ಪರಿಸರ ತಜ್ಞರು ಗಮನಸೆಳೆದಿದ್ದಾರೆ.
             ಒಂದು ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಸುಟ್ಟಾಗ ಸರಾಸರಿ 180 ಮೈಕ್ರೋಗ್ರಾಂಗಳಷ್ಟು ಡಯಾಕ್ಸಿನ್ ಬಿಡುಗಡೆಯಾಗುತ್ತದೆ.
            ಇದು ಸಣ್ಣ ವಿಷಯವೇನೂ ಅಲ್ಲ ಎಂದು ಅನುಮಾನಿಸಬಹುದು. ಆದರೆ ಸಣ್ಣ ಪ್ರಮಾಣದ ಡಯಾಕ್ಸಿನ್ ಕೂಡ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಪರಿಸರ ತಜ್ಞ ಪೆÇ್ರ. ಪ್ರಸಾದ್ ಪಾಲ್ ಮಾತನಾಡಿ ಡಯಾಕ್ಸಿನ್ ಜೀವಕ್ಕೆ ಅಪಾಯಕಾರಿ ವಿಷವಾಗಿದೆ ಎಂದು ತಿಳಿಸಿದ್ದಾರೆ.
             ಈ ಮಾರಣಾಂತಿಕ ವಿಷವು ಕ್ಯಾನ್ಸರ್ ನಿಂದ ತೊಡಗಿ ಬಂಜೆತನದವರೆಗಿನ ಸಮಸ್ಯೆಗಳಿಗೆ ಸ್ವಾಗತಿಸುವ ವಿಲನ್ ಆಗಿದೆ.ಬ್ರಹ್ಮಪುರಂನಲ್ಲಿ ಈಗಿನ ಬೆಂಕಿ ದೊಡ್ಡದಾಗಿದೆ. ಹಾಗಾಗಿ ವಾತಾವರಣಕ್ಕೆ ಬಿಡುಗಡೆಯಾಗುವ ಹೊಗೆ ತೀವ್ರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವುದರಲ್ಲಿ ಸಂಶಯವಿಲ್ಲ. ಈಗಾಗಲೇ, ವಿಷಕಾರಿ ಹೊಗೆಯನ್ನು ಸೇವಿಸಿದ ನಂತರ ಅನೇಕ ಜನರು ಆರೋಗ್ಯ ಸಮಸ್ಯೆಗಳೊಂದಿಗೆ ಪ್ರತಿದಿನ ಆಸ್ಪತ್ರೆಗಳಿಗೆ ಎಡತಾಕುತ್ತಿರುವುದು ಕಂಡುಬಂದಿದೆ.
            ಎರ್ನಾಕುಳಂ, ಅಲಪ್ಪುಳ ಮತ್ತು ಕೊಟ್ಟಾಯಂ ಜಿಲ್ಲೆಗಳ ಜನರ ಮೇಲೆ ಪರಿಣಾಮ ಬೀರಲಿದೆ. ಬಹುಶಃ ಬ್ರಹ್ಮಪುರಂನ ಜನರಿಗಿಂತ ಹೆಚ್ಚಾಗಿ, ಗಾಳಿಯಿಂದ ಹತ್ತು ಅಥವಾ ಹದಿನೈದು ಕಿಲೋಮೀಟರ್ ಒಳಗೆ ಇರುವವರಿಗೆ ಇದು ಪರಿಣಾಮ ಬೀರುತ್ತದೆ. ಬೆಂಕಿಯ ಹೊಗೆಯು ತೆರವುಗೊಂಡರೂ, ಬಿಡುಗಡೆಯಾದ ವಿಷಕಾರಿ ಪದಾರ್ಥಗಳಾದ ಡಯಾಕ್ಸಿನ್ ಮತ್ತು ಫ್ಯೂರಾನ್ ಗಳು ನಾಶವಾಗದೆ ನೆಲದಲ್ಲಿ ಉಳಿಯುತ್ತವೆ.
             ಶೇಕಡಾ 10 ಕ್ಕಿಂತ ಕಡಿಮೆ ವಿಷಕಾರಿ ವಸ್ತುಗಳು ಗಾಳಿಯ ಮೂಲಕ ಮಾನವ ದೇಹವನ್ನು ತಲುಪುತ್ತವೆ. ಉಳಿದ 90 ಪ್ರತಿಶತ ಮಣ್ಣು ಮತ್ತು ನೀರಿನಲ್ಲಿ ಸಂಗ್ರಹವಾಗುತ್ತದೆ. ಇದು ನೀರಿನ ಮೂಲಕ ಮಾನವ ದೇಹವನ್ನು ಪ್ರವೇಶಿಸುತ್ತದೆ. ಸತತ ಏಳು ದಿನಗಳ ಕಾಲ ವಿಷಕಾರಿ ಹೊಗೆಯನ್ನು ಉಸಿರಾಡುವುದರಿಂದ ತೊಂದರೆಗಳು ದ್ವಿಗುಣಗೊಳ್ಳುತ್ತವೆ ಮತ್ತು ಪರಿಣಾಮವು ನಿಧಾನವಾಗಿ ಕಂಡುಬರುತ್ತದೆ ಎಂದು ಆರೋಗ್ಯ ತಜ್ಞರು ಸೂಚಿಸಿದರು. ಕೆಮ್ಮು, ಮೂಗು ಮತ್ತು ಗಂಟಲಿನ ಅಸ್ವಸ್ಥತೆ, ಉಸಿರಾಟದ ತೊಂದರೆ, ತಲೆನೋವು, ಎದೆಯಲ್ಲಿ ಭಾರ ಮತ್ತು ಕಣ್ಣುಗಳಲ್ಲಿ ಉರಿಯುವಿಕೆಯನ್ನು ಅನುಭವಗಳಾಗುತ್ತವೆ. ಇದಕ್ಕೆ ಪರಿಹಾರವಾಗಿ, ನೀವು ಮನೆಯಲ್ಲಿದ್ದಾಗಲೆಲ್ಲಾ ಮಾಸ್ಕ್ ಧರಿಸಿ, ಸಂಜೆ ಕಿಟಕಿ ಬಾಗಿಲು ಮುಚ್ಚಿ, ಅಸ್ತಮಾದಂತಹ ಕಾಯಿಲೆ ಇರುವವರಿಗೆ ಇನ್ಹೇಲರ್ ಬಳಸಬೇಕು, ಹೊಗೆ ಹೆಚ್ಚಾದಾಗ ಹೊರಗೆ ಹೋಗದಿರುವುದು ಹಾಗೂ ಕಣ್ಣು ಉರಿಯುವ ಸಂದರ್ಭದಲ್ಲಿ ಶುದ್ಧ ನೀರಿನಿಂದ ಕಣ್ಣು ಮತ್ತು ಮುಖವನ್ನು ತೊಳೆಯಬಹುದು ಎಂದು ಎರ್ನಾಕುಳಂ ಸನ್ ರೈಸ್ ಆಸ್ಪತ್ರೆಯ ಕನ್ಸಲ್ಟೆಂಟ್ ಪಲ್ಮನಾಲಜಿಸ್ಟ್ ಡಾ. ನೀತು ತಂಬಿ ತಿಳಿಸಿದ್ದಾರೆ. ಮಕ್ಕಳು, ವೃದ್ಧರು ಮತ್ತು ಹೃದ್ರೋಗಿಗಳಿಗೆ ಹೆಚ್ಚು ಆರೋಗ್ಯ ಸಮಸ್ಯೆಗಳಾಗುತ್ತವೆ ಎಂದು ಹೇಳಿರುವರು.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries