HEALTH TIPS

ಗೋಳಿಯಡ್ಕ ಶ್ರೀ ವಿಷ್ಣುಮೂರ್ತಿ ದೈವಗಳ ಪ್ರತಿಷ್ಠಾ ಮಹೋತ್ಸವ ಸಮಾಲೋಚನಾ ಸಭೆ

          ಬದಿಯಡ್ಕ: ಗೋಳಿಯಡ್ಕ ಶ್ರೀವಿಷ್ಣುಮೂರ್ತಿ ಪರಿವಾರ ದೈವಗಳ ದೈವಸ್ಥಾನದ ಪ್ರತಿಷ್ಠಾ ಮಹೋತ್ಸವ ಮಾರ್ಚ್ 21ರಿಂದ 25ರ ತನಕ  ನಡೆಯಲಿದ್ದು ಕಾರ್ಯಕ್ರಮದ ಯಶಸ್ವಿಗಾಗಿ ಸಮಾಲೋಚನ ಸಭೆ ದೈವಸ್ಥಾನದ ಪರಿಸರದಲ್ಲಿ ಜರಗಿತು. ಬದಿಯಡ್ಕ ಗ್ರಾ.ಪಂ.ಸದಸ್ಯ ರವಿಕುಮಾರ್ ರೈ, ಧಾರ್ಮಿಕ ಮುಂದಾಳು ಗೋಪಾಲಕೃಷ್ಣ ಕುಲಾಲ್, ಪ್ರತಿಷ್ಠಾ ಮಹೋತ್ಸವ ಸಮಿತಿ ಅಧ್ಯಕ್ಷ ಗಂಗಾಧರ ಗೋಳಿಯಡ್ಕ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸೋಮನಾಥ ಮಾಸ್ತರ್ ಮಕ್ಕಿಕಾನ, ಸೇವಾ ಸಮಿತಿ ಅಧ್ಯಕ್ಷ ಸತ್ಯನಾರಾಯಣ, ವಿವಿಧ ಸಮಿತಿಯ ಪ್ರಮುಖರಾದ ಪ್ರಶಾಂತ್, ಪ್ರಮೋದ್, ಐತ್ತಪ್ಪ ಎಂ.ಕೆ, ಕೃಷ್ಣ ಡಿ.ದರ್ಬೆತ್ತಡ್ಕ, ರಾಮಪಟ್ಟಾಜೆ, ಸುಂದರ ಬಾರಡ್ಕ, ಲಲಿತಾ, ಜಯಶ್ರೀ, ಲಲಿತಾ ಮಕ್ಕಿಕಾನ, ಭವಾನಿ, ಶಾಂತ ಗೋಳಿಯಡ್ಕ, ಲಕ್ಷ್ಮಿ ಮಕ್ಕಿಕಾನ ಮೊದಲಾದವರು ಉಪಸ್ಥಿತರಿದ್ದರು. ಮಾ.23ರಂದು ಬೆಳಗ್ಗೆ ಗಂಟೆಗೆ 10.10ರಿಂದ ದೈವÀಗಳ ಪ್ರತಿಷ್ಠೆ  ಹಾಗೂ ಮಾ.24 ಕ್ಕೆ ಶ್ರೀವಿಷ್ಣುಮೂರ್ತಿ, ಬಬ್ಬರ್ಯ, ಕೋಮರಾಯ ಚಾಮುಂಡಿ, ಮೊಗೇರ ದೈವಗಳ ನೇಮ ಜರಗಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries