ಕುಂಬಳೆ: ಕುಂಬಳೆ ಯುವ ಕಾಂಗ್ರೆಸ್ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಮಂಡಲ ಸಮ್ಮೇಳನ ಕುಂಬಳೆ ಮಾಧವ್ ಪೈ ಸಭಾಂಗಣದಲ್ಲಿ ಜರಗಿತು.
ಮಂಜೇಶ್ವರ ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಉಪಾಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಯುವ ಕಾಂಗ್ರೆಸ್ ಜಿಲ್ಲಾ ಸಮಿತಿಯ ಕಾರ್ಯದರ್ಶಿ ನ್ಯಾಯವಾದಿ ಸಜ್ಜಿದ್ ಕಮಡಂ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷÀ ಲಕ್ಷ್ಮಣ ಪ್ರಭು ಕುಂಬ|ಳೆ, ಕಾರ್ಯದರ್ಶಿ, ಲೋಕನಾಥ್ ಶೆಟ್ಟಿ, ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಶೇರಿಲ್ ಕಯ್ಯಾಂಕೂಡೆಲ್, ಮಂಜೇಶ್ವರ ವಿಧಾನಸಭಾ ಯುವ ಕಾಂಗ್ರೆಸ್ ಅಧ್ಯಕ್ಷ ಜುನೈದ್ ಉರ್ಮಿ ಶುಭಹಾರೈಸಿದರು.
ಕುಂಬಳೆ ಯುವ ಕಾಂಗ್ರೆಸ್ ಮಂಡಲ ಅಧ್ಯಕ್ಷ ನಾರಾಯಣ ಕಿದೂರು, ಉಪಾಧ್ಯಕ್ಷ ರಾಕೇಶ್ ರೈ ಕಿದೂರು, ಉಸ್ಮಾನ್ ಆರಿಕ್ಕಾಡಿ, ಗುರುಪ್ರಸಾದ್ ಕಾಮತ್ ಕುಂಬಳೆ ಕಾರ್ಯದರ್ಶಿಗಳಾದ ರಜತ್ ಶೆಟ್ಟಿ ಬಂಬ್ರಾಣ, ಶಮ್ಮಾಜ್ ಮೋಗ್ರಾಲ್,ಧನ್ಯರಾಜ್ ಕುಂಟೆಂಗೇÀರಡ್ಕ ಪದಗ್ರಹಣ ಮಾಡಿದರು.
ಪಂಚಾಯತ್ ಸದಸ್ಯರುಗಳಾದ ಕೇಶವ ಪುತ್ತಿಗೆ ,ರವಿರಾಜ್ ಕುಂಟೆಂಗೆರಡ್ಕ, ಕಾರ್ಮಿಕ ಕಾಂಗ್ರೆಸ್ಸಿನ ಕಮರುದ್ದೀನ್ ಪಾಡಲಡ್ಕ, ಮಂಡಲ ಕಾಂಗ್ರೆಸ್ ಕಾರ್ಯದರ್ಶಿ ರಮೇಶ್ ಗಾಂಧಿನಗರ, ಥಾಮಸ್ ರೋಡಿಗ್ರಾಸ್, ಹಿರಿಯ ಕಾಂಗ್ರೆಸ್ ನೇತಾರ ರಾಮ ಕಾರ್ಲೆ, ಕೇರಳ ವಿದ್ಯಾರ್ಥಿ ಸಂಘದ ಮೂವಾಸ್ ಮೋಗ್ರಾಲ್, ಕಾರ್ತಿಕ್ ಮುಂತಾದವರು ಶುಭ ಹಾರೈಸಿದರು.
ಮಂಜೇಶ್ವರ ವಿಧಾನಸಭಾ ಯುವ ಕಾಂಗ್ರೆಸ್ ಕಾರ್ಯದರ್ಶಿ ದಯಾನಂದ ಬಾಡೂರು ಸ್ವಾಗತಿಸಿ, ಕುಂಬಳೆ ಮಂಡಲ ಸಮಿತಿಯ ನೂತನ ಉಪಾಧ್ಯಕ್ಷ ರಾಕೇಶ್ ರೈ ಕಿದೂರು ವಂದಿಸಿದರು.
ಪದಾಧಿಕಾರಿಗಳ ಪದಗ್ರಹಣ: ಮಂಡಲ ಸಮ್ಮೇಳನ
0
March 12, 2023