HEALTH TIPS

ಇಚ್ಲಂಪಾಡಿ ಹಿರಿಯ ಬುನಾದಿ ಶಾಲಾ ಅಮೃತ ಮಹೋತ್ಸವ: ಹಳೆ ವಿದ್ಯಾರ್ಥಿ ಸಂಘದ ಸುವರ್ಣ ಮಹೋತ್ಸವ ಹಾಗೂ ನೂತನ ಸಭಾಂಗಣ ಅಮೃತಶ್ರೀ ಯ ಲೋಕಾರ್ಪಣೆ


           ಕುಂಬಳೆ: ಕಳತ್ತೂರಿನ ಇಚ್ಲಂಪಾಡಿ ಹಿರಿಯ ಬುನಾದಿ ಶಾಲಾ ಅಮೃತ ಮಹೋತ್ಸವ, ಹಳೆ ವಿದ್ಯಾರ್ಥಿ ಸಂಘದ ಸುವರ್ಣ ಮಹೋತ್ಸವ ಹಾಗೂ ನೂತನ ಸಭಾಂಗಣ ಅಮೃತಶ್ರೀ ಯ ಲೋಕಾರ್ಪಣೆ ಕಾರ್ಯಕ್ರಮ ಜರಗಿತು.



         ಶಾಲಾ ಪ್ರಬಂಧಕ ಎಂ.ಗಣೇಶ ರಾವ್ ಧ್ವಜಾರೋಹಣಗೈಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.  ಬಳಿಕ ನೂತನ ಸಭಾಂಗಣ ಅಮೃತಶ್ರೀ ಯ ಉದ್ಘಾಟನೆಯನ್ನು ಎಡನೀರು ಶ್ರೀಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ನೇರೆವೇರಿಸಿದರು.ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಎಚ್ ಶಿವರಾಮ ಭಟ್ ಸಭೆಯ ಅಧ್ಯಕ್ಷತೆವಹಿಸಿದ್ದರು.ಮುಖ್ಯ ಅತಿಥಿಗಳಾಗಿ  ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯ ವ್ಯವಸ್ಥಾಪಕರಾದ ಜಯದೇವ ಖಂಡಿಗೆ,ರೆ.ಫಾ.ಸ್ಟಾನಿ ಪೆರೇರಾ, ಕಿದೂರು ಶ್ರೀಮಹಾದೇವ ಕ್ಷೇತ್ರ ಆಡಳಿತ ಮೊಕ್ತೇಸರ ರಘರಾಮ ರೈ,ಕಳತ್ತೂರು ಶ್ರೀಮಹಾದೇವ ಭಜನಾ ಮಂದಿರದ ಗೌರವಾಧ್ಯಕ್ಷ ಜಯಪ್ರಸಾದ್ ರೈ ಪಾಲ್ಗೊಂಡಿದ್ದರು.ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ  ಬಹುಮಾನ ವಿತರಿಸಲಾಯಿತು.  ಶಾಲಾ ಮುಖ್ಯೋಪಾಧ್ಯಾಯಯ ರಾಧಾಕೃಷ್ಣ ತುಂಗ ಕೆ.ಎಸ್ ಸ್ವಾಗತಿಸಿ ಶಿಕ್ಷಕ ಸುಧಾಕರ ಎಸ್ ವಂದಿಸಿದರು ಪುಷ್ಪರಾಜ್ ಶೆಟ್ಟಿ ಬಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಪ್ರದರ್ಶನಗೊಂಡಿತು.


 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries