ಕಾಸರಗೋಡು: ಕೇಬಲ್ ಟೆಲಿವಿಷನ್ ಆಪರೇಟರ್ಸ್ ಅಸೋಸಿಯೇಶನ್ನ ಕಾಸರಗೋಡು ಜಿಲ್ಲಾ ಸಮಾವೇಶವು ಮಾ.11ರಂದು ಕಳನಾಡಿನ ಕೆಎಚ್ ಸಭಾಂಗಣದಲ್ಲಿ ನಡೆಯಲಿದೆ.
ಕೇರಳದ ಸುಮಾರು 100 ಪ್ರಾದೇಶಿಕ ಜಿಲ್ಲಾ ಚಾನೆಲ್ಗಳು ಮತ್ತು ಕೇರಳ ವಿಷನ್ ಉಪಗ್ರಹ ಸುದ್ದಿ ವಾಹಿನಿಗಳು ಸುದ್ದಿಯನ್ನು ವಸ್ತುನಿಷ್ಠವಾಗಿ ಜನರಿಗೆ ತಲುಪಿಸುವ ಮೂಲಕ ಮಾಧ್ಯಮ ರಂಗದಲ್ಲಿ ಈಗಾಗಲೇ ಯಶಸ್ವಿಯಾಗಿದೆ ಎಂದು ಸಂಘಟನೆ ಅಧ್ಯಕ್ಷ ಹರೀಶ್ ಪಿ ನಾಯರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಯೋಜನೆಯಾದ ಕೆ ಫೆÇೀನ್ ವಿತರಣೆಯ ಜವಾಬ್ದಾರಿಯನ್ನು ಕೇರಳ ವಿಷನ್ ಹೊಂದಿದೆ. 'ಟ್ರಾಯಿ' ಯ ಎನ್ಟಿ03 ಸುಂಕದ ಆದೇಶದ ನೆಪದಲ್ಲಿ ಚಂದಾದಾರರ ಮೇಲೆ ಹೊರೆಯಾಗುವ ರೀತಿಯ ಅನಿಯಂತ್ರಿತ ದರ ಹೆಚ್ಚಳವನ್ನು ಎದುರಿಸಲು ಸಂಸ್ಥೆಯು ಸಮರ್ಥವಾಗಿದೆ.
ಈ ಸಂದರ್ಭ ವಿದ್ಯುತ್ ಕಂಬಗಳಿಂದ ಬಿದ್ದು, ಹೃದಯಾಘಾತಕ್ಕೊಳಗಾದ ಕೆಎಸ್ಇಬಿ ಗುತ್ತಿಗೆ ನೌಕರ ಬಾಲಕೃಷ್ಣನ್ ಅವರನ್ನು ರಕ್ಷಿಸಿದ ಕೇಬಲ್ ಆಪರೇಟರ್ ಹಾಗೂ ಚೆರುವತ್ತೂರು ಗ್ರಾಮ ಪಂಚಾಯಿತಿ ಸದಸ್ಯ ಶ್ರೀಜಿತ್ ಅಚ್ಚತುರುತ್ತಿ ಅವರನ್ನು ಸನ್ಮಾನಿಸಲಾಗುವುದು. ಸುಮಾರು 200 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ದ್ವೈವಾರ್ಷಿಕ ಸಮಾವೇಶವು ಹೊಸ ವ್ಯಾಪಾರ ಅವಕಾಶಗಳನ್ನು ವಿವರಿಸಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನಾ ಸಮಿತಿ ಅಧ್ಯಕ್ಷ ಶುಕೂರ್ ಕೋಳಿಕ್ಕರ, ಕೆಸಿಸಿಎಲ್ ನಿರ್ದೇಶಕ ಎಂ ಲೋಹಿತಾಕ್ಷನ್, ಜಿಲ್ಲಾ ಕಾರ್ಯದರ್ಶಿ ಅಜಯನ್, ಕೋಶಾಧಿಕಾರಿ ಕೆ ಪ್ರದೀಪ್ ಕುಮಾರ್, ಮಾಧ್ಯಮ ಅಧ್ಯಕ್ಷ ಸತೀಶ್ ಕೆ ಪಾಕ್ಕಂ, ಸಿಸಿಎನ್ ಎಂಡಿಟಿ ಮೋಹನನ್, ಪ್ರಾದೇಶಿಕ ಸಮಿತಿ ಅಧ್ಯಕ್ಷ ದಿವಾಕರ, ಕಾರ್ಯದರ್ಶಿ ಸುನಿಲ್ ಕುಮಾರ್ ಉಪಸ್ಥಿತರಿದ್ದರು.
ಇಂದು ಕೇಬಲ್ ಟೆಲಿವಿಷನ್ ಆಪರೇಟರ್ಸ್ ಅಸೋಸಿಯೇಶನ್ನ ಜಿಲ್ಲಾ ಸಮಾವೇಶವು
0
March 12, 2023
Tags