ಕಾಸರಗೋಡು: ಮಹಿಳಾ ದಿನಾಚರಣೆಯ ಅಂಗವಾಗಿ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಪೆರಿಯ ಕ್ಯಾಂಪಸ್ನಲ್ಲಿ ಮಹಿಳಾ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಕುಟುಂಬಶ್ರೀ ಮೇಳ ಆಯೋಜಿಸಲಾಯಿತು.
ಮಹಿಳಾ ಉದ್ಯಮಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪಯಸ್ವಿನಿ ಸಭಾಂಗಣದಲ್ಲಿ ಎರಡು ದಿನಗಳ ಕಾಲ ಮೇಳ ನಡೆಯಿತು. ಕುಲಸಚಿವ ಡಾ.ಎಂ.ಮುರಳೀಧರ ನಂಬಿಯಾರಿ ಮೇಳ ಉದ್ಘಾಟಿಸಿದರು. ವಿದ್ಯಾರ್ಥಿಕಲ್ಯಾಣ ವಿಭಾಗದ ಡೀನ್ ಪೆÇ್ರ. ಕೆ.ಅರುಣ್ ಕುಮಾರ್, ಮಹಿಳಾ ಅಧ್ಯಯನ ಕೇಂದ್ರದ ಸಂಯೋಜಕಿ ಡಾ.ಪಿ. ಸುಪ್ರಿಯಾ, ಡಾ. ಉಮಾ ಪುರುಷೋತ್ತಮನ್, ಡಾ.ವನಿತಾ, ಡಾ.ಚಿತ್ರಾ ಮಣಿ ಉಪಸ್ಥಿತರಿದ್ದರು. ಡಾ.ಆಶಾಲಕ್ಷ್ಮಿ, ಡಾ.ಇ.ಪ್ರಸಾದ್, ಡಾ.ಲಕ್ಷ್ಮಿ ಮೇಳಕ್ಕೆ ನೇತೃತ್ವ ನೀಡಿದರು. ವಸ್ತುಪ್ರದರ್ಶನ ಕೇಂದ್ರಕ್ಕೆ ಉಪಕುಲಪತಿ ಎಚ್. ವೆಂಕಟೇಶ್ವರಲು ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು. ದೈನಂದಿನ ಬಳಕೆಯ ವಸ್ತುಗಳು, ಖಾದ್ಯ ವಸ್ತುಗಳು ಆಹಾರ ಮೇಳದಲ್ಲಿ ಪ್ರದರ್ಶಿಸಲಾಯಿತು. ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಕುಟುಂಬಶ್ರೀ ಮೂಲಕ ಗ್ರಾಮೀಣ ಪ್ರದೇಶದ ಯುವಕರಿಗೆ ಉಚಿತ ತರಬೇತಿ ಮತ್ತು ಉದ್ಯೋಗ ನೀಡುವ ಯೋಜನೆಯಾದ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ ಕುರಿತು ಈ ಸಂದರ್ಭ ಫ್ಲಾಶ್ ಮಾಬ್ ಪ್ರಸ್ತುತಿಪಡಿಸಲಾಯಿತು.
ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರ ವತಿಯಿಂದ ಕುಟುಂಬಶ್ರೀ ಮೇಳ
0
March 14, 2023
Tags