ತಿರುವನಂತಪುರಂ: ಸಾಕ್ಷರತಾ ಪ್ರೇರಕರು ಕೈಯಲ್ಲಿ ಮಗುವಿನೊಂದಿಗೆ ಆಗಮಿಸಿ ಸೆಕ್ರೆಟರಿಯೇಟ್ ಮುಂದೆ ಪೆÇಂಗಲ್ ಮೂಲಕ ಪ್ರತಿಭಟಿಸಿದರು.
ಸ್ಥಳೀಯಾಡಳಿತ ಇಲಾಖೆಯ ಅಡಿಯಲ್ಲಿ ಬರುವ ಪ್ರೇರಕ ಹುದ್ದೆಯನ್ನು ಕೂಡಲೇ ಮರು ವಿನ್ಯಸಿಸಬೇಕೆಂಬ ಆದೇಶವನ್ನು ಕೂಡಲೇ ಜಾರಿಗೊಳಿಸುವಂತೆ ಒತ್ತಾಯಿಸಿ ಈ ಪ್ರತಿಭಟನೆ ನಡೆದಿತ್ತು. ಪ್ರತಿಭಟನಾಕಾರರಲ್ಲಿ ಹದಿನಾಲ್ಕು ಮಂದಿ ಪ್ರತಿಭಟನಾ ಸ್ಥಳದ ಎದುರು ಅಟ್ಟುಕಾಲಮ್ಮನಿಗೆ ಪೆÇಂಗಲ್ ಅರ್ಪಿಸಿದರು.
ತಿರುವನಂತಪುರಂ, ಕೊಲ್ಲಂ, ಆಲಪ್ಪುಳ ಮತ್ತು ಪತ್ತನಂತಿಟ್ಟ ಜಿಲ್ಲೆಗಳಿಂದ ಭಕ್ತರು ಪೆÇಂಗಲ್ ಅರ್ಪಿಸಲು ಆಗಮಿಸಿದ್ದರು. ಅಲಪ್ಪುಳ ಜಿಲ್ಲೆಯ ಸುಚಿತ್ರಾ ಅವರು ಏಳು ತಿಂಗಳ ಮಗುವಿನೊಂದಿಗೆ ಪೆÇಂಗಲ್ಗೆ ಬಂದಿದ್ದರು. ತಿರುವನಂತಪುರದ ರಂಜನಾ, ಲತಾ, ಉμÁಕುಮಾರಿ ಮತ್ತು ಸುನೀತಾ ಪೆÇಂಗಲ ಅರ್ಪಿಸಿದರು. ಕೊಲ್ಲಂನಿಂದ ಶೀಜಾ, ಕಮಲಮ್ಮ, ಉμÁ, ಪ್ರೀತಾ, ಗೀತಾ ಮತ್ತು ದೀಪಾ, ಆಲಪ್ಪುಳದಿಂದ ಪುμÁ್ಪ ಮತ್ತು ಸುಚಿತ್ರ ಮತ್ತು ಪತ್ತನಂತಿಟ್ಟದಿಂದ ಶಶಿಕಲಾ ಮತ್ತು ಜಯಶ್ರೀ ಪೆÇಂಗಲ್ ಅರ್ಪಿಸಲು ಬಂದಿದ್ದರು.
ಪತ್ತನಂತಿಟ್ಟದಿಂದ ಬಂದಿರುವ ಶಶಿಕಲಾ ಪ್ರಥಮ ಬಾರಿಗೆ ಪೆÇಂಗಲ ಹಾಕಿದ್ದರು. ಉಳಿದವರೆಲ್ಲರೂ ಅನೇಕ ಬಾರಿ ಪೆÇಂಗಲ್ ಅರ್ಪಿಸಲು ಬಂದಿದ್ದವರು. ಭಕ್ತರು ಪೆÇಂಗಲ್ ಅರ್ಪಿಸುವ ಮೂಲಕ ತಮ್ಮ ಪ್ರಾರ್ಥನೆಯನ್ನು ಅಮ್ಮ ಕೇಳುತ್ತಾರೆ ಮತ್ತು ಶೀಘ್ರದಲ್ಲೇ ತಮ್ಮ ಬೇಡಿಕೆಗಳನ್ನು ಸ್ವೀಕರಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸೆಕ್ರೆಟರಿಯೇಟ್ ಮುಂದೆ ಪ್ರತಿಭಟನೆ ಪೊಂಗಲ್ ಅರ್ಪಿಸಿ ಪ್ರತಿಭಟನೆ ನಡೆಸಿದ ಸಾಕ್ಷರತಾ ಪ್ರೇರಕರು
0
ಮಾರ್ಚ್ 07, 2023




