ಬದಿಯಡ್ಕ: ಬೆಂಗಳೂರಿನ ರಾಜೀವ ಗಾಂಧಿ ಯುನಿವರ್ಸಿಟಿಯ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ದ್ವಿತೀಯ ರ್ಯಾಂಕ್ ಗಳಿಸಿರುವ ಹರ್ಷಿತ ಬದಿಯಡ್ಕ ಇವರನ್ನು ವೈಷ್ಣವಿ ನಾಟ್ಯಾಲಯ ಪುತ್ತೂರು ಇದರ ವತಿಯಿಂದ ಅಭಿನಂದಿಸಲಾಯಿತು.
ಈಕೆ ಫಾದರ್ ಮುಲ್ಲರ್ಸ್ ಕಾಲೇಜ್ ಆಫ್ ಅಲೈಯ್ಡ್ ಹೆಲ್ತ್ ಸೈನ್ಸ್ ನ ವಿದ್ಯಾರ್ಥಿನಿಯಾಗಿದ್ದು ಪ್ರಾಥಮಿಕ ವಿದ್ಯಾಭ್ಯಾಸವನ್ನು ಶ್ರೀ ಭಾರತಿ ವಿದ್ಯಾಪೀಠ ಬದಿಯಡ್ಕ, ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸವನ್ನು ಪೂರೈಸಿ ನಿಟ್ಟೆ ಯುನಿವರ್ಸಿಟಿ ಕಾಲೇಜಿನಲ್ಲಿ ಪದವಿಯನ್ನು ಪಡೆದಿರುವಳು. ಭರತನಾಟ್ಯದಲ್ಲಿ ವಿದುಷಿ ಪದವಿಯನ್ನು ಗಳಿಸಿರುವ ಈಕೆ ವೈಷ್ಣವಿ ನಾಟ್ಯಾಲಯ ಪುತ್ತೂರು ಇದರ ನಿರ್ದೇಶಕಿ, ವಿದುಷಿ ಯೋಗೀಶ್ವರಿ ಜಯಪ್ರಕಾಶ್ ಇವರ ಶಿμÉ್ಯ.
ರ್ಯಾಂಕ್ ವಿಜೇತೆಗೆ ವೈಷ್ಣವಿ ನಾಟ್ಯಲಯದ ವತಿಯಿಂದ ಅಭಿನಂದನೆ
0
March 14, 2023
Tags