ಕುಂಬಳೆ: ಬಂಟರ ಸಂಘದ ಕುಂಬಳೆ ಪಂಚಾಯತಿ ಸಮಿತಿ ಮಹಾಸಭೆ ಕುಂಬಳೆ ಸಿಟಿ ಹಾಲ್ ನಲ್ಲಿ ಇತ್ತೀಚೆಗೆ ನಡೆಯಿತು. ಸ|ಭೆಯಲ್ಲಿ ಕಳೆದ ನಾಲ್ಕು ವರ್ಷಗಳ ವಿವಿಧ ಕಾರ್ಯಚಟುವಟಿಕೆಗಳ ಬಗ್ಗೆ ಚರ್ಚಿಸಿ ನೂತನ ಸಮಿತಿ ರಚಿಸಲಾಯಿತು.
ಅಧ್ಯಕ್ಷರಾಗಿ ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ, ಕಾರ್ಯದರ್ಶಿಯಾಗಿ ಹರೀಶ್ ಆಳ್ವ ಉಜಾರು, ಖಜಾಂಜಿಯಾಗಿ ಲವಾನಂದ ಭಂಡಾರಿ, ಉಪಾಧ್ಯಕ್ಷರಾಗಿ ರವಿಕುಮಾರ್ ಶೆಟ್ಟಿ, ರವೀಂದ್ರ ಶೆಟ್ಟಿ, ಜೊತೆಕಾರ್ಯದರ್ಶಿಗಳಾಗಿ ಪ್ರೇಮ ಶೆಟ್ಟಿ, ಪುಷ್ಪ ಮತ್ತು ಫಿರ್ಕಾ ಸಂಘಕ್ಕೆ ಪುಷ್ಪಲತ, ಬಾಗೀರಥಿ, ದಾಮೋದರ ಶೆಟ್ಟಿ, ಜನಾರ್ಧನ ಮತ್ತು ಜಿಲ್ಲಾಸಂಘಕ್ಕೆ ಬಿ.ಸುಬ್ಬಯ್ಯ ರೈ, ಶಂಕರ ಆಳ್ವ, ಗೋಪಾಲಕೃಷ್ಣ ಹಾಗೂ ಸದಸ್ಯರಾಗಿ ಲೋಕನಾಥ ಶೆಟ್ಟಿ, ರವೀಂದ್ರ ಶೆಟ್ಟಿ, ಜನಾರ್ಧನ ಶೆಟ್ಟಿ, ಶಿವರಾಮ ಆಳ್ವ, ಶ್ಯಾಮಲಾ ಇವರನ್ನು ಆಯ್ಕೆಮಾಡಲಾಯಿತು.
ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಬಿ.ಸುಬ್ಬಯ್ಯ ರೈ, ಉಪಾಧ್ಯಕ್ಷರಾದ ಚಂದ್ರಹಾಸ ರೈ, ಶ್ಯಾಮಲ ಹಾಗೂ ಫಿರ್ಕಾ ಸಂಘದ ಅಧ್ಯಕ್ಷ ಪದ್ಮನಾಭ ಶೆಟ್ಟಿ ವಳಮಲೆ, ಕಾರ್ಯದರ್ಶಿ ಅಶೋಕ ರೈ ಕೊರೆಕ್ಕಾನ ಮತ್ತು ಜಿಲ್ಲಾ ಬಂಟರ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು. ಹರೀಶ್ ಆಳ್ವ ಉಜಾರು ಸ್ವಾಗತಿಸಿ, ಲೋಕನಾಥ ಶೆಟ್ಟಿ ವಂದಿಸಿದರು.
ಬಂಟರ ಸಂಘದ ಮಹಾಸಭೆ
0
March 14, 2023
Tags