ಬದಿಯಡ್ಕ: ಸದಸ್ಯರ ಆರೋಗ್ಯದತ್ತ ಕ್ಯಾಂಪೆÇ್ಕ ಚಿತ್ತ ಯೋಜನೆಯಡಿಯಲ್ಲಿ ಕ್ಯಾಂಪೆÇ್ಕ ಬದಿಯಡ್ಕ ಶಾಖೆಯ ಸಕ್ರಿಯ ಸದಸ್ಯರಾದ ಕಾಸರಗೋಡು ತಾಲೂಕು, ಬೇಳ ಗ್ರಾಮದ ನಿವಾಸಿ ಈಶ್ವರ ಬಿ ಅವರ ಆಂಜಿಯೊಪ್ಲಾಸ್ಟಿ ಚಿಕಿತ್ಸೆಗೆ ರೂಪಾಯಿ 50,000 ಸಹಾಯಧನ ನೀಡಲಾಯಿತು.
ಕ್ಯಾಂಪೆÇ್ಕ ಉಪಾ|ಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ ಅವರು ಚೆಕ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕ ಪದ್ಮರಾಜ ಪಟ್ಟಾಜೆ, ಬದಿಯಡ್ಕ ಪ್ರಾಂತೀಯ ಪ್ರಬಂಧಕ ಗಿರೀಶ್ ಇ, ಶಾಖಾ ಪ್ರಬಂಧಕ ದಿನೇಶ್ ಕುಮಾರ್ ಕೆ, ಸಿಬ್ಬಂದಿ ವರ್ಗದವರು ಮತ್ತು ಇತರ ಬೆಳೆಗಾರ ಸದಸ್ಯರು ಉಪಸ್ಥಿತರಿದ್ದರು.
ಕ್ಯಾಂಪ್ಕೋ ಸಹಾಯಧನ ಹಸ್ತಾಂತರ
0
March 14, 2023