HEALTH TIPS

ತನ್ನದೇ ಆದ ನ್ಯಾಯಾಲಯ; ಭಾರತದಲ್ಲಿ ಇಸ್ಲಾಮಿಕ್ ಆಡಳಿತವನ್ನು ತರುವುದು ಗುರಿಯಾಗಿತ್ತು: ಪಿ.ಎಫ್.ಐ ಪ್ರಕರಣದಲ್ಲಿ ಎನ್.ಐ.ಎ ಚಾರ್ಜ್ ಶೀಟ್ ಸಲ್ಲಿಕೆ


                  ಕೊಚ್ಚಿ: ಪಾಪ್ಯುಲರ್ ಫ್ರಂಟ್ ಪ್ರಕರಣದಲ್ಲಿ ಎನ್ ಐಎ ಚಾರ್ಜ್ ಶೀಟ್ ಬಿಡುಗಡೆ ಮಾಡಿದೆ. ಕೇರಳದಲ್ಲಿ ದಾಖಲಾದ ಪ್ರಕರಣದ ಅಂತಿಮ ವರದಿಯನ್ನು ಎನ್‍ಐಎ ಸಲ್ಲಿಸಿದೆ.
           ಆರೋಪಿಗಳ ಪಟ್ಟಿಯಲ್ಲಿರುವ 59 ಮಂದಿ ಸೇರಿದಂತೆ ಚಾರ್ಜ್ ಶೀಟ್ ಅನ್ನು ಕೊಚ್ಚಿ ಎನ್ಐಎ ನ್ಯಾಯಾಲಯದಲ್ಲಿ ನೀಡಲಾಯಿತು. ಎನ್‍ಐಎ ಪ್ರಕಾರ, ಪಾಪ್ಯುಲರ್ ಫ್ರಂಟ್‍ನ ನಡೆ ಅನ್ಯ ಧರ್ಮದ ಜನರ ವಿರುದ್ಧ ಪಿತೂರಿ ಸೃಷ್ಟಿಸುವುದು ಮತ್ತು ಜನರ ನಡುವೆ ಧಾರ್ಮಿಕ ಪೈಪೆÇೀಟಿಯನ್ನು ಸೃಷ್ಟಿಸುವುದು ಮತ್ತು ಶಾಂತಿಯುತ ವಾತಾವರಣವನ್ನು ಹಾಳು ಮಾಡುವುದು ಎಂಬ ಲಕ್ಷ್ಯವಾಗಿದೆ.
            ಆರೋಪಿಗಳು ಪ್ರಜಾಪ್ರಭುತ್ವವನ್ನು ನಾಶಪಡಿಸಲು ಮತ್ತು ಇಸ್ಲಾಮಿಕ್ ಆಡಳಿತವನ್ನು ತರಲು ಪ್ರಯತ್ನಿಸಿದರು. ಪಾಪ್ಯುಲರ್ ಫ್ರಂಟ್ ಮುಸ್ಲಿಂ ಯುವಕರಲ್ಲಿ ಶಸ್ತ್ರಾಸ್ತ್ರ ತರಬೇತಿಯನ್ನೂ ನಡೆಸಿತು. 2047ರಲ್ಲಿ ಭಾರತದಲ್ಲಿ ಇಸ್ಲಾಮಿಕ್ ಆಡಳಿತವನ್ನು ತರುವ ಉದ್ದೇಶದಿಂದ ಪಾಪ್ಯುಲರ್ ಫ್ರಂಟ್ ಕೆಲಸ ಮಾಡುತ್ತಿದೆ ಮತ್ತು ಈ ಉದ್ದೇಶಕ್ಕಾಗಿ ಹಣವನ್ನು ಸಂಗ್ರಹಿಸಿದೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಜ್‍ಶೀಟ್‍ನಲ್ಲಿ ಎನ್‍ಐಎ ಗಮನಸೆಳೆದಿದೆ.
          ಪಾಪ್ಯುಲರ್ ಫ್ರಂಟ್ ತನ್ನದೇ ಆದ ದಾರುಲ್ ಖದಾ ಎಂಬ ನ್ಯಾಯಾಲಯವನ್ನು ಹೊಂದಿದ್ದು, ಈ ನ್ಯಾಯಾಲಯದ ತೀರ್ಪುಗಳನ್ನು ಪಿಎಫ್‍ಐ ಕಾರ್ಯಕರ್ತರು ಜಾರಿಗೆ ತಂದಿದ್ದಾರೆ ಎಂದು ಎನ್‍ಐಎ ಹೇಳಿದೆ. ಭಯೋತ್ಪಾದಕ ಸಂಘಟನೆ ಐಸಿಸ್ ಬೆಂಬಲದೊಂದಿಗೆ ದೇಶದಲ್ಲಿ ಅಭದ್ರತೆ ಸೃಷ್ಟಿಸುವುದು ಅವರ ಪ್ರಯತ್ನವಾಗಿತ್ತು. ಅವರ ಚಲನವಲನಕ್ಕೆ ಅಡ್ಡಿಪಡಿಸುವವರನ್ನು ನಿರ್ಮೂಲನೆ ಮಾಡಲು ಪಿಎಫ್‍ಐ ಯೋಜಿಸಿದೆ. ಪಾಪ್ಯುಲರ್ ಫ್ರಂಟ್ ನ ರಾಜ್ಯ ನಾಯಕರಾಗಿದ್ದ ಕರಮನ ಅಶ್ರಫ್ ಮೌಲ್ವಿ ಪ್ರಕರಣದ ಮೊದಲ ಆರೋಪಿ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries