HEALTH TIPS

ವೈದ್ಯರ ಮೇಲೆ ಹೆಚ್ಚುತ್ತಿರುವ ಹಲ್ಲೆ: ಕಾಸರಗೋಡಿನಲ್ಲಿ ವೈದ್ಯಾಧಿಕಾರಿಗಳು, ಸಿಬ್ಬಂದಿ ಮುಷ್ಕರ



                ಕಾಸರಗೋಡು: ವೈದ್ಯರ ಹಾಗೂ ಆಸ್ಪತ್ರೆ ಸಿಬ್ಬಂದಿ ಮೇಲೆ ನಿರಂತರ ನಡೆಯುತ್ತಿರುವ ಹಲ್ಲೆ, ದೌರ್ಜನ್ಯ ಖಂಡಿಸಿ ಕಾಸರಗೋಡು ಜನರಲ್ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಕೆಲಸ ಸ್ಥಗಿತಗೊಳಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಕೋಯಿಕ್ಕೋಡಿನ ಆಸ್ಪತ್ರೆ ವೈದ್ಯರೊಬ್ಬರ ಮೇಲೆ ನಡೆದ ಹಲ್ಲೆ ಖಂಡಿಸಿ ರಾಜ್ಯವ್ಯಾಪಕವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಪ್ರತಿಬಟನೆ ನಡೆಯಿತು. ಈ ಸಂದರ್ಭ ತುರ್ತು ಚಿಕಿತ್ಸಾ ವಿಭಾಗ, ತುರ್ತು ಶಸ್ತ್ರಚಿಕಿತ್ಸಾ ವಿಭಾಗ ಎಂದಿನಂತೆ ಕಾರ್ಯಾಚರಿಸಿತ್ತು.
             ಐಎಂಎ, ಕೆಜಿಎಂಓಎ, ಐ.ಡಿ.ಎ ಜಂಟಿ ಸಹಯೋಗದೊಂದಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ವಐದ್ಯರ ಮುಷ್ಕರಕ್ಕೆ ರೋಗಿಗಳೂ ಬೆಂಬಲ ಸೂಚಿಸಿ ದೂರ ಉಳಿದುಕೊಂಡದ್ದು ವಿಶೇಷತೆಯಾಗಿತ್ತು. ಐಎಂಎ ನಿಕಟಪೂರ್ವ ರಾಜ್ಯಾಧ್ಯಕ್ಷ ಶ್ರೀಕುಮಾರ್ ವಾಸುದೇವನ್ ಧರಣಿ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಡಾ. ಸುರೇಶ್ ಬಾಬು ಪಿ.ಎಂ ಅಧ್ಯಕ್ಷತೆ ವಹಿಸಿದ್ದರು.
               ಜನರಲ್ ಆಸ್ಪತ್ರೆ ಸುಪರಿಂಟೆಂಡೆಂಟ್ ಡಾ. ರಾಜಾರಾಮ್, ಡ. ಜನಾರ್ದನ ನಾಯ್ಕ್, ಡಾ. ಎ. ನಾರಾಯಣ ನಾಯ್ಕ್, ಪ್ರೊ. ವಿ.ಗೋಪಿನಾಥನ್, ಪ್ರೊ. ಸ್ರೀಕಾಂತ್, ಡಾ. ಜಮಾಲ್ ಅಹಮ್ಮದ್, ಡಾ. ಭರತನ್, ಡ. ಶ್ರೀಪತಿ ಕಜಂಪಾಡಿ, ಡಾ. ಬಿ.ಎಸ್. ರಾವ್, ಡಾ. ಕೆ.ವಿ ಅಜಿತೇಶ್, ಡಾ. ಗಣೇಶ್ ಮಯ್ಯ, ಡಾ> ಖಾಸಿಂ ಮುಂತಾದವರು ಉಪಸ್ಥಿತರಿದ್ದರು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries