ಪೆರ್ಲ : ಪೆರ್ಲ ಸೇವಾ ಸಹಕಾರಿ ಬ್ಯಾಂಕ್ನ ಆಡಳಿತ ಸಮಿತಿಗೆ ನಿರ್ದೇಶಕರ ಆಯ್ಕೆಗಾಗಿ ಮಾ 19ರಂದು ಚುನಾವಣೆ ನಡೆಯಲಿದ್ದು, ಈ ಬಾರಿ 23ಮಂದಿ ಸ್ಪರ್ಧಾಕಣದಲ್ಲಿದ್ದಾರೆ. ಕಳೆದ ಎರಡುವರೆ ದಶಕದಿಂದ ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಆಡಳಿತ ಆರೆಸ್ಸೆಸ್ ನೇತೃತ್ವದ ಸಹಕಾರ ಭಾರತಿ ವಶದಲ್ಲಿದ್ದು, ಇದೇ ಮೊದಲ ಬಾರಿಗೆ ಆಡಳಿತಾರೂಢ ಸಹಕಾರ ಭಾರತಿ ಜತೆಗೆ ಸಂಸ್ಕಾರ ಭಾರತಿ ಎಂಬ ಒಕ್ಕೂಟ ಚುನಾವಣಾ ಕಣಕ್ಕೆ ಧುಮುಕಿದೆ.
ಹನ್ನೊಂದು ಮಂದಿ ನಿರ್ದೇಶಕರ ಆಯ್ಕೆಗಾಗಿ ಸಹಕಾರ ಭಾರತಿ ಹಾಗೂ ಸಂಸ್ಕಾರ ಭಾರತಿ ಎಲ್ಲ ಸ್ಥಾನಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಪಕ್ಷೇತರ ಅಭ್ಯರ್ಥಿಯಾಗಿ ಡಿ. ರಾಮ ಭಟ್ ಅವರೂ ಸ್ಪರ್ಧಿಸುತ್ತಿದ್ದಾರೆ. ಈ ಹಿಂದೆ ಹಲವು ಬಾರಿ ಎದುರಾಳಿಗಳಿಲ್ಲದೆ ಸಹಕಾರ ಭಾರತಿ ಅಭ್ಯರ್ಥಿಗಳು ಗೆಲುವು ಸಾಧಿಸಿದ ನಿದರ್ಶನಗಳಿವೆ.
ಸಹಕಾರ ಭಾರತಿಯಿಂದ ವೈ. ವೆಂಕಟ್ರಮಣ ಭಟ್, ಕೃಷ್ಣ ಬಂಗೇರ, ನಾರಾಯಣ ಪ್ರಸಾದ್, ಟಿ. ಪ್ರಸಾದ್, ಎನ್. ರಮೇಶ್, ಕೆ. ಶಿವಕುಮಾರ್, ಶ್ಯಾಮಲಾ ಭಟ್, ದೇವಿಕಾ ವೆಂಕಟೇಶ್, ಕವಿತ, ರೆಖಾಜ್ಯೋತಿ, ವೆಂಕಟೇಶ ನಾಯಕ್ ಅಬ್ಯರ್ಥಿಗಳಾಗಿದ್ದರೆ, ಸಂಸ್ಕಾರ ಭಾರತಿಯಿಂದ ಬಿ. ಚಂದ್ರಶೇಖರ, ಎನ್. ಕಿಶೋರ್ ಕುಮಾರ್, ಕೆ. ಪ್ರಕಾಶ್ ಶೆಟ್ಟಿ, ರಮಾನಂದ ಎಡಮಲೆ, ಸೀತಾರಾಮ ರೈ, ಉದಯ ಚೆಟ್ಟಿಯಾರ್, ಬಿ.ದಿವ್ಯಾ, ಬಿ. ಸುಧಾಕುಮಾರಿ, ಪಿ.ವಾರಿಜಾ, ಪಿ.ರವೀಂದ್ರ ನಾಯಕ್, ಸತೀಶ್ ಕುಲಾಲ್ ಅಭ್ಯಥಿಗಳಾಗಿ ಕಣದಲ್ಲಿದ್ದಾರೆ.
ನಾಳೆ ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಚುನಾವಣೆ: ಸಹಕಾರ ಭಾರತಿಗೆದುರಾಗಿ ಕಣಕ್ಕಿಳಿದ ಸಂಸ್ಕಾರ ಭಾರತಿ
0
March 17, 2023
Tags