HEALTH TIPS

ರಕ್ತೇಶ್ವರಿ ವನಶಾಸ್ತಾ ದೇವಸ್ಥಾನದ ಕಳಿಯಾಟ ಮಹೋತ್ಸವ ಇಂದಿನಿಂದ


              ಮುಳ್ಳೇರಿಯ: ಚೆರುವತ್ತೂರು ತಿಮಿರಿ ನಳಿಲಂಕಂಡಂ ವಳಿಯಲ್ಲತ್‍ನ ಕಲಕಟ್ ರಕ್ತೇಶ್ವರಿ ವನಶಾಸ್ತ ದೇವಸ್ಥಾನದ ಮುವಾಂಡ್ ಕಳಿಯಾಟ ಮಹೋತ್ಸವ ಮಾ.10ರಂದು ಆರಂಭವಾಗಲಿದೆ. ಮಾ.10ರಿಂದ 12ರವರೆಗೆ ಮೂರು ದಿನಗಳ ಕಾಲ ನಡೆಯಲಿರುವ ಮಹೋತ್ಸವಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ದೇವಸ್ಥಾನದ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
            10ರಂದು ಮಧ್ಯಾಹ್ನ 3.30ಕ್ಕೆ ನಳಿಲಕಂಡಂ ಸರ್ಕಾರಿ ಯು.ಪಿ.ಶಾಲೆ ಆವರಣದಿಂದ ವಿವಿಧ ದೇವಸ್ಥಾನಗಳಿಂದ ಸಂಗ್ರಹಿಸಿದ ಹೊರೆಕಾಣಿಕೆಗಳ ಮೆರವಣಿಗೆ ಹೊರಡಲಿದೆ. ಸಂಜೆ 6 ಗಂಟೆಗೆ ಸ್ಥಳೀಯ ಕಲಾವಿದರಿಂದ ಕಾರ್ಯಕ್ರಮಗಳು ನಡೆಯಲಿವೆ. ಮಾರ್ಚ್ 11 ರಂದು ಗಣಪತಿಹೋಮದ ನಂತರ ತಾಂತ್ರಿಕ ವಿಧಿವಿಧಾನಗಳು ಆರಂಭವಾಗಲಿವೆ. ಅಪರಾಹ್ನ 3ಕ್ಕೆ ದೈವಗಳ ತೊಡಂಙಲ್, 4 ಕ್ಕೆ ಕರಿಂಕುಟ್ಟಿ ಸಾಸ್ತಪ್ಪನವರ ಧ್ವಜಾರೋಹಣ, 7 ಕ್ಕೆ ಕೊರತ್ತಿ ಸಹಿತ ಕರಿಂಕುಟ್ಟಿ ಸಾಸ್ತಪ್ಪನ ವೆಳ್ಳಾಟ್ಟಂ, ನಿರ್ಗಮನ, ರಕ್ತೇಶ್ವರಿ ತೊಟ್ಟಂ, ಕಾಲಭೈರವ, ಕೊರತ್ತಿ, ವೆಲ್ಲಭೂತ, ಪೊಟ್ಟ ದೈವದ ಹೊರಡುವ ಕಾರ್ಯಕ್ರಮ ನಡೆಯಲಿದೆ. ರಾತ್ರಿ 12 ಕ್ಕೆ ಕರಿಂಕುಟ್ಟಿ ಶಾಸ್ತಪ್ಪನ ದರ್ಶನ, ರಕ್ತೇಶ್ವರಿ, ಕರಗುಳಿಗ ದೈವದರ್ಶನ ನಡೆಯಲಿದೆ. ಬಳಿಕ ಮುಂಜಾನೆ ಪ್ರಸಾದ ವಿತರಣೆ ನಡೆಯಲಿದೆ. ಪತ್ರಿಕಾಗೋಷ್ಠಿಯಲ್ಲಿ ದೈವಕ್ಷೇತ್ರ ಸಮಿತಿ ಅಧ್ಯಕ್ಷ ಕರಿಂಪಿಲ್ ಕೃಷ್ಣನ್, ಟಿ.ವಿ.ಕುಂಞÂ್ಞ ರಾಮನ್, ಕೆ.ಪಿ.ಸುಕುಮಾರ ಪೊದುವಾಲ್, ಕೆ.ಸುರೇಶನ್ ಮತ್ತು ಟಿ.ವಿ.ಸುಕುಮಾರನ್ ಉಪಸ್ಥಿತರಿದ್ದರು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries