HEALTH TIPS

ಉಳಿಯ ಶ್ರೀ ಧನ್ವಂತರಿ ಸನ್ನಿಧಿಯಲ್ಲಿ ಕಳಿಯಾಟ ಮಹೋತ್ಸವಕ್ಕೆ ಚಾಲನೆ



            ಕಾಸರಗೋಡು: ಮಧೂರು ಸನಿಹದ ಉಳಿಯ ಶ್ರೀ ಧನ್ವಂತರಿ ಸನ್ನಿಧಿಯಲ್ಲಿ ಕಳಿಯಾಟ ಮಹೋತ್ಸವ ಬುಧವಾರ ಆರಂಭಗೊಂಡಿತು.  ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಬೆಳಗ್ಗೆ ಗಣಪತಿ ಹೋಮ, ಶ್ರೀ ಧನ್ವಂತರಿ ದೇವರಿಗೆ ಕಾರ್ತಿಕ ಪೂಜೆ, ಶ್ರೀ ಧನ್ವಂತರೀ ಸನ್ನಿಧಿಯಲ್ಲಿ ದೇವತಾ ಪ್ರಾರ್ಥನೆ ನಂತರ ಶ್ರೀ ಭಂಡಾರದ ಆಗಮನವಾಯಿತು.
             ಈ ಸಂದರ್ಭ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಉಪ್ಪಳ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ, ಮಾಯಿಪ್ಪಾಡಿ ಅರಮನೆ ಪ್ರತಿನಿಧಿ ವಕೀಲ ರಾಜೇಂದ್ರ ರಾವ್ ಕ್ಷೇತ್ರಕ್ಕೆ ಭೇಟಿ ನೀಡಿದರು. ಇವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಕ್ಷೇತ್ರಕ್ಕೆ ಬರಮಾಡಿಕೊಲ್ಳಲಾಯಿತು.ಶ್ರೀ ಪಂಜುರ್ಲಿ ದೈವದ ತೊಡಙಳ್, ಕುಟ್ಟಿಚ್ಚಾತನ್ ದೈವ ಸ್ತುತಿ, ಇತ್ತಿಕಟ್ಟ್ ಚಾಮುಂಡಿ ದೈವದ ತೊಡಙಳ್ ಸಂಜೆ  ಕುಟ್ಟಿಚ್ಚಾತನ್ ದೈವ ಕೋಲ ನಡೆಯಿತು.
              2ರಂದು ಬೆಳಗ್ಗೆ 9ಕ್ಕೆ ಇತ್ತಿಕಟ್ಟೆ ಚಾಮುಂಡಿ ದೈವ ಕೋಲ, ಅರೆಯಾಲ್ ಚಾಮುಂಡಿ ದೈವ, ಸಂಜೆ 5.30ಕ್ಕೆ ವಿಷ್ಣುಮೂರ್ತಿ ದೈವ, ಪಡ್ಡೆಯಿ ಧೂಮಾವತಿ, ರಕ್ತೇಶ್ವರೀ ದೈವಗಳ ತೊಡಙಳ್ ನಡೆಯುವುದು. ರಾತ್ರಿ 8ಕ್ಕೆ ದೈವಗಳ ಕೋಲ ನಡೆಯುವುದು.
3ರಂದು ಬೆಳಗ್ಗೆ 6ಕ್ಕೆ ರಕ್ತೇಶ್ವರಿ ದೈವ, 11ಕ್ಕೆ ಪಡ್ಡೆಯ ಧೂಮಾವತೀ ದೈವ, ಮಧ್ಯಾಹ್ನ 12ಕ್ಕೆ ಶ್ರೀ ವಿಷ್ಣುಮೂರ್ತಿ ದೈವ, 3ಕ್ಕೆ ಅಧಿಕಾರಿ ಚಾಮುಂಡಿ ದೈವದ ಕೋಲ, ಸಂಜೆ 5ಕ್ಕೆ ವಿಳಕ್ಕ್ ತಿರಿ, 5.30ಕೆಕ ಭಂಡಾರದ ನಿರ್ಗಮನ ನಡೆಯುವುದು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries