ಬದಿಯಡ್ಕ: ಜೀರ್ಣೋದ್ಧಾರಗೊಳ್ಳುತ್ತಿರುವ ಮಾನ್ಯ ಕಾರ್ಮಾರು ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಏ.15ರಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಚಿತ್ತೈಸಲಿದ್ದು, ಶ್ರೀ ಕ್ಷೇತ್ರದ ಸಮಿತಿಯ ವತಿಯಿಂದ ಪಾದುಕಾ ಪೂಜೆ ನಡೆಯಲಿದೆ. ಅಂದು ಅಪರಾಹ್ನ 2.30ಕ್ಕೆ ಶ್ರೀಗಳಿಗೆ ಪೂರ್ಣಕುಂಭ ಸ್ವಾಗತ, ಪಾದುಕಾ ಪೂಜೆ, ಆಶೀರ್ವಚನ ನಡೆಯಲಿದೆ. ಸುಮಾರು 3 ಕೋಟಿ ರೂಗಳ ಅಂದಾಜು ವೆಚ್ಚದಲ್ಲಿ ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯವು ನಡೆಯುತ್ತಿದೆ.
ಏ.15ರಂದು ಕಾರ್ಮಾರು ಕ್ಷೇತ್ರಕ್ಕೆ ರಾಘವೇಶ್ವರ ಶ್ರೀಗಳ ಭೇಟಿ
0
April 14, 2023
Tags