ತಿರುವನಂತಪುರಂ: ದಿನೇ ದಿನೇ ಹೆಚ್ಚುತ್ತಿರುವ ಬೇಸಿಗೆಯ ತೀವ್ರ ಬಿಸಿಲಿನಿಂದ ಕಂಗೆಟ್ಟಿರುವ ಕೇರಳಿಗರಿಗೆ ಸಿಹಿಸುದ್ದಿ ನೀಡಿದ್ದು, ಏಪ್ರಿಲ್ 20ರವರೆಗೆ ಕೆಲವು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
ಈ ಅವಧಿಯಲ್ಲಿ ದಕ್ಷಿಣ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಏಪ್ರಿಲ್ 21 ರಿಂದ 27 ರವರೆಗೆ ರಾಜ್ಯದಾದ್ಯಂತ ಸಾಮಾನ್ಯ ಮಳೆಯಾಗಲಿದೆ. ಕೆಲವು ಜಿಲ್ಲೆಗಳಲ್ಲಿ ಭಾನುವಾರ ಅಲ್ಲಲ್ಲಿ ಮಳೆಯಾಗಿದ್ದು, ಸ್ವಲ್ಪ ಸಮಾಧಾನ ತಂದರೂ, ಉಷ್ಣತಾ ಮಟ್ಟ ಗಣನೀಯವಾಗಿ ಇಳಿಕೆಯಾಗಿಲ್ಲ.
ಏತನ್ಮಧ್ಯೆ, ಶುಕ್ರವಾರ ಪಾಲಕ್ಕಾಡ್ ಮತ್ತು ತ್ರಿಶೂರ್ನಲ್ಲಿ 40 ಡಿಗ್ರಿ ಸೆಲ್ಸಿಯಸ್ ಉಷ್ಣತೆ ದಾಖಲಾಗಿದ್ದು ಇತ್ತೀಚಿನ ಅತೀಹೆಚ್ಚು ಏರಿಕೆ ತೋರಿಸಿದೆ. ಪಾಲಕ್ಕಾಡ್ನಲ್ಲಿ ಗರಿಷ್ಠ ತಾಪಮಾನ 38.2 ಡಿಗ್ರಿ ಸೆಲ್ಸಿಯಸ್ಗೆ ಹೆಚ್ಚಿದರೆÉ, ತ್ರಿಶೂರ್ನಲ್ಲಿ 36.1 ಡಿಗ್ರಿ ಸೆಲ್ಸಿಯಸ್ ನಷ್ಟಿತ್ತು. ಏಪ್ರಿಲ್ 20 ರವರೆಗೆ ದಕ್ಷಿಣ ಜಿಲ್ಲೆಗಳು ಮತ್ತು ಪಾಲಕ್ಕಾಡ್ನಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ ಎಂದು ಐಎಂಡಿ ಹೇಳಿದೆ. ಏಪ್ರಿಲ್ 21 ಮತ್ತು 27 ರ ನಡುವೆ, ತಿರುವನಂತಪುರಂ, ಕೊಲ್ಲಂ ಮತ್ತು ಪತ್ತನಂತಿಟ್ಟದ ಕೆಲವು ಪ್ರದೇಶ ಹೊರತುಪಡಿಸಿ ರಾಜ್ಯದಾದ್ಯಂತ ತಾಪಮಾನವು ಸಾಮಾನ್ಯವಾಗಿರಬಹುದು ಎನ್ನಲಾಗಿದೆ.
"ಬೇಸಿಗೆಯ ಮಳೆಯು ಏಪ್ರಿಲ್ 21 ರ ಹೊತ್ತಿಗೆ ಹೆಚ್ಚಾಗುವ ಸಾಧ್ಯತೆಯಿದೆ. ಮಳೆಯು ಶುಷ್ಕವಾರುವ ಉತ್ತರ ಭಾಗಗಳನ್ನು ಒಳಗೊಂಡಂತೆ ಹೆಚ್ಚಿನ ಪ್ರದೇಶಗಳನ್ನು ಆವರಿಸುತ್ತದೆ" ಎಂದು ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಹವಾಮಾನಶಾಸ್ತ್ರಜ್ಞ ರಾಜೀವನ್ ಎರಿಕ್ಕುಳಂ ಹೇಳಿದ್ದಾರೆ.
ಪತ್ತನಂತಿಟ್ಟ ಹೊರತುಪಡಿಸಿ, ಏಪ್ರಿಲ್ 6-12 ರ ಅವಧಿಯಲ್ಲಿ ರಾಜ್ಯದಲ್ಲಿ 60% ಕಡಿಮೆ ಮಳೆಯಾಗಿದೆ. ಮಾರ್ಚ್ 1 ರಿಂದ 40% ಕೊರತೆ ಮಳೆಯಾಗಿದೆ. ಕಣ್ಣೂರಿನಲ್ಲಿ ಯಾವುದೇ ಮಳೆ ದಾಖಲಾಗಿಲ್ಲ.
ಕೇರಳಕ್ಕೆ ಸಮಾಧಾನ? ಏಪ್ರಿಲ್ 21 ರವರೆಗೆ ಅಲ್ಲಲ್ಲಿ ಮಳೆ ಮುನ್ಸೂಚನೆ
0
April 17, 2023