ತಿರುವನಂತಪುರ: ರೈಲ್ವೇ ವಿಭಾಗವು ಶೀಘ್ರದಲ್ಲೇ ಚಾಲನೆ ನೀಡಲಿರುವ ವಂದೇ ಭಾರತ್ ಎಕ್ಸ್ಪ್ರೆಸ್ನ ಪ್ರಾಯೋಗಿಕ ಓಡಾಟ ಸೋಮವಾರ ಪ್ರಾರಂಭಿಸಿದೆ.
ರೈಲು ಮೂರು ಗಂಟೆ 18 ನಿಮಿಷಗಳಲ್ಲಿ ಎರ್ನಾಕುಳಂ ತಲುಪಿತು. ತೆಗೆದುಕೊಳ್ಳುವ ಸಮಯವು ಜನ ಶತಾಬ್ದಿ (3 ಗಂಟೆ 20 ನಿಮಿಷಗಳು) ಮತ್ತು ರಾಜಧಾನಿ ಎಕ್ಸ್ಪ್ರೆಸ್ (3 ಗಂಟೆ 17 ನಿಮಿಷಗಳು) ಚಾಲನೆಯಲ್ಲಿರುವ ಸಮಯವನ್ನು ಹೋಲುತ್ತದೆ.
ರೈಲು ಮಧ್ಯಾಹ್ನ 12.30 ಕ್ಕೆ ಗಮ್ಯಸ್ಥಾನವಾದ ಕಣ್ಣೂರು ತಲಪಿತು. ಮಧ್ಯಾಹ್ನ 2.30ಕ್ಕೆ ಹಿಂದಿರುಗಿತು.
ವಂದೇ ಭಾರತ್ ಎಕ್ಸ್ಪ್ರೆಸ್ ತಿರುವನಂತಪುರಂ ಸೆಂಟ್ರಲ್ನಿಂದ ಬೆಳಗ್ಗೆ 5.10ಕ್ಕೆ ಪ್ರಾಯೋಗಿಕ ಸಂಚಾರ ಆರಂಭಿಸಿತು. ರೈಲು ಕೊಲ್ಲಂ ತಲುಪಲು 50 ನಿಮಿಷಗಳನ್ನು ತೆಗೆದುಕೊಂಡಿತು. ಬೆಳಗ್ಗೆ 7.28ಕ್ಕೆ ಕೊಟ್ಟಾಯಂ ತಲುಪಿತ್ತು
ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 25 ರಂದು ತಿರುವನಂತಪುರಂ ಸೆಂಟ್ರಲ್ನಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ಗೆ ಚಾಲನೆ ನೀಡಲಿದ್ದಾರೆ.
2019 ರಲ್ಲಿ ರೈಲು ಪ್ರಾರಂಭವಾದ ನಾಲ್ಕು ವರ್ಷಗಳ ನಂತರ ಕೇರಳ ತನ್ನ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ಅನ್ನು ಪಡೆಯುತ್ತಿದೆ. ವಂದೇ ಭಾರತ್ ಎಕ್ಸ್ಪ್ರೆಸ್ ತಿರುವನಂತಪುರಂ ಮತ್ತು ಕಣ್ಣೂರು ನಡುವೆ 488 ಕಿಮೀ ಸಂಚರಿಸಲಿದೆ. ದೂರವನ್ನು 6.30 ಗಂಟೆಗಳಲ್ಲಿ ಕ್ರಮಿಸುವ ಸಾಧ್ಯತೆ ಇದೆ. ಆದಾಗ್ಯೂ, ನಿಲುಗಡೆಗಳನ್ನು ಅಂತಿಮಗೊಳಿಸಿದ ನಂತರವೇ ನಿಜವಾದ ಅವಧಿಯು ತಿಳಿದುಬರಲಿದೆ.
ಸದ್ಯಕ್ಕೆ ತಿರುವನಂತಪುರಂ, ಕೊಲ್ಲಂ, ಕೊಟ್ಟಾಯಂ, ಎರ್ನಾಕುಲಂ ಟೌನ್, ತ್ರಿಶೂರ್, ತಿರೂರ್, ಕೋಝಿಕ್ಕೋಡ್ ಮತ್ತು ಕಣ್ಣೂರಿನಲ್ಲಿ ರೈಲು ನಿಲುಗಡೆ ನೀಡಲಾಗಿದೆ.
ರೈಲ್ವೆ ಮಂಡಳಿಯು ಇಂದು ಸಂಜೆಯೊಳಗೆ ಗಮ್ಯಸ್ಥಾನ, ವೇಳಾಪಟ್ಟಿ ಮತ್ತು ನಿಲ್ದಾಣಗಳನ್ನು ತಿಳಿಸುವ ನಿರೀಕ್ಷೆಯಿದೆ.
ತಿರುವನಂತಪುರಂ - ಕಣ್ಣೂರು - 488 ಕಿ.ಮೀ
ರಾಜಧಾನಿ ಎಕ್ಸ್ಪ್ರೆಸ್ – ಎಸಿ 3 ಶ್ರೇಣಿ ರೂ 1137 (ಡೈನಾಮಿಕ್ ಶುಲ್ಕವನ್ನು ಹೊರತುಪಡಿಸಿ, ಅಡುಗೆ ಶುಲ್ಕ ರೂ 185 ಸೇರಿದಂತೆ) - 7.57 ಗಂಟೆಗಳು - 8 ನಿಲ್ದಾಣಗಳು
ಜನಶತಾಬ್ದಿ - ಸೆಕೆಂಡ್ ಸಿಟ್ಟಿಂಗ್ - ರೂ 220, ಎಸಿ ಚೇರ್ ಕಾರ್ ರೂ 755 - 9.35 ಗಂಟೆಗಳು - 15 ನಿಲ್ದಾಣಗಳು
ಕೇರಳದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ಮೊದಲ ಪ್ರಯೋಗಿಕ ಸಂಚಾರ: ಎರ್ನಾಕುಳಂಗೆ ತಗಲಿದ ಸಮಯ 3 ಗಂಟೆ 18 ನಿಮಿಷ
0
April 17, 2023
Tags