HEALTH TIPS

ಹಸಿರು ಕ್ರಿಯಾಸೇನೆಗೆ ಬಳಕೆದಾರರ ಶುಲ್ಕ ಪಾವತಿಸದಿದ್ದರೆ ಆಸ್ತಿ ತೆರಿಗೆಯಿಂದ ವಸೂಲಿ: ರಾಜ್ಯ ಸರ್ಕಾರದಿಂದ ಆದೇಶ


               ತಿರುವನಂತಪುರಂ: ಹಸಿರು ಕ್ರಿಯಾಸೇನೆಗೆ ಬಳಕೆದಾರರ ಶುಲ್ಕ ಪಾವತಿಸದಿದ್ದಲ್ಲಿ ಆಸ್ತಿ ತೆರಿಗೆ ಜತೆಗೆ ಬಾಕಿ ಎಂದು ಪರಿಗಣಿಸಲು ನಿರ್ಧರಿಸಲಾಗಿದೆ.
         ಈ ಕುರಿತು ಸ್ಥಳೀಯಾಡಳಿತ ಇಲಾಖೆ ಆದೇಶ ಹೊರಡಿಸಿದೆ. ಇಂದಿನಿಂದಲೇ ಆದೇಶ ಜಾರಿಗೆ ಬಂದಿದೆ. ಬಳಕೆದಾರರ ಶುಲ್ಕವನ್ನು ಪಾವತಿಸಲು ಜನರು ಸಿದ್ಧರಿಲ್ಲ ಎಂಬ ದೂರುಗಳು ಬಂದ ನಂತರ ಹೊಸ ನಿರ್ಧಾರ ತೆಗೆದುಕೊಳ್ಳಲಾಗಿದೆ.
             ಕುಟುಂಬಶ್ರೀ ಮಿಷನ್ ಅಡಿಯಲ್ಲಿ, ಹಸಿರು ಕ್ರಿಯಾಸೇನೆಯು ಮನೆ ಮತ್ತು ಸಂಸ್ಥೆಗಳಿಂದ ಪ್ಲಾಸ್ಟಿಕ್ ಸೇರಿದಂತೆ ಅಜೈವಿಕ ತ್ಯಾಜ್ಯವನ್ನು ಸಂಗ್ರಹಿಸುತ್ತದೆ. ಸ್ಥಳೀಯಾಡಳಿತ ಸಂಸ್ಥೆಗಳ ಸ್ವರೂಪ ಮತ್ತು ಪ್ರದೇಶದ ವಿಶೇಷತೆಗೆ ಅನುಗುಣವಾಗಿ ತಿಂಗಳಿಗೆ 50 ರಿಂದ 100 ರೂ.ಪಾವತಿಸಬೇಕು. ಸರ್ಕಾರದ ಆದೇಶದ ಪ್ರಕಾರ ಇನ್ಮುಂದೆ ಈ ಶುಲ್ಕ ಪಾವತಿಸದ ಬಳಕೆದಾರರಿಂದ ಆಸ್ತಿ ತೆರಿಗೆಯೊಂದಿಗೆ ವಸೂಲಿ ಮಾಡಬಹುದು.
           ಈ ಆದೇಶವು ಎಪಿಎಲ್ ಮತ್ತು ಬಿಪಿಎಲ್ ಎಂಬ ಭೇದವಿಲ್ಲದೆ ಎಲ್ಲರಿಗೂ ಅನ್ವಯಿಸುತ್ತದೆ. ಯಾವುದೇ ವಿಭಾಗವನ್ನು ಹೊರಗಿಡಬೇಕಾದರೆ ಆಯಾ ಸ್ಥಳೀಯಾಡಳಿತ ಸಂಸ್ಥೆಗಳು ನಿರ್ಧರಿಸಬೇಕು. ಬಳಕೆದಾರರ ಶುಲ್ಕ ಪಾವತಿಸದವರಿಗೆ ಹಸಿರು ಕರ್ಮಸೇನೆಯ ಸೇವೆಯನ್ನು ನಿರಾಕರಿಸುವ ಅಧಿಕಾರವೂ ಸ್ಥಳೀಯ ಸಂಸ್ಥೆಗಳಿಗೆ ಇದೆ.
            ಸ್ವಂತ ಹಿತ್ತಲನ್ನು ಹೊಂದಿರುವವರಿಗೂ ಪ್ರಸ್ತುತ ಅಜೈವಿಕ ತ್ಯಾಜ್ಯವನ್ನು ಹೂಳಲು ಅಥವಾ ಸುಡಲು ಅವಕಾಶವಿಲ್ಲ.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries