ಕೋಳಂಚೇರಿ: ಕಾಶ್ಮೀರದ ವೈμÉ್ಣೂೀದೇವಿ ದೇವಸ್ಥಾನದಿಂದ ಕಾಸರಗೋಡಿನ ನಿವಾಸಿಗಳು 4000 ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಶಬರೀಶನಿಗೆ ನಮನ ಸಲ್ಲಿಸಿ ಕೃತಾರ್ಥರಾಗುವ ಮೂಲಕ ಗಮನ ಸೆಳೆದಿದ್ದಾರೆ.
ರಾಮದಾಸ್ ನಗರ ಕೂಡ್ಲು ನಿವಾಸಿಗಳಾದ ನಳಿನಾಕ್ಷ ಸ್ವಾಮಿ ಹಾಗೂ ಪ್ರಭಾಕರ ಮಣಿಯಾಣಿ ಸ್ವಾಮಿಗಳು ಕಿಲೋಮೀಟರ್ ಗಟ್ಟಲೇ ಸಂಚರಿಸಿ ಶಬರೀಶನ ದರ್ಶನ ಪಡೆದರು.
ನವೆಂಬರ್ 30, 2022 ರಂದು ಇಬ್ಬರೂ ಕಾಸರಗೋಡಿನಿಂದ ರೈಲಿನಲ್ಲಿ ಜಮ್ಮುವಿಗೆ ತೆರಳಿದ್ದರು. ಇಬ್ಬರೂ ಡಿಸೆಂಬರ್ 4 ರಂದು ಜಮ್ಮು ತಲುಪಿ ವೈμÉ್ಣೂೀದೇವಿ ದೇವಸ್ಥಾನ ಭೇಟಿ ನೀಡಿದರು. ಬೆಳಿಗ್ಗೆ ಐದು ಗಂಟೆಗೆ ತಯಾರಿ ನಡೆಸಿ ಏಳು ಗಂಟೆಗೆ ಪ್ರಯಾಣ ಆರಂಭಿಸಿದರು. ಒಂದು ದಿನ 40-45 ಕಿ.ಮೀ.ಇವರ ನಡಿಗೆ. ಬೆಳಿಗ್ಗೆ 4 ಗಂಟೆಗೆ ಆರಂಭವಾದ ಪ್ರಯಾಣ ಸಂಜೆ 6 ಗಂಟೆಗೆ ಕೊನೆಗೊಳ್ಳುತ್ತದೆ. ಬೇರೆ ರಾಜ್ಯಗಳ ದೇವಸ್ಥಾನ, ಹೋಟೆಲ್, ಶಾಲೆಗಳಲ್ಲಿ ವಿಶ್ರಾಂತಿ ಪಡೆದು ಕೆಲವೆಡೆ ಬಸ್ ನಿಲ್ದಾಣಗಳೇ ಆಶ್ರಯ ತಾಣಗಳಾದವು.
ವಿಪರೀತ ಚಳಿಯಲ್ಲಿ ಸಾಮಾನ್ಯ ಬಟ್ಟೆ ಧರಿಸಿ ಇಬ್ಬರೂ ಬರಿಗಾಲಿನಲ್ಲಿ ನಡೆದು ಬಂದರು. ಪ್ರಯಾಣವು ಸವಾಲಿನದ್ದಾಗಿತ್ತು, ಆದರೆ ಅವರ ಇಚ್ಛಾಶಕ್ತಿ ಮತ್ತು ಅಯ್ಯಪ್ಪನ ಮೇಲಿನ ನಂಬಿಕೆ ತಮ್ಮನ್ನು ಮುಂದುವರಿಸಿದೆ ಎಂದು ಇಬ್ಬರೂ ಹೇಳುತ್ತಾರೆ.
ಜಾತಿ, ಧರ್ಮದ ಭೇದವಿಲ್ಲದೆ ಜನರು ಆಹಾರ ಮತ್ತು ವಿಶ್ರಾಂತಿ ಕೇಂದ್ರವನ್ನು ಸಿದ್ಧಪಡಿಸಿದ್ದಾರೆ. ಇಬ್ಬರೂ ಮಾರ್ಚ್ 7 ರಂದು ಕಾಸರಗೋಡಿನ ಕುತ್ಯಾಳ ಗೋಪಾಲಕೃಷ್ಣ ಸ್ವಾಮಿ ದೇವಸ್ಥಾನಕ್ಕೆ ಬಂದು ಮಾರ್ಚ್ 25 ರಂದು ಮತ್ತೆ ಹೊರಟರು. ಕೇರಳಕ್ಕೆ ಬಂದಾಗ ಕೆಲವೆಡೆ ಸೇವಾ ಭಾರತಿ ಹಾಗೂ ಅಯ್ಯಪ್ಪ ಸೇವಾ ಸಮಾಜದಿಂದ ಆತಿಥ್ಯ ನೀಡಿದ್ದರು.
ಅಯ್ಯಪ್ಪನÀ ಅಪೂರ್ವ ಪ್ರಯಾಣವನ್ನು ಗಮನಿಸಿದ ಭಕ್ತರು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡ ನಂತರ, ಅನೇಕ ಜನರು ದೇವಾಲಯಗಳು ಮತ್ತು ರಸ್ತೆ ಬದಿಗಳಲ್ಲಿ ಆಹಾರ ಮತ್ತು ವಿಶ್ರಾಂತಿಗೆ ವ್ಯವಸ್ಥೆಗೊಳಿಸಿದ್ದರು.
ಈ ನಡುವೆ ರಾಜಸ್ಥಾನದ ಕೋಟಾ ಸಮೀಪದ ನವಾಯಿ ಎಂಬಲ್ಲಿನ ಮಲೆಯಾಳಿ ಸದಾಶಿವನ್ ನಾಯರ್ ಸ್ವಾಮಿಗಳ ಪ್ರಯಾಣವನ್ನು ಗಮನಿಸಿ ಅಯ್ಯಪ್ಪನವರನ್ನು ಭೇಟಿ ಮಾಡಿ ಪರಿಚಯ ಮಾಡಿಕೊಂಡರು. ಅವರನ್ನು ತನ್ನ ಮನೆಗೆ ಕರೆದೊಯ್ದು ಮಧ್ಯಾಹ್ನದ ಊಟ ಮತ್ತು ಲೂಧಿಯಾನದ ಅಯ್ಯಪ್ಪ ದೇವಸ್ಥಾನದ ಆಡಳಿತ ಸಮಿತಿಯಿಂದ ಪರಿಚಯಿಸುವ ಪತ್ರವನ್ನು ಸಿದ್ಧಪಡಿಸಿದ ನಂತರ ಕಳುಹಿಸಿದ್ದರು.
ಅವರು ಕಾಶ್ಮೀರ, ಹರಿಯಾಣ, ಪಂಜಾಬ್, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕ ಸೇರಿದಂತೆ ಎಂಟು ರಾಜ್ಯಗಳ ಮೂಲಕ ಶಬರಿಮಲೆ ತಲುಪಿದರು. 101 ದಿನಗಳ ಕಾಲ್ನಡಿಗೆಯ ಬಳಿಕ ಬುಧವಾರ ಪಂಪಾ ತಲುಪಿದ ಅಯ್ಯಪ್ಪ ಭಕ್ತರನ್ನು ಪಂಪಾ ಗಣಪತಿ ದೇವಸ್ಥಾನದಲ್ಲಿ ಅರ್ಚಕರು ಮಾಲೆ ಹಾಕಿ ಬರಮಾಡಿಕೊಂಡರು. ಬೆಟ್ಟ ಹತ್ತಿ 18ನೇ ಮೆಟ್ಟಿಲು ಹತ್ತಿ ಅಯ್ಯಪ್ಪ ಸ್ವಾಮಿಯನ್ನು ಕಣ್ತುಂಬಿಕೊಂಡು ದರ್ಶನ ಪಡೆದು ಇಬ್ಬರೂ ಅಧ್ಯಾತ್ಮಿಕ ಸಾರ್ಥಕತೆಯೊಂದಿಗೆ ಮರಳಿದರು.
ಎಂಟು ರಾಜ್ಯಗಳು, ನಾಲ್ಕು ಸಾವಿರ ಕಿಲೋಮೀಟರ್: ಕಾಸರಗೋಡಿನ ಅಯ್ಯಪ್ಪ ಭಕ್ತರ ಅಪೂರ್ವ ಸಾಧನೆ: ಕಾಶ್ಮೀರದಿಂದ ಕಾಲ್ನಡಿಗೆಯಲ್ಲಿ ಶಬರಿಮಲೆಗೆ
0
April 13, 2023