ಕಾಸರಗೋಡು: ಸಿವಿಲ್ಸ್ಟೇಶನ್ ವಠಾರದಲ್ಲಿ ಕಾರ್ಯಾಚರಿಸುತ್ತಿರುವ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಗೆ ವಿಜಿಲೆನ್ಸ್ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಏಜೆಂಟ್ಗಳು ಅನಧಿಕ್ರತವಾಗಿ ಸಂಗ್ರಹಿಸಿಟ್ಟುಕೊಂಡಿದ್ದ 9850ರೂ. ನಗದು ವಶಪಡಿಸಿಕೊಂಡಿದ್ದಾರೆ. ಕಚೇರಿ ಸಇಬ್ಬಂದಿಗೆ ಲಂಚ ನೀಡಲು ಈ ಹಣ ತಂದಿರಬೇಕೆಂದು ಸಂಶಯಿಸಲಾಗಿದೆ. ಡ್ರೈವಿಂಗ್ ತರಬೇತಿಯೊಂದಿಗೆ ಪರೀಕ್ಷೆ ನಡೆಸಿ ಪರವಾನಗಿ ಪಡೆಯಲು, ವಾಹನಗಳ ವಿವಿಧ ಸರ್ಟಿಫಿಕೇಟ್ ಸೇರಿದಂತೆ ಕಚೇರಿಯ ವಿವಿಧ ಸಏವೆಗಳಿಗಾಗಿ ಕಚೇರಿಯ ಕೆಲವು ಸಿಬ್ಬಂದಿ ಏಜೆಂಟ್ ಮೂಲಕ ಹಣ ಪಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು. ವಿಜಿಲೆನ್ಸ್ ಎಸ್.ಐ ಕೆ. ರಾಧಾಕೃಷ್ಣನ್ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿದೆ.