ಕಾಸರಗೋಡು: ಜಲಾಶಯ ಹಾಗೂ ಇತರ ಜಲಮೂಲಗಳಿಗೆ ತ್ಯಾಜ್ಯ ಸುರಿಯವುದನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಪ್ರತ್ಯೇಕ ಗ್ರಾಮ ಪಂಚಾಯಿತಿ ಹಾಗೂ ನಗರಸಭಾ ಮಟ್ಟದಲ್ಲಿ ಪ್ರತ್ಯೇಕ ರಚಿಸಲು ಜಿಲ್ಲಾ ಸಮನ್ವಯ ಸಮಿತಿ ಸಭೆ ತೀರ್ಮಾಣಿಸಿದೆ.
ಪಂಚಾಯಿತಿ ಇಲಾಖೆ ಜಂಟಿ ನಿರ್ದೇಶಕ ಜೇಸನ್ ಮ್ಯಾಥ್ಯೂ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸಾರ್ವಜನಿಕ ಸ್ಥಳಗಳ ಸ್ವಚ್ಛತೆಯನ್ನು ಸಕಾಲದಲ್ಲಿ ಪೂರ್ಣಗೊಳಿಸುವಂತೆ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಸೂಚಿಸಲಾಗಿದ್ದು, ಜಿಲ್ಲೆಯಲ್ಲಿನ ಎಂಸಿಎಫ್ಗಳ ಸ್ಥಿತಿ ವಿಶ್ಲೇಷಣೆ ನಡೆಸಲಾಗಿದೆ. ಇವೆಲ್ಲದರ ಲೆಕ್ಕಪರಿಶೋಧನೆಯನ್ನು ತಕ್ಷಣ ಪೂರ್ಣಗೊಳಿಸಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನವಕೇರಾಳ ಮಿಷನ್ ಕಛೇರಿಯಲ್ಲಿ ನಡೆದ ಸಭೆಯಲ್ಲಿ ನವಕೇರಳಂ ಕ್ರಿಯಾ ಯೋಜನೆಯ ಜಿಲ್ಲಾ ಸಂಯೋಜಕ ಕೆ. ಬಾಲಕೃಷ್ಣ ವರದಿ ಮಂಡಿಸಿದರು. ಉಪ ಯೋಜನಾಧಿಕಾರಿ ನಿನೋಜ್ ಮೇಪಡಿಯಾತ್, ಶುಚಿತ್ವ ಮಿಷನ್ ಜಿಲ್ಲಾ ಸಂಯೋಜಕ ಎಂ. ಲಕ್ಷ್ಮಿ, ಎಂಜಿಎನ್ಆರ್ಇಜಿ ಜಿಲ್ಲಾ ಕಾರ್ಯಕ್ರಮ ಸಂಯೋಜಕ ಕೆ. ಪ್ರದೀಪನ್, ಮಾಲಿನ್ಯ ನಿಯಂತ್ರಣ ಮಂಡಳಿ ಎಂಜಿನಿಯರ್ ಹರಿಕೃಷ್ಣನ್, ಕ್ಲೀನ್ ಕೇರಳ ಕಂಪನಿ ಜಿಲ್ಲಾ ಸಂಯೋಜಕ ಮಿಥುನ್ ಗೋಪಿ, ಕುಟುಂಬಶ್ರೀ ಮಿಷನ್ ಜಿಲ್ಲಾ ಸಂಯೋಜಕ ಸಿ.ಎಚ್. ಇಕ್ಬಾಲ್, ಎಲ್ಎಸ್ಜಿಡಿ ಎಂಜಿನಿಯರ್ ವೈಶಾಖ್ ಬಾಲನ್, ಕೆಎಸ್ಡಬ್ಲ್ಯೂಎಂಪಿ ವ್ಯವಸ್ಥಾಪಕ ಮಿಥುನ್ ಕೃಷ್ಣನ್, ಬಿಜು ಮತ್ತು ಮೃದುಲ್ ಮಾತನಾಡಿದರು.
ಜಲಮೂಲಗಳಿಗೆ ತ್ಯಾಜ್ಯ: ಸ್ಥಳೀಯಾಡಳಿತ ಸಂಸ್ಥೆಗಳ ಮೂಲಕ ವಿಶೇಷ ತಂಡಗಳಿಂದ ನಿಗಾ
0
April 06, 2023