HEALTH TIPS

ಎಸ್.ಎಸ್.ಎಲ್.ಸಿ ಪರೀಕ್ಷೆ ಮುಗಿದು ನೇರವಾಗಿ ಊಟಿಗೆ ತೆರಳುಮ ಮಧ್ಯೆ ದಾರಿತಪ್ಪಿ ಕಣ್ಣೂರಿಗೆ: ಹುಡುಗಿಯರೂ ಸೇರಿ ಐವರ ಗುಂಪು ಪೋಲೀಸ್ ವಶಕ್ಕೆ


            ಚಾತನೂರು: ಎಸ್ ಎಸ್ ಎಲ್ ಸಿ ಪರೀಕ್ಷೆ ಮುಗಿಸಿ ಊಟಿಗೆ ತೆರಳಿದ್ದ ಐವರು ವಿದ್ಯಾರ್ಥಿಗಳ ಗುಂಪು ದಾರಿತಪ್ಪಿ ಸಿಲುಕಿಕೊಂಡ ಘಟನೆ ನಡೆದಿದೆ.  
          ವಿದ್ಯಾರ್ಥಿಗಳು ಕಣ್ಣೂರು ರೈಲ್ವೆ ಪೆÇಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಕಳೆದ ಬುಧವಾರ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮುಗಿದ ನಂತರ ಹುಡುಗಿಯರು ಸೇರಿದಂತೆ ಐವರು ಸದಸ್ಯರ ಗುಂಪು ಸಮವಸ್ತ್ರ ಬದಲಾಯಿಸಿಕೊಂಡು ಕೊಲ್ಲಂ ರೈಲು ನಿಲ್ದಾಣಕ್ಕೆ ಬಂದಿತ್ತು. ನಂತರ ಊಟಿಗೆ ಹೋಗುವ ಉದ್ದೇಶವಿತ್ತು. ಆದರೆ ಯಾವ ರೈಲಿನಲ್ಲಿ ಹೋಗಬೇಕೆಂದು ತಿಳಿಯದ ಕಾರಣ ನಿಜಾಮುದ್ದೀನ್ ಎಕ್ಸ್ ಪ್ರೆಸ್ ನಲ್ಲಿ ಕಣ್ಣೂರಿಗೆ ಟಿಕೆಟ್ ತೆಗೆದುಕೊಂಡರು.
          ಬಾಲಕಿಯರು ಸೇರಿದಂತೆ ಐವರು ಸದಸ್ಯರ ಕೈಯಲ್ಲಿ ಒಟ್ಟು 2500 ರೂ. ಮಾತ್ರ ಹಣವಿತ್ತು. ರಾತ್ರಿ 11.30ರ ಸುಮಾರಿಗೆ ರೈಲು ಕಣ್ಣೂರು ರೈಲು ನಿಲ್ದಾಣ ತಲುಪಿದರೂ ಅವರು ಹೊರಗೆ ಇಳಿದಿರಲಿಲ್ಲ. ನಂತರ ರೈಲು ಹೊರಡುವ ಮುನ್ನವೇ ಚಾತನೂರು ಸಿಐ ಶಿವಕುಮಾರ್ ಅವರಿಗೆ ದೂರವಾಣಿ ಮೂಲಕ ಆದೇಶ ಬಂದಾಗ ರೈಲ್ವೇ ಪೆÇಲೀಸರು ವಿದ್ಯಾರ್ಥಿಗಳನ್ನು ರೈಲಿನಿಂದ ಬಂಧಿಸಿದ್ದಾರೆ. ಅವರನ್ನು ಚಾತನೂರು ಪೆÇಲೀಸರಿಗೆ ಒಪ್ಪಿಸಲಾಗಿದೆ. ಬಳಿಕ ಪರವೂರು ನ್ಯಾಯಾಲಯಕ್ಕೆ ಹಾಜರುಪಡಿಸಿ, ಇಬ್ಬರು ಬಾಲಕಿಯರು ಹಾಗೂ ಓರ್ವ ಬಾಲಕನನ್ನು ಪೋಷಕರೊಂದಿಗೆ ಬಿಡುಗಡೆಗೊಳಿಸಲಾಯಿತು. ಉಳಿದ ಇಬ್ಬರನ್ನು ಕೌನ್ಸೆಲಿಂಗ್‍ಗೆ ಒಳಪಡಿಸಲಾಗಿದೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries