HEALTH TIPS

ಪೂಜೆ ಮುಗಿಸಿ ತಡವಾದರೂ ಕಚೇರಿಗೆ ಬನ್ನಿ: ಮಹಿಳಾ ಸಿಬ್ಬಂದಿಗೆ ಪುದುಚೇರಿ ಸರ್ಕಾರ ಅನುಮತಿ

                  ಪುದುಚೇರಿ: ಮನೆಯಲ್ಲಿ ಪೂಜೆ ಮುಗಿಸಿ, ಎರಡು ತಾಸು ತಡವಾಗಿ ಕಚೇರಿಗೆ ಬರುವ ವಿಶೇಷ ಅನುಕೂಲವನ್ನು ಲೆಫ್ಟಿನೆಂಟ್‌ ಗವರ್ನರ್‌ ಡಾ. ತಮಿಳುಸಾಯಿ ಸೌಂದರರಾಜನ್‌ ಅವರು ಸರ್ಕಾರಿ ಮಹಿಳಾ ಸಿಬ್ಬಂದಿಗೆ ಮಾಡಿಕೊಟ್ಟಿದ್ದಾರೆ. ಈಗ ಮಹಿಳೆಯರು ಬೆಳಿಗ್ಗೆ 8.45ರ ಬದಲಿಗೆ 10.45ಕ್ಕೆ ಕಚೇರಿಗೆ ಬರಬಹುದಾಗಿದೆ.

              ತಿಂಗಳ ಮೂರು ಶುಕ್ರವಾರಗಳಲ್ಲಿ ಮಾತ್ರವೇ ಈ ಅನುಕೂಲ ಮಾಡಿಕೊಡಲಾಗಿದೆ. ಜೊತೆಗೆ, ಪೊಲೀಸ್ ಇಲಾಖೆ, ಶಿಕ್ಷಣ ಸಂಸ್ಥೆ ಹಾಗೂ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಈ ಅನುಕೂಲ ಇಲ್ಲ. ಈ ಬಗ್ಗೆ ಲೆಫ್ಟಿನೆಂಟ್‌ ಗವರ್ನರ್‌ ಕಚೇರಿಯು ಶುಕ್ರವಾರ ಹೇಳಿಕೆ ಬಿಡುಗಡೆ ಮಾಡಿದೆ.

                 ಕೇವಲ ಮಹಿಳೆಯರು ಕಾರ್ಯನಿರ್ವಹಿಸುವ ಕಚೇರಿಗಳಲ್ಲಿ ಪಾಳಿ ಪ್ರಕಾರವಾಗಿ ಈ ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿಸಲಾಗಿದೆ.

                'ಮನೆಯಲ್ಲಿ ಪೂಜೆ ಮುಗಿಸಿ, ಕಚೇರಿಗೆ ಸಮಯಕ್ಕೆ ಸರಿಯಾಗಿ ಬರಲು ಮಹಿಳೆಯರು ಹರಸಾಹಸ ಪಡುತ್ತಿದ್ದಾರೆ. ಇದನ್ನು ತಪ್ಪಿಸಿ, ಭಕ್ತಿಯಿಂದ ಪೂಜೆ ಮುಗಿಸಿ, ಕಚೇರಿಗೆ ಎರಡು ತಾಸು ತಡವಾಗಿ ಬರುವಂತೆ ಅನುಕೂಲ ಮಾಡಿಕೊಡಲಾಗುವುದು' ಎಂದು ಮುಖ್ಯಮಂತ್ರಿ ಎನ್‌. ರಂಗಸ್ವಾಮಿ ಅವರು ಗುರುವಾರ ಹೇಳಿದ್ದರು.

                  'ಮಹಿಳೆಯರು ಪೂಜೆ ಮುಗಿಸಿ ಕಚೇರಿಗೆ ತಡವಾಗಿ ಬರಲು ಅನುಮತಿ ನೀಡಬೇಕು ಎಂದು ಕೋರಿ ಸಿಬ್ಬಂದಿ ಮತ್ತು ಆಡಳಿತಾತ್ಮಕ ವ್ಯವಹಾರಗಳ ಸಚಿವಾಲಯವು ಲೆಫ್ಟಿನೆಂಟ್‌ ಗವರ್ನರ್‌ ಕಚೇರಿಗೆ ಪತ್ರ ಕಳುಹಿಸಿತ್ತು. ಇದಕ್ಕೆ ಲೆಫ್ಟಿನೆಂಟ್‌ ಗವರ್ನರ್‌ ಅವರು ಶುಕ್ರವಾರ ಹಸಿರು ನಿಶಾನೆ ತೋರಿದ್ದಾರೆ' ಎಂದು ಮೂಲಗಳು ತಿಳಿಸಿವೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries