ಬದಿಯಡ್ಕ: ಬದಿಯಡ್ಕ ಗ್ರಾಮಪಂಚಾಯಿತಿ ಹಸಿರು ಕ್ರಿಯಾಸೇನೆÉ, ಕುಟುಂಬಶ್ರೀ, ಉದ್ಯೋಗ ಖಾತರಿ ಯೋಜನೆ ಹಾಗೂ ವಿವಿಧ ಸಂಘಟನೆಗಳೊಂದಿಗೆ ಬದಿಯಡ್ಕ ಪೇಟೆ ಶುಚಿಗೊಳಿಸಲಾಯಿತು. ಗ್ರಾಮಪಂಚಾಯಿತಿ ಅಧ್ಯಕ್ಷೆ ಶಾಂತಾ ಬಿ. ಉದ್ಘಾಟಿಸಿ ಮಾತನಾಡಿ, ನಾಡಿನ ಜನತೆಯ ನಿರಂತರ ಸಹಕಾರವಿದ್ದರೆ ನಮ್ಮ ಪೇಟೆಯನ್ನು ಮಾಲಿನ್ಯಮುಕ್ತಗೊಳಿಸಬಹುದಾಗಿದೆ. ಪ್ಲಾಸ್ಟಿಕ್ ಬಾಟಲಿಗಳು, ಬ್ಯಾಗ್ಗಳು ನಮ್ಮ ನಾಡನ್ನು ವಿಶಮುಕ್ತಗೊಳಿಸುತ್ತದೆ. ಇದರ ನಿರ್ಮೂಲನೆಗೆ ಎಲ್ಲರೂ ಪಣತೊಡಬೇಕು ಎಂದು ಅವರು ಕರೆಯಿತ್ತರು.
ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿಸಮಿತಿ ಸದಸ್ಯೆ ರಶೀದಾ, ಸದಸ್ಯರುಗಳಾದ ಬಾಲಕೃಷ್ಣ ಶೆಟ್ಟಿ ಕಡಾರು, ಅಬ್ದುಲ್ ರಹಿಮಾನ್, ಈಶ್ವರ ನಾಯ್ಕ್ ಪೆರಡಾಲ, ಗ್ರಾಪಂ ಕಾರ್ಯದರ್ಶಿ ರಾಜೇಂದ್ರನ್, ಸಹಾಯಕ ಕಾರ್ಯದರ್ಶಿ ಪುಷ್ಪರಾಜ್, ಸಿಡಿಎಸ್ ಅಧ್ಯಕ್ಷೆ ಅನಿತಾ, ಹಮೀದ್ ಕೆಡೆಂಜಿ, ಲತೀಫ್, ಆರೋಗ್ಯ ಇಲಾಖೆಯ ಸಾಕಿರ್, ಬಾಬು, ಓಕ್ಸಿಜನ್ ಬದಿಯಡ್ಕ, ಸ್ನೇಹಾಲಯ ಕ್ಲಬ್ ಸದಸ್ಯರು, ಹಸಿರು ಕ್ರಿಯಾಸೇನೆÉ, ಕುಟುಂಬಶ್ರೀ ಹಾಗೂ ಉದ್ಯೋಗಖಾತರಿಯ ಸದಸ್ಯರು ಶುಚೀಕರಣದಲ್ಲಿ ಪಾಲ್ಗೊಂಡಿದ್ದರು. ಗ್ರಾಮಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಎಂ. ಸ್ವಾಗತಿಸಿದರು.