ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸಭೆ, ವಿಜ್ಞಾಪನಾ ಪತ್ರ ಬಿಡುಗಡೆ, ಜೀರ್ಣೋದ್ಧಾರ ನಿಧಿಕೂಪನ್ ಬಿಡುಗಡೆ ಸಮಾರಂಭ ಮತ್ತು ಲೋಕ ಕಲ್ಯಾಣರ್ಥವಾಗಿ ಶತರುದ್ರಾಭಿಷೇಕ, ಸತ್ಯನಾರಾಯಣ ಪೂಜೆ ಬಲಿವಾಡ ಕೂಟ, ಸಾಮೂಹಿಕ ಪ್ರಾರ್ಥನೆ, ದುರ್ಗಾಪೂಜೆ ಮೇ.1 ರಂದು ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದು ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. ಆಡಳಿತ ಮಂಡಳಿಯ ಅಧ್ಯಕ್ಷ ನ್ಯಾಯವಾದಿ. ವೆಂಕಟರಮಣ ಭಟ್ ಚಂಬಲ್ತಿಮ್ಮಾರ್, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಪಿ.ಜಿ. ಜಗನ್ನಾಥ ರೈ, ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಪೆರಡಾಲ, ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಸೂರ್ಯನಾರಾಯಣ ಬಿ, ಸದಸ್ಯ ರಾಮ ಮುರಿಯಂಕೂಡ್ಲು ಮೊದಲಾದವರಿದ್ದರು.
ವಿಜ್ಞಾಪನ ಪತ್ರವನ್ನು ಮುಂಬೈ ಉದ್ಯಮಿ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಬಿಡುಗಡೆಗೊಳಿಸುವರು. ನಿಧಿ ಕೂಪನ್ ನ್ನು ಮುಂಡಪ್ಪಳ್ಳ ಶ್ರೀ ರಾಜರಾಜೇಶ್ವರಿ ಕ್ಷೇತ್ರದ ಆಡಳಿತ ಮೊಕ್ತೇಸರ ಕೆ.ಕೆ. ಶೆಟ್ಟಿ ಬಿಡುಗಡೆಗೊಳಿಸುವರು. ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಅವರು ಆಶೀರ್ವಚನ ನೀಡುವರು. ಕ್ಷೇತ್ರದ ತಂತ್ರಿವರ್ಯರಾದ ರವೀಶ ತಂತ್ರಿ ಕುಂಟಾರು, ವಿವಿಧ ರಾಜಕೀಯ ಸಾಂಸ್ಕøತಿಕ ಧಾರ್ಮಿಕ ಮುಂದಾಳುಗಳು ಉಪಸ್ಥಿತರಿರುವರು.
ಪೆರಡಾಲ ಶ್ರೀಕ್ಷೇತ್ರ ಜೀರ್ಣೋದ್ದಾರ ಪ್ರಕ್ರಿಯೆ ಕಾರ್ಯಕ್ರಮ: ಎಡನೀರು ಶ್ರೀಗಳಿಗೆ ಆಹ್ವಾನ
0
April 11, 2023
Tags