ಕುಂಬಳೆ: ಅನಂತರಪುರದ ಅಸಹನೀಯವಾದ ಮಲಿನೀಕರಣದ ವಿರುದ್ಧ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ಸ್ಥಳೀಯರು ಕೈಗಾರಿಕೆ ಕೇಂದ್ರದ ರಸ್ತೆ ದಿಗ್ಧಂಧನ ಮುಷ್ಕರ ನಡೆಸಿದರು.
ಅನಂತಪುರ ಕೈಗಾರಿಕಾ ಕೇಂದ್ರದ ಒಂದು ಫ್ಯಾಕ್ಟರಿಯಲ್ಲಿ ಕೋಳಿ ತ್ಯಾಜ್ಯ, ಕಸಾಯಿಖಾನೆಯ ತ್ಯಾಜ್ಯವನ್ನು ಸಂಗ್ರಹಿಸಿ ಸಂಸ್ಕರಣೆ ನಡೆಸುತ್ತಿರುವುದರಿಂದಾಗಿ ಪರಿಸರದಲ್ಲಿ ಅಸಹನೀಯ ದುರ್ವಾಸನೆ, ಮಲಿನ ನೀರು ಹರಿಯುತ್ತಿದ್ದು, ಸ್ಥಳೀಯರಿಗೆ ಸಂಕಷ್ಟ ತ0ದಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಕ್ರಿಯಾ ಸಮಿತಿ ನೇತೃತ್ವದಲ್ಲಿ ಮುಷ್ಕರ ನಡೆಸಿತು.
ರಸ್ತೆ ದಿಗ್ಧಂಧನ ಮುಷ್ಕರದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಮಂದಿ ಭಾಗವಹಿಸಿದರು. ಪುತ್ತಿಗೆ ಪಂ. ಅಧ್ಯಕ್ಷ ಡಿ. ಸುಬ್ಬಣ್ಣ ಆಳ್ವ, ಕಣ್ಣೂರು ವಾರ್ಡಿನ ಸದಸ್ಯ ಜನಾರ್ದನ ಪೂಜಾರಿ, ಸುನಿಲ್ ಅನಂತಪುರ, ಶರೀಫ್, ಕೃಷ್ಣ ಆಳ್ವ, ನಿರುಪಮಾ ಮೊದಲಾದವರು ಭಾಗವಹಿಸಿದರು. ಮಲಿನೀಕರಣ ತಡೆಯದಿದ್ದರೆ ಆಂದೋಲನವನ್ನು ತೀವ್ರಗೊಳಿಸು ವುದಾಗಿ ಕ್ರಿಯಾ ಸಮಿತಿ ತಿಳಿಸಿದೆ. ಕ್ರಿಯಾ ಸಮಿತಿ ನಡೆಸಿದ ಧಿಗ್ಭಂದನೆ ಸಂಜೆಯ ವರೆಗೆ ನಡೆಯಿತು.