ಮಧೂರು : 'ಮಳೆಯನ್ನು ಮಲಿನಗೊಳಿಸದೆ ಸ್ವಾಗತಿಸೋಣ'ಘೋಷಣೆಯೊಂದಿಗೆ ಮಧೂರು ಗ್ರಾಮ ಪಂಚಾಯಿತಿ ವತಿಯಿಂದ ಮಳೆಗಾಲಪೂರ್ವ ಶುಚೀಕರಣ, ರಸ್ತೆ ಬದಿಯ ತ್ಯಾಜ್ಯ ವಿಲೇವಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಮಧೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಅಧ್ಯಕ್ಷ ಕೆ. ಗೋಪಾಲಕೃಷ್ಣ ಶುಚೀಕರಣ ಕಾರ್ಯ ನಡೆಸುವ ಮೂಲಕ ಉದ್ಘಾಟಿಸಿದರು. ಉಪಾಧ್ಯಕ್ಷೆ ಸ್ಮಿಜಾ ವಿನೋದ್, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ್ ಗಟ್ಟಿ, ಬ್ಲಾಕ್ ಪಂಚಾಯಿತಿ ಸದಸ್ಯ ಸುಕುಮಾರ ಕುದುರೆಪಾಡಿ, ಗ್ರಾಮ ಪಂಚಾಯಿತಿ ಸದಸ್ಯರಾದ ಕೆ. ಅಂಬಿಲಿ, ಹಬೀಬ್ ಚೆಟ್ಟುಂಗುಯಿ, ಪಂಚಾಯಿತಿ ಆರೋಗ್ಯ ಇಲಾಖೆ ಎಚ್.ಐ. ರಾಬಿನ್, ವಿಇಒ ಪಿ.ಸುಶ್ಮಿತಾ, ಪೀಠಾಂಬರ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಪಿ.ಪೀತಾಂಬರನ್ ಚೆರಿಪಾಡಿ, ಜೆಎಚ್ಐ ಸಿ.ಕೆ.ರಾಮಚಂದ್ರನ್, ಜಮ್ಸೀಲ್, ಪಂಚಾಯಿತಿ ನೌಕರರು, ಕುಂಬಶ್ರೀ ಸದಸ್ಯರು, ಹಸಿರು ಕ್ರಿಯಾ ಸೇನೆ ಸದಸ್ಯರು ಹಾಗೂ ನಿತ್ಯ ಕಾರ್ಯಕರ್ತರು ಉಪಸ್ಥಿತರಿದ್ದರು.
ಮಧೂರು ಗ್ರಾಪಂ: ಮಳೆಗಾಲಪೂರ್ವ ಶುಚೀಕರಣ ಕಾರ್ಯಕ್ಕೆ ಚಾಲನೆ
0
April 06, 2023
Tags